Vastu Tips: ಒಂದು ಬೆಳ್ಳುಳ್ಳಿ ಇಂದ ನಿಮ್ಮ ಮನೆಯಲ್ಲಿ ಹಣವನ್ನು ತುಂಬಿ ತುಳುಕುವಂತೆ ಮಾಡುವುದು ಹೇಗೆ ಗೊತ್ತೇ? ಎಲ್ಲ ಮಂತ್ರಕ್ಕಿಂತ ಇದೆ ಬೆಸ್ಟ್!

Vastu Tips: ಸಾಮಾನ್ಯವಾಗಿ ನಮ್ಮ ಅಡುಗೆ ಮನೆ (Kitchen) ಯಲ್ಲಿ ಬೆಳ್ಳುಳ್ಳಿ (Garlic) ಇದ್ದೇ ಇರುತ್ತದೆ. ಅದು ಇಲ್ಲದೆ, ಆಹಾರದ ರುಚಿ ಅಪೂರ್ಣ ಎಂದೇ ಹೇಳಬಹುದು. ಆದರೆ ಈ ಬೆಳ್ಳುಳ್ಳಿ ನಿಮ್ಮ ಆಹಾರ (Food) ದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಅದೃಷ್ಟವನ್ನು ಕೂಡ ಉಜ್ವಲಗೊಳಿಸುತ್ತದೆ ಎಂಬುದು ನಿಮಗೆ ಗೊತ್ತೇ? ವಾಸ್ತವವಾಗಿ, ಜ್ಯೋತಿಷ್ಯ (Astorology) ದ ಪ್ರಕಾರ, ಅಡುಗೆಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದು ಮಸಾಲೆಯು ಒಂದಲ್ಲಾ ಒಂದು ಗ್ರಹಕ್ಕೆ ಸಂಬಂಧಿಸಿದೆ. ನೀವು ಈ ಮಸಾಲೆಗಳನ್ನು ಹೇಗೆ ಬಳಸುತ್ತೀರಿ ಎಂಬುದು ಗ್ರಹದ ದಿಕ್ಕನ್ನು ನಿರ್ಧರಿಸುತ್ತದೆ. ಇದನ್ನೂ ಓದಿ: Siddheshwara Shree:2014 ರಲ್ಲಿಯೇ ಎಲ್ಲವನ್ನು ವಿವರಿಸಿ ವಿಲ್ ಬರೆದಿಟ್ಟಿದ್ದ ಶ್ರೀ ಗಳು; ಅಂದು ವಿಲ್ ನಲ್ಲಿ ಬರೆದಿದ್ದನು ಏನು ಗೊತ್ತೇ??

ಬೆಳ್ಳುಳ್ಳಿ ಯಾವ ಗ್ರಹಕ್ಕೆ ಸಂಬಂಧಿಸಿದೆ ಗೊತ್ತಾ?

ಬೆಳ್ಳುಳ್ಳಿ ರಾಹು ಗ್ರಹಕ್ಕೆ ಸಂಬಂಧಿಸಿದ್ದು ಎಂದು ಹೇಳುತ್ತೆ ಜ್ಯೋತಿಷ್ಯ ಶಾಸ್ತ್ರ. ನಿಮ್ಮ ಜಾತಕದಲ್ಲಿ ರಾಹುವನ್ನು ಬಲಪಡಿಸಲು, ಬೆಳ್ಳುಳ್ಳಿ ಬಳಸಬಹುದು. ಶನಿವಾರದಂದು ಬೆಳ್ಳುಳ್ಳಿಗೆ ಸಂಬಂಧಿಸಿದ ಕೆಲವು ವಿಶೇಷ ಕೆಲಸಗಳನ್ನ ನೀವು ಮಾಡಬೇಕಾಗುತ್ತದೆ. ಇದರಿಂದ, ನಿಮ್ಮ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತದೆ.  ನೀವು ಜೀವನದಲ್ಲಿ ಬೇಗ ಪ್ರಗತಿ ಹೊಂದುವಿರಿ. ನಿಮ್ಮ ಗುರಿಯನ್ನು ಮುಟ್ಟಲು ಎದುರಾಗುವ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಇದರ ಹೊರತಾಗಿ, ನೀವು ಇದರಿಂದ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಯಾವವು ಬನ್ನಿ ನೋಡೋಣ. ಇದನ್ನೂ ಓದಿ:Ayushman Card: 5 ಲಕ್ಷದವರೆಗೂ ಉಚಿತ ಚಿಕಿತ್ಸೆ ನೀಡುವ ಆಯುಷ್ಮನ್ ಕಾರ್ಡ್ ಗಾಗಿ ಹೇಗೆ ಅಪ್ಲೈ ಮಾಡುವುದು ಗೊತ್ತೇ?? ಸುಲಭವಾಗಿ ಪಡೆಯಿರಿ ಆಯುಷ್ಮನ್!

