Ramachari Kannada Serial: ಚಾರುಗೆ ನಿಜಕ್ಕೂ ಕಣ್ಣು ಬಂದಿಲ್ವ?? ಚಾರು ಪರಿಸ್ಥಿತಿ ನೋಡಿ ರಾಮಾಚಾರಿ ಕರಗಿ ಮುಂದೇನು ಮಾಡುತ್ತಾನೆ ಗೊತ್ತೇ?? ಯಾರ ಪ್ಲಾನ್ ಇದು ಗೊತ್ತೇ??

Ramachari Kannada Serial: ಇತ್ತ ಚಾರುವಿಗೆ ತನ್ನ ಪಾಪಕ್ಕಾಗಿ ಕಣ್ಣು ಕಾಣದೆ ಇರುವಂತೆ ಆ ದೇವರು ದೊಡ್ಡ ಶಿಕ್ಷೆ ಕೊಟ್ಟಿದ್ದಾನೆ ಎನ್ನುವ ನೋವು. ಇನ್ನೊಂದು ಕಡೆ ರಾಮಾಚಾರಿಗೆ ನನ್ನಿಂದಲೇ ಚಾರುವಿಗೆ ಶಾಶ್ವತವಾಗಿ ಕಣ್ಣು ಹೋಗಿದೆ ಎನ್ನುವ ಗಿಲ್ಟ್. ಅದೇ ಸಮಯಕ್ಕೆ ಚಾರು ರಾಮಾಚಾರಿ ಮನೆಯಲ್ಲಿಯೇ ಇದ್ದಾಳೆ ಎಂದು ಅರಿತುಕೊಂಡ ಮಾನ್ಯತಾ ಮಗಳನ್ನ ಹುಡುಕಿಕೊಂಡು ರಾಮಾಚಾರಿ ಮನೆಗೆ ಎಂಟ್ರಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಇತ್ತೀಚಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಅನ್ನು ಕಾಣುತ್ತಿದೆ ಇಬ್ಬರು ಎಣ್ಣೆ ಸೀಗೆಕಾಯಿನಂತೆ ಜಗಳ ಆಡುತ್ತಾ ಇದ್ದರು ಇದೀಗ ರಾಮಾಚಾರಿಯ ಒಂದು ಸಣ್ಣ ತಪ್ಪಿನಿಂದಾಗಿ ಚಾರುಲತಾಳನ್ನು ಜೀವನ ಪರ್ಯಂತ ಸೇವೆ ಮಾಡುವಂತಹ ಆಗಿದೆ.

ರಾಮಾಚಾರಿಯನ್ನು ಅತಿಯಾಗಿ ದ್ವೇಷ ಮಾಡುತ್ತಿದ್ದ ಚಾರುವಿಗೆ ರಾಮಾಚಾರಿ ಮೇಲೆ ಪ್ರೀತಿ ಆಗಿದೆ ಆದರೆ ರಾಮಾಚಾರಿಗೆ ಸದ್ಯ ಅವಳ ಮೇಲೆ ಇನ್ನಿಲ್ಲದಷ್ಟು ಕರುಣೆ ಮೂಡಿದೆ. ತನ್ನಿಂದಲೇ ಚಾರುವಿನ ದೃಷ್ಟಿ ಹೋಗಿದೆ ಎನ್ನುವ ಕಾರಣಕ್ಕೆ ಅವಳನ್ನು ಮನೆಗೆ ಕರೆದುಕೊಂಡು ಬಂದು ಸೇವೆ ಮಾಡುತ್ತಿದ್ದಾನೆ. ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದ ಅವಘಡದಿಂದ ಚಾರುಲತಾಗೆ ಕಣ್ಣು ಕಾಣದಂತೆ ಆಗಿತ್ತು ಆದರೆ ಆಕೆಗೆ ದೃಷ್ಟಿ ಬರುವ ಸಾಧ್ಯತೆ ಇತ್ತು. ಅದಕ್ಕಾಗಿ ಡಾಕ್ಟರ್ ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಚಾರುಲತಾ ಅವರಿಗೆ ಯಾವುದೇ ಕಾರಣಕ್ಕೂ ಕಣ್ಣಲ್ಲಿ ನೀರು ಬರಬಾರದು ಅವರಿಗೆ ಶೀತ ಆಗಬಾರದು ಎಂದು ಡಾಕ್ಟರ್ ಸಲಹೆ ನೀಡಿರುತ್ತಾರೆ. ಆದರೆ ರಾಮಾಚಾರಿ ಅವರ ಮನೆಯವರ ದುಡುಕು ನಿರ್ಧಾರದಿಂದಾಗಿ ಚಾರುಲತಾ ಈಗ ಮತ್ತೆ ಶಾಶ್ವತವಾಗಿ ಕಣ್ಣನ್ನ ಕಳೆದುಕೊಳ್ಳುವಂತೆ ಆಗಿದೆ. ಆಕೆಗೆ ಕಣ್ಣಿನ ದೃಷ್ಟಿ ಯಾಗಿ ಮಾಡಿದ ಟ್ರೀಟ್ಮೆಂಟ್ ಫಲ ನೀಡಲಿಲ್ಲ.

