Real Story: ಸ್ನೇಹಿತನ ಹೆಂಡತಿಯ ಜೊತೆ, ಫುಲ್ ಡಿಂಗ್ ಡಾಂಗ್ ಆಡಿದ. ಈ ವಿಷಯ ಸ್ನೇಹಿತನಿಗೆ ತಿಳಿದಾಗ ಆತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಿದ್ದೇನು ಗೊತ್ತೇ?

Real Story:ಇತ್ತೀಚಿಗೆ ಕೊಲೆಯ ಪ್ರಕರಣಗಳು ಜಾಸ್ತಿ ಆಗ್ತಾ ಇದೆ. ಕೆಲವೊಂದಿಷ್ಟು ಆರ್ಥಿಕ ಕಾರಣಕ್ಕೆ ಇದ್ರೆ, ಇನ್ನು ಕೆಲವೊಂದಿಷ್ಟು ವಿವಾಹೇತರ ಸಂಬಂಧ ಇರುವುದಕ್ಕೆ ಹತ್ಯೆ ಆಗುತ್ತಿದೆ. ಒಬ್ಬ ಮನುಷ್ಯನ ಪ್ರಾಣ ತೆಗೆಯುವುದು ಇಷ್ಟು ಸುಲಭಾನಾ ಅಂತ ನಿಮಗೂ ಅನ್ನಿಸಬಹುದು ಆದರೆ ಇದೇ ವಾಸ್ತವ. ನಮ್ಮ ಸುತ್ತಮುತ್ತ ನಡೆಯುತ್ತಿರುವ ದೈನಂದಿನ ಚಟುವಟಿಕೆ ಎಂಬಂತೆ ಒಂದಲ್ಲಾ ಒಂದು ಹತ್ಯೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಇತ್ತೀಚಿಗೆ ವಿವಾಹೇತರ ಸಂಬಂಧವನ್ನು ಹೊಂದಿರುವ ಪತಿ ಅಥವಾ ಪತ್ನಿ ಕೊಲೆಯಾಗುವುದು ಸಹಜವಾಗಿಬಿಟ್ಟಿದೆ. ಇಂತಹ ಒಂದು ಘಟನೆಗೆ ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆ ಕೂಡ ಸಾಕ್ಷಿಯಾಗಿದೆ.

ಮಹಿಳೆ ಒಬ್ಬಳು ತನ್ನ ಗಂಡನ ಸ್ನೇಹಿತನೊಂದಿಗೆ ಗಂಡನಿಗೆ ಗೊತ್ತಾಗದ ರೀತಿಯಲ್ಲಿ ಅಕ್ರಮ ಸಂಬಂಧ ಬೆಳೆಸಿದಳು. ಗಾಜಿಯಾಬಾದ್ ಜಿಲ್ಲೆಯಲ್ಲಿ ಮಿಹ್ಲಾಲ್ ಎನ್ನುವ ವ್ಯಕ್ತಿ ವಾಸವಾಗಿದ್ದ. ಆತನಿಗೆ ಸುಮಾರು 40 ವರ್ಷ ವಯಸ್ಸು. ಇನ್ನು ಮಿಹ್ಲಾಲ್ ಗೆ ಪೂನಂ ಎನ್ನುವ ಹೆಸರಿನ ಹೆಂಡತಿ ಇದ್ದಳು. ಮಿಹ್ಲಾಲ್ ಕೂಲಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದ. ಅವರ ಮನೆಯ ಸಮೀಪದಲ್ಲಿ ಅಕ್ಷಯ್ ಎಂಬ ಯುವಕ ವಾಸವಾಗಿದ್ದ. ಅಕ್ಷಯ್ ಹಾಗು ಮಿಹ್ಲಾಲ್ ಇಬ್ಬರು ಸ್ನೇಹಿತರು. ಹಾಗಾಗಿ ಅಕ್ಷಯ್ ಆಗಾಗ ಮಿಹ್ಲಾಲ್ ಮನೆಗೆ ಬಂದು ಹೋಗುತ್ತಿದ್ದ. ಇದನ್ನೂ ಓದಿ: Budhaditya Rajayoga: ಈ ರಾಶಿಗಳ ಕಷ್ಟ ಇನ್ನು ಎರಡು ದಿನ ಮಾತ್ರ; ಆಮೇಲೆ ಈ ರಾಶಿಗಳಿಗೆ ರಾಜಯೋಗ ಶುರು: ಕಡೆಗಣಿಸಿ ಕಳೆದುಕೊಳ್ಳಬೇಡಿ. ಯಾವ ರಾಶಿಗಳಿಗೆ ಗೊತ್ತೇ?

