Real Story: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮರ್ಡರ್: ಬೆಂಗಳೂರಿನಲ್ಲಿ 19 ವರ್ಷದ ವಿದ್ಯಾರ್ಥಿಯ ಮರ್ಡರ್ ಆಗಿದ್ದು ಹೇಗೆ ಗೊತ್ತೇ?

Real Story: ಕೆಲವೊಮ್ಮೆ ಕೆಲವು ಅಪರಾಧಗಳು ನಡೆದುಹೋಗುತ್ತವೆ ಆದರೆ ಅದಕ್ಕೆ ಕಾರಣ ಮಾತ್ರ ತಿಳಿದಿರುವುದಿಲ್ಲ ಆ ಕಾರಣ ತಿಳಿಯುವುದಕ್ಕೆ ಸಾಕಷ್ಟು ಸಮಯ ಕೂಡ ಬೇಕಾಗುತ್ತದೆ ಆದರೆ ಅಷ್ಟರಲ್ಲಿ ಜೀವ ಕಳೆದುಕೊಂಡವರ ಮನೆಯವರ ನೋವು ಮಾತ್ರ ಹೇಳತೀರದು. ಇಂತಹ ಒಂದು ಘಟನೆ ನಡೆದಿರುವುದು ರಾಜನಕುಂಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ.

ಯಲಹಂಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಳು ರಾಶಿ ಆಕೆಗೆ ಕೇವಲ 19 ವರ್ಷ ವಯಸ್ಸು.  ರಾಶಿಯ ಮನೆ ಇರುವುದು ರಾಜನಕುಂಟೆಯ ಬಳಿ ಇರುವ ಶಾರುಭೋಗನ ಹಳ್ಳಿಯಲ್ಲಿ. ಆಕೆ ಎಂದಿನಂತೆ ನಿನ್ನೆಯು ಕೂಡ ಕಾಲೇಜಿನ ಮುಗಿಸಿಕೊಂಡು ಮನೆಗೆ ಹಿಂತಿರುಗಿದ್ದಾಳೆ. ಮನೆಗೆ ಬರುತ್ತಿದ್ದ ಹಾಗೆ ರಾಶಿಯ ತಾಯಿ ಸುಶೀಲಮ್ಮ ತೋಟದಲ್ಲಿ ಬಿಟ್ಟಿರುವ ಹಸುವನ್ನು ಕೊಟ್ಟಿಗೆಗೆ ಕರೆದುಕೊಂಡು ಬರುವಂತೆ ಹೇಳಿದಳು. ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇನ್ಮುಂದೆ ಇಲ್ಲಾ ಲಾಸ್ಟ್ ಡೇ ಟೆನ್ಶನ್; ಹಾದಾದ್ರೆ ಬಿಲ್ ಯಾವಾಗ ಕಟ್ಟಿದರೆ ಸಾಕು ಗೊತ್ತೇ? ಎಲ್ಲರಿಗೂ ಸಿಕ್ತಿ ಬಿಗ್ ರಿಲೀಫ್!

ರಾಶಿ ತಕ್ಷಣ ತಾಯಿ ಹೇಳಿದಂತೆ ತಮ್ಮ ಜಮೀನಿನ ಪಕ್ಕದಲ್ಲಿ ಲೇಔಟ್ ನಲ್ಲಿ ಹಸುವನ್ನ ಕರೆದುಕೊಂಡು ಬರಲು ಹೋಗುತ್ತಿರುವಾಗ ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಬಂದು ರಾಶಿಯ ಕತ್ತಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಇದು ರಾಶಿಗೆ ಅನಿರೀಕ್ಷಿತವಾಗಿತ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಕುರಿ ಮೇಯಿಸುತ್ತಿದ್ದ ಅಜ್ಜಿಯ ಬಳಿಗೆ ಹೇಗೋ ಕಷ್ಟ ಪಟ್ಟು ಹೋದ ರಾಶಿ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು ಆದರೆ ಚಾಕುವಿನಿಂದ ಆಳವಾಗಿ ಇರಿಯಲಾಗಿತ್ತು ಹಾಗಾಗಿ ಸಿಕ್ಕಾಪಟ್ಟೆ ರಕ್ತಸ್ರಾವ ಆಗಿ ಜಮೀನಿನಲ್ಲಿ ರಾಶಿ ಬಿದ್ದು ಕೊನೆ ಉಸಿರೆಳೆದಿದ್ದಾಳೆ ಇನ್ನು ಘಟನಾ ಸ್ಥಳಕ್ಕೆ ರಾಜನಕುಂಟೆ ಪೊಲೀಸರು ಬೆಂಗಳೂರು ಗ್ರಾಮಾಂತರದ ಎಸ್ ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇದನ್ನೂ ಓದಿ:Real story: ಕುಡಿದು ಜೈಲು ಸೇರಿದ್ದ ಯುವಕರನ್ನು ಹುಡುಕಿಕೊಂಡು ಬಂದ ಮ್ಯೂಸಿಕ್ ಕಂಪನಿಗಳು; ಅಷ್ಟಕ್ಕೂ ಆತ ಜೈಲಿನಲ್ಲಿ ಇದ್ದುಕೊಂಡೇ ಮಾಡಿದ್ದೇನು ಗೊತ್ತಾ?

ಮೃತಪಟ್ಟ ರಾಶಿಯ ಮೃತ ದೇಹವನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ರಾಶಿ ದೇಹವನ್ನು ಹಸ್ತಾಂತರ ಮಾಡಲಿದ್ದಾರೆ. ಆದರೆ ಹೀಗೆ ಅನಿರೀಕ್ಷಿತವಾಗಿ ಯಾರೋ ಅಪರಿಚಿತರು ಬಂದು ರಾಶಿಯನ್ನು ಯಾಕೆ ಕೊಲೆ ಮಾಡಿದ್ದಾರೆ ಅವರಿಗೂ ಆಕೆಗೂ ಏನು ಸಂಬಂಧ ಎನ್ನುವುದರ ಬಗ್ಗೆ ಕೆಂಚಿತ್ತು ಸುಳಿವು ಕೂಡ ಇಲ್ಲ. ಹಾಗಾಗಿ ಪೊಲೀಸರು ಆರೋಪಿಗಳ ಬಂಧನಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

Comments are closed.