ಕಣ್ಣಿಗೆ ಕಟ್ಟಿರುವ ಪಟ್ಟಿ ಬಿಚ್ಚುತ್ತಿರುವ ಹಾಗೆ ತಾನು ರಾಮಾಚಾರಿಯನ್ನೇ ಮೊದಲು ನೋಡಬೇಕು ಎಂದುಕೊಂಡಿದ್ದಳು ಜಾರು ಅದರಂತೆ ರಾಮಾಚಾರಿ ಕೂಡ ಆಕೆಯ ಎದುರಿಗೆ ಇದ್ದ ಆದರೆ ಚಾರುವಿಗೆ ದೃಷ್ಟಿ ಮಾತ್ರ ಮರಳಲೇ ಇಲ್ಲ ರಾಮಾಚಾರಿಯನ್ನ ಪ್ರಶ್ನೆ ಮಾಡುತ್ತಿದ್ದಾಳೆ. ಆದರೆ ಇತ್ತ ವೈದ್ಯರು ರಾಮಾಚಾರ್ಯ ನಿರ್ಲಕ್ಷದಿಂದ ಆಕೆಗೆ ಶಾಶ್ವತವಾಗಿ ದೃಷ್ಟಿ ಹೊರಟು ಹೋಗಿದೆ ಎನ್ನುವಂತಹ ಶಾಕಿಂಗ್ ನ್ಯೂಸ್ ಹೇಳಿದ್ದಾರೆ ಇದರಿಂದ ರಾಮಾಚಾರಿ ತತ್ತರಿಸಿ ಹೋಗಿದ್ದಾನೆ. ಇದನ್ನೂ ಓದಿ; 2 Girls Love Story: ಪ್ರೀತಿ ಪ್ರೀತಿ ಎಂದು ಹುಡಿಯಾಗಿದ್ದವಳು ಹುಡುಗನಾಗಿ ಬದಲಾದಳು, ಆದರೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟ ಪ್ರೀತಿಸಿದ ಹುಡುಗಿ. ಏನಾಗಿದೆ ಗೊತ್ತೇ??

ಚಾರ್ಮನ ರಾಮಾಚಾರಿ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದಾನೆ ಅದರ ಜೊತೆಗೆ ಮನೆಯವರಿಗೆ ನಿಮ್ಮ ತಪ್ಪಿನಿಂದ ಆಕೆ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾಳೆ ಎಂಬುದಾಗಿಯೂ ಹೇಳುತ್ತಾನೆ. ಇದೇ ಸಮಯಕ್ಕೆ ಚಾರು ತಾಯಿ ಮಾನ್ಯತಾ ರಾಮಾಚಾರಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ಮಗಳು ಇಲ್ಲೇ ಇದ್ದಾಳೆ ಎಂದು ಅನುಮಾನ ಬಂದು ಹುಡುಕುತ್ತಿದ್ದಾಳೆ. ಆದರೆ ಜಾರು ವನ್ನು ಎಲ್ಲರೂ ಸೇರಿ ಅಡಗಿಸುತ್ತಾರೆ. ನಂತರ ಮಾನ್ಯತಾ ಮನೆಯಿಂದ ಹೊರಗೆ ಹೋಗುವ ನಾಟಕ ಆಡಿದ್ದಾಳೆ. ಇದನ್ನೂ ಓದಿ: Kabzaa Film Release date announced: ಉಪ್ಪಿ ಅಭಿಮಾನಿಗಳಿಗೆ ವರ್ಷಗಳ ನಂತರ ಸಿಕ್ತು ಸಿಹಿ ಸುದ್ದಿ; ಬಿಡುಗಡೆ ದಿನಾಂಕ ಘೋಷಿಸಿದ ಕಬ್ಜ ಚಿತ್ರ ತಂಡ, ಯಾವಾಗ ಗೊತ್ತೇ?

