Real Story: ಹಾಡಹಗಲೇ ಮನೆಗೆ ನುಗ್ಗಿ ಹುಡುಗಿಯನ್ನು ಮುಗಿಸಿದ ಕಿರಾತಕ: ಸಿಕ್ಕಿಬಿದ್ದ ನಂತರ ಕಾರಣ ಕೇಳಿದರೆ, ನಿಜಕ್ಕೂ ದಂಗಾಗ್ತೀರಾ!

Real Story: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಮನೆಯೊಂದರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಜಯಶ್ರೀ ಕೊಲೆಯಾದ ಯುವತಿ. ಈಕೆ ಕೊಲೆಯಾಗಿ ೨೪ ಗಂಟೆಯೊಳಗೆ ಸಂಪ್ಯಾ ಗ್ರಾಮಾಂತರ ಠಾಣೆ ಪೊಲೀಸರು ಕನಕಮಜಲು ಗ್ರಾಮದ ನಿವಾಸಿ ಉಮೇಶ ಎನ್ನುವವನನ್ನು ಬಂಧಿಸಿದ್ದಾರೆ. ನಂತರ ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿದ್ದಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ದಾನೆ.

ಜಯಶ್ರೀ ಹಾಗೂ ಉಮೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಉಮೇಶ್ ಜಯಶ್ರೀಯ ಮನೆಗೆ ಆಗಾಗ ಹೋಗಿ ಬರುತ್ತಿದ್ದ. ಮೊದಮೊದಲು ಎಲ್ಲವು ಸರಿಯಾಗಿತ್ತು. ಆದರೆ ಈ ಪ್ರೀತಿಗೆ ಯಾರ ಕಣ್ಣು ಬಿತ್ತೋ ಏನೋ ೨೦೨೨ರ ನವೆಂಬರ್ನಿಂದ ಜಯಶ್ರೀ ಉಮೇಶ್ನಿಂದ ದೂರ ಆಗಿದ್ದಳು. ಇದರಿಂದ ಕೋಪಗೊಂಡ ಉಮೇಶ್ ಜನವರಿ ೧೭ರಂದು ಹಾಡಹಗಲೇ ಆಕೆಯ ಮನೆಗೆ ನುಗ್ಗಿ ಆಕೆಯನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: kubera yantra pooja vidhanam:ನೀವು ಮನೆಯಲ್ಲಿ ಇದೊಂದು ಕೆಲಸ ಮಾಡಿದರೆ ಸಾಕು ಮತ್ತೆ ಯಾವತ್ತೂ ಹಣದ ಸಮಸ್ಯೆ ಬರುವುದೇ ಇಲ್ಲ, ಏನು ಮಾಡಬೇಕು ಗೊತ್ತೇ?

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡುರು ಕಂಪ ಮನೆಯಲ್ಲಿ ಯುವತಿ ಒಬ್ಬಳೆ ಇರುವುದನ್ನು ಖಚಿತಪಡಿಸಿಕೊಂಡ ಉಮೇಶ್ ಆಕೆಯ ಮನೆಗೆ ನುಗ್ಗಿದ್ದಾನೆ. ಇದರಿಂದ ಆಕೆ ಕಂಗಾಲಾಗಿದ್ದಾಳೆ. ಜಯಶ್ರೀ ಮೇಲೆ ಮೊದಲೇ ಕೋಪಗೊಂಡಿದ್ದ ಉಮೇಶ್ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಅಲ್ಲಿಂದ ತೆರಳಿದ್ದಾನೆ. ಇದನ್ನೂ ಓದಿ: Black Thread usage: ದೃಷ್ಟಿ ದೃಷ್ಟಿ ಎಂದು ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತೀರಾ? ಕಟ್ಟಿಕೊಳ್ಳುವ ಮುನ್ನ ಈ ವಿಷಯ ತಿಳಿದುಕೊಂಡು ಕಟ್ಟಿಕೊಳ್ಳಿ!

ಯುವತಿಯ ಕೊಲೆ ವಿಚಾರ ತಿಳಿದ ಕೂಡಲೇ ಸಂಪ್ಯಾ ಗ್ರಾಮಾಂತರ ಠಾಣೆ ಪೊಲೀಸರು ಶ್ವಾನ ದಳ, ಬೆರಳಚ್ಚು ತಜ್ಞರ ಜೊತೆ ಆಗಮಿಸಿ ತನಿಖೆ ಆರಂಭಿಸಿದ್ದರು. ಘಟನೆ ನಡೆದ ೨೪ ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

Comments are closed.