ಮಿಲ್ಹಾಲ್ ನ ಪತ್ನಿ ಪೂನಂ ಕೂಡ ಅಕ್ಷಯ ಜೊತೆ ಚೆನ್ನಾಗಿಯೇ ಮಾತನಾಡುತ್ತಿದ್ದಳು. ಹಾಗಾಗಿ ಪೂನಂ ಜೊತೆ ಅಕ್ಷಯ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಮಿಹ್ಲಾಲ್ ಅನುಮಾನ ಪಡುತ್ತಾನೆ. ಅದಕ್ಕೆ ಪುಷ್ಠಿ ನೀಡುವಂತೆ ಅಕ್ಕಪಕ್ಕದವರು ಕೂಡ ಅಕ್ಷಯ ಜೊತೆ ಪೂನಂ ಹೆಚ್ಚು ಬೆರೆಯುತ್ತಿದ್ದಾಳೆ ಎಂದು ಚಾಡಿ ಹೇಳುತ್ತಾರೆ. ಇವರಿಬ್ಬರದ್ದು ಅನೈತಿಕ ಸಂಬಂಧ ಎಂದು ಮನಸ್ಸಿನಲ್ಲಿಯೇ ಗಟ್ಟಿ ಮಾಡಿಕೊಂಡ  ಮಿಹ್ಲಾಲ್ ಕೊನೆಗೆ ಇದೇ ಅನುಮಾನದಿಂದ ಮಾಡಿದ್ದೇನು ಗೊತ್ತಾ? ಇದನ್ನು ಓದಿ: Yash Fun With Son: ಅಪ್ಪ ಯಶ್ ಗಿಂತ ನಾನೇ ಫುಲ್ ಸ್ಟ್ರಾಂಗ್ ಎಂದ ಯಶ್ ಮಗ ಯಥರ್ವ್; ವಿಡಿಯೋ ಆಯಿತು ವೈರಲ್. ಕ್ಯೂಟ್ ವಿಡಿಯೋ ಹೇಗಿದೆ ಗೊತ್ತೇ?

ಒಂದು ದಿನ ಅಕ್ಷಯ್ ನನ್ನು ಕೊಂದು ಅವನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಒಂದು ಚೀಲದಲ್ಲಿ ತುಂಬಿ ಹತ್ತಿರದಲ್ಲಿ ಇದ್ದ ಕಾಲುವೆಗೆ ಎಸೆದಿದ್ದಾನೆ. ಸ್ವಲ್ಪ ದಿನದ ನಂತರ ಬ್ಯಾಗ್ ನಿಂದ ದುರ್ವಾಸನೆ ಬರುತ್ತಿದ್ದದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಇದಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಅಕ್ಷಯ ಎಂದು ಗುರುತಿಸಿದ್ದಾರೆ ಅಕ್ಷಯ್ ನಿವಾಸಕ್ಕೆ ಬಂದು ಈ ಬಗ್ಗೆ ವಿಚಾರಣೆ ಮಾಡಿದ್ದಾರೆ. ಇನ್ನು ಹತ್ತಿರದಲ್ಲೇ ಇದ್ದ ಹಾಗೂ ಅಕ್ಷಯ್ ನ ಸ್ನೇಹಿತನಾಗಿದ್ದ ಮಿಹ್ಲಾಲ್ ನನ್ನು ಕೂಡ ಈ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಮಿಹ್ಲಾಲ್ ಕೇಳಿದ ಪ್ರಶ್ನೆಗೆ ತಡವರಿಸಿದ್ದನ್ನು ನೋಡಿ ಪೊಲೀಸರ ಅನುಮಾನ ಗಟ್ಟಿಯಾಗಿದೆ. ಕೊನೆಗೆ ತಮ್ಮದೇ ಆದ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದ್ದಾರೆ. ಕೊನೆಗೂ ಈ ಕೃತ್ಯವನ್ನು ತಾನೇ ಎಸೆಗಿರುವುದಾಗಿ ಮಿಹ್ಲಾಲ್ ಒಪ್ಪಿಕೊಂಡಿದ್ದಾನೆ. ಕೇವಲ ಹೆಂಡತಿ ಹಾಗೂ ಸ್ನೇಹಿತನ ಮೇಲಿನ ಅನುಮಾನದ ಕಾರಣದಿಂದ ಮಿಲ್ಹಾಲ ಅಕ್ಷಯ್ ನನ್ನು ಹತ್ಯೆ ಮಾಡಿ ಇದೀಗ ಜೈಲು ಊಟ ತಿನ್ನುತ್ತಿದ್ದಾನೆ.

Comments are closed.