ಸತ್ಯ ಮನೆಯಿಂದ ಮಾನ್ಯತಾ ಹೊರಗೆ ಹೋದರಲ್ಲ ಅಂತ ಚಾರುಲತಾ ತಾನು ಅವಿತಿರುವ ಜಾಗದಿಂದ ಹೊರಗೆ ಬರುತ್ತಾಳೆ. ಎಲ್ಲರಿಗೂ ಖುಷಿ ಆಗುತ್ತೆ ಆದರೆ ಇದು ಕ್ಷಣಿಕ ಮಾತ್ರ. ಮಾನ್ಯತಾ ಮತ್ತೆ ಮನೆಗೆ ಬರುತ್ತಾಳೆ. ಎಲ್ಲರ ನಟನೆಗೆ ಶಹಬ್ಬಾಷ್ ಹೇಳುತ್ತಾ ನೀನು ನನ್ನ ಶತ್ರುಗಳ ಮನೆಯಲ್ಲಿ ಇದ್ದಿದ್ದು ಯಾಕೆ ಅಂತ ತರಾಟೆಗೆ ಚಾರುವನ್ನು ತೆಗೆದುಕೊಳ್ಳುತ್ತಾಳೆ. ಅಷ್ಟರಲ್ಲಾಗಲೇ ಚಾರುಲತಾಗೆ ಕಣ್ಣು ಕಾಣುವುದಿಲ್ಲ ಎನ್ನುವ ವಿಷಯ ಮಾನ್ಯತಾಗೆ ಗೊತ್ತಾಗುತ್ತೆ. ಇದರಿಂದ ಬಹಳ ನೊಂದುಕೊಳ್ಳುತ್ತಾಳೆ. ಅಳುತ್ತಾಳೆ. ಕೊನೆಗೆ ಚಾರುಲತಾಳನ್ನು ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿದ್ದಾಳೆ.

ರಾಮಾಚಾರಿ ಆಕೆಗೆ ಕಣ್ಣು ಶಾಶ್ವತವಾಗಿ ಬರುವುದಿಲ್ಲ ಎನ್ನುವ ಸತ್ಯವನ್ನ ಹೇಳಲು ಹೊರಟಿದ್ದಾನೆ. ಇನ್ನು ವೀಕ್ಷಕ ಪ್ರಭುಗಳ ಅಭಿಪ್ರಾಯದ ಪ್ರಕಾರ ನೋಡುವುದಾದರೆ ಚಾರುವಿಗೆ ಕಣ್ಣು ಕಾಣಿಸುತ್ತೆ ಆದರೆ ರಾಮಾಚಾರ್ಯ ಮನಸ್ಸು ಗೆಲ್ಲಲು, ಆತನನ ಮದುವೆ ಆಗಲು ಈ ರೀತಿ ನಾಟಕ ಆಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ನಡುವೆ ಭಜಾರಿಯಂತೆ ಕಾಣಿಸಿಕೊಳ್ಳುತ್ತಿದ್ದ ಚಾರು ಈಗ ಕಣ್ಣಿಲ್ಲದ ಕುರುಡಿಯ ಹಾಗೆ ಸಾಫ್ಟ್ ನೇಚರ್ ಹೊಂದಿರುವ ಸಾಮಾನ್ಯ ಹುಡುಗಿಯಂತೆ ಅತ್ಯಂತ ಉತ್ತಮವಾಗಿ ಅಭಿನಯಿಸುತ್ತಿದ್ದಾರೆ ಚಾರುವಿನ ಈ ಪಾರ್ಟ್ ನ ಆಕ್ಟಿಂಗ್ ಎಲ್ಲರಿಗೂ ಸಿಕ್ಕಪಟ್ಟೆ ಇಷ್ಟವಾಗಿದೆ.

Comments are closed.