ಬೆಳ್ಳುಳ್ಳಿ ಉಪಯೋಗದ ಟಿಪ್ಸ್ (Benefits fi garlic):

ಶನಿವಾರ (Saturday) ನೀವು ಬೆಳ್ಳುಳ್ಳಿ ಗಡ್ಡೆ/ ಎಸಳನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಹಾಗೆಯೇ, ನಿಮ್ಮ ಪರ್ಸ್‌ನಲ್ಲಿ ಹಣದ ಒಳಹರಿವು ಹೆಚ್ಚಾಗುತ್ತದೆ. ಜೊತೆಗೆ ಖರ್ಚು ಕಡಿಮೆಯಾಗುತ್ತದೆ. ಹಣ ಸಂಪಾದನೆಗೆ ಹೊಸ ಮಾರ್ಗಗಳು ಕೂಡ ಸಿಗುತ್ತವೆ. ಇದನ್ನೂ ಓದಿ:An affair gone very wrong ends:ಪರ ಮಹಿಳೆ ಜೊತೆ ಓಡಿ ಹೋಗಿ ಜೀವನ ಸಾಗಿಸಲು ಮುದುಕ ಮಾಡಿದ ಪ್ಲಾನ್ ಕೇಳಿದರೆ ದಂಗಾಗ್ತೀರಾ. ಸ್ನೇಹಿತನಿಗೆ ಏನು ಮಾಡಿದ್ದಾನೆ ಗೊತ್ತೇ??

ನಿಮ್ಮ ಮನೆಯಲ್ಲಿ ಜಗಳ ಜಾಸ್ತಿ ಆಗಿದ್ದರೆ ಶನಿವಾರದಂದು ಬೆಳ್ಳುಳ್ಳಿಯ ಈ ಪರಿಹಾರವನ್ನು ಮಾಡಿ. ಬೆಳ್ಳುಳ್ಳಿಯ 7 ಎಸಳುಗಳನ್ನು ತೆಗೆದುಕೊಂಡು ಅವುಗಳನ್ನು ದಾರದಿಂದ ಕೋಲಿಗೆ ಕಟ್ಟಿ. ಅದನ್ನು ಮನೆಯ ಛಾವಣಿಯ ಮೇಲೆ ಇರಿಸಿ. ಕೆಲವೇ ದಿನಗಳಲ್ಲಿ ಮನೆಯಲ್ಲಿನ ಜಗಳ ಮನಸ್ತಾಪಗಳು ಕೊನೆಗೊಳ್ಳುತ್ತವೆ.

ಇನ್ನು ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗಬೇಕೇ? ಅಥವಾ ಕಚೇರಿಯಲ್ಲಿನ ಯಾವುದೇ ರೀತಿಯ ಸಮಸ್ಯೆಯಿಂದ ಮುಕ್ತಿ ಹೊಂದಬೇಕೇ?  ಈ ಪರಿಹಾರವನ್ನು ಮಾಡಿ. ಬೆಳ್ಳುಳ್ಳಿಯ 5 ಎಸಳುಗಳನ್ನು ತೆಗೆದುಕೊಳ್ಳಿ ಅದನ್ನು ನಿಮ್ಮ ಆಫೀಸ್ ಡೆಸ್ಕ್‌ನಲ್ಲಿ ಮರೆಮಾಚಿಡಿ. ಹೀಗೆ ಮಾಡುವುದರಿಂದ ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಕೂಡ ಮೀರಿ ನೀವು ಹೊರಬರಬಹುದು.

ಹಾಗೆಯೇ ನೀವು ವ್ಯಾಪಾರದಲ್ಲಿ ಲಾಭವನ್ನು ಗಳಿಸಲು ಬಯಸಿದರೆ, 5 ಬೆಳ್ಳುಳ್ಳಿಯ ಮೊಗ್ಗುಗಳನ್ನು/ ಎಸಳುಗಳನ್ನು ಹಳದಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ಗಲ್ಲಾಪೆಟ್ಟಿಗೆಯಲ್ಲಿ ಇಡಿ. ಇದರಿಂದ ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ವ್ಯಾಪಾರದಲ್ಲಿ ನಷ್ಟವೂ ಆಗುವುದಿಲ್ಲ.

ಇನ್ನು ನಿಮಗೆ ದೃಷ್ಟಿಯಾಗಿದ್ದರೆ, ಯಾರದ್ದಾದರೂ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದಿದ್ದರೆ, ಶನಿವಾರದಂದು ಇಡಿಯಾದ ಬೆಳ್ಳುಳ್ಳಿ ತೆಗೆದುಕೊಂಡು. ಅದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ. ಇದನ್ನು ರಾತ್ರಿಯಲ್ಲಿ ಆಲದ ಮರ (Peepal Tree)  ಕೆಳಗೆ ಹೂತುಹಾಕಿ. ನಂತರ ಹಿಂತಿರುಗಿ ನೋಡಬೇಡಿ. ಎಲ್ಲಾ ರೀತಿ ಮಾಡಿದರೆ ಕೆಟ್ಟ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ.

ಶನಿವಾರದಂದು ಎಳ್ಳಿನೊಂದಿಗೆ ಬೆಳ್ಳುಳ್ಳಿಯನ್ನು ದಾನ ಮಾಡಿ. ಇದರಿಂದ ರಾಹುವಿನ ದುಷ್ಟ ದೃಷ್ಟಿ ನಿವಾರಣೆಯಾಗುತ್ತದೆ. ನಿಮ್ಮ ಮನೆಯ ಸದಸ್ಯರು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಬೆಳ್ಳುಳ್ಳಿಯನ್ನು ಸಾಸಿವೆ ಎಣ್ಣೆಯಲ್ಲಿ ನೆನೆಸಿ ಮತ್ತು ಶನಿವಾರದಂದು ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸಿ. ಅನಾರೋಗ್ಯ ಮತ್ತು ನಕಾರಾತ್ಮಕ ಶಕ್ತಿಯು ನಿಮ್ಮ ಮನೆಯಿಂದ ದೂರವಿರುತ್ತದೆ.

Comments are closed.