Real Story: ಸೌಂದರ್ಯಕ್ಕೆ ಮೋಹಕ್ಕೆ ಬಿದ್ದ: ಗಂಡನಿಗೆ HIV ಟೆಸ್ಟ್ ಮಾಡಿಸು, ಸಾವಿರಾರು ಕೋಟಿ ಅಸ್ತಿ ನಿಂದೆ: ಕೊನೆಗೆ ಅವರ ಕಥೆ ಏನಾಯ್ತು ಗೊತ್ತೇ??

Real Story: ತಮಿಳುನಾಡಿನ ಚೆನ್ನೈನಲ್ಲಿ ಸಖತ್ ಫೇಮಸ್ ಆಗಿರುವ ಶರವಣ ಭವನ್ ರೆಸ್ಟೋರೆಂಟ್ ಗೆ ನೀವು ಭೇಟಿ ನೀಡಿದ್ದೀರಾ? ಈ ರೆಸ್ಟೋರೆಂಟ್ ನ ಮಾಲಿಕ ರಾಜಗೋಪಾಲ್. ಇವರು ಒಂದು ಕಾಲದಲ್ಲಿ ಚೆನ್ನೈನಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ ವ್ಯಕ್ತಿ. ಇವರ ಕಥೆ ಕೇಳಿದ್ರೆ ನೀವು ಫಿಲ್ಮ್ ನೋಡೋದಕ್ಕೆ ಭಯ ಪಡ್ತೀರಾ!

ಅದು 2001ರ ಅಕ್ಟೋಬರ್ 18 ನೇ ತಾರೀಕು. ಎಲ್ಲಿ ರಾಜಗೋಪಾಲ್ ತಮ್ಮನ್ನ ಸಾಯಿಸ್ತಾರೋ ಅಂತ ಆ ಎರಡು ಜೀವಗಳು ಹೆದರಿ ಮೂಲೆ ಸೇರಿದ್ದವು. ಕೊನೆಗೆ ಅಂಬಾಸಿಡಾರ್ ಕಾರ್ ನಲ್ಲಿ ಸಿನಿಮಾ ಸ್ಟೈಲ್ ನಲ್ಲಿ ಕೆಲವು ರೌಡಿಗಳು ಅವರನ್ನ ಹಿಂಬಾಲಿಸಿ ಕಾರನ್ನು ಅಡ್ಡಗಟ್ಟುತ್ತಾರೆ. ನಂತರ ಅವರ ಎದುರು ಬೆಂಜ್ ಕಾರು ಬಂದು ನಿಲ್ಲತ್ತೆ. ಅದ್ರಿಂದ ಸಿನಿಮಾ ವಿಲನ್ ನಂತೆ ಇಳಿದು ಬಂದಿತ್ತು ಯಾರು ಗೊತ್ತಾ ಇದೇ ರಾಜಗೋಪಾಲ್. ಶಾಂತ ಕುಮಾರ್ ಹಾಗೂ ಶಿವ ಜ್ಯೋತಿ ಎಂಬ ಜೋಡಿ ರಾಜಗೋಪಾಲ್ ಅವರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿತ್ತು.

ಈ ಘಟನೆಯ ಹಿನ್ನೆಲೆಯನ್ನು ನೋಡುವುದಾದರೆ, ಶಿವಜ್ಯೋತಿ ಹುಡುಗಿ ತನ್ನ ತಂದೆ ತಾಯಿಯ ಜೊತೆಗೆ ಬಹಳ ವರ್ಷಗಳ ಹಿಂದೆ ತನ್ನ ಸ್ವಂತ ಊರನ್ನ ಬಿಟ್ಟು ಚೆನ್ನೈ ಗೆ ಬಂದು ನೆಲೆಸಿತು. ಇದೇ ಸರವಣ ಭವನದಲ್ಲಿ ಶಿವಜ್ಯೋತಿ ಅವರ ತಂದೆ ಕೆಲಸ ಮಾಡುತ್ತಿದ್ದರು. ಸರವಣ ಭವನದಲ್ಲಿ ಕೆಲಸ ಮಾಡುವ ಕೆಲಸಗಾರರಿಗಾಗಿ ಒಂದು ಕಾಲೋನಿ ಇತ್ತು ಅದರಲ್ಲಿ ಶಿವ ಜ್ಯೋತಿ ಹಾಗೂ ಅವರ ಪರಿವಾರ ನೆಲೆಸಿತ್ತು. ಇಲ್ಲಿಗೆ ಶಿವ ಜ್ಯೋತಿ ಗೆ ಗಣಿತ ತರಬೇತಿ ನೀಡಲು, ಶಾಂತ ಕುಮಾರ್ ಎನ್ನುವ ಯುವಕ ಆಗಾಗ ಬರುತ್ತಿದ್ದ. ಆದರೆ ಇದು ರಾಜಗೋಪಾಲ್ ಅವರಿಗೆ ಇಷ್ಟ ಇರಲಿಲ್ಲ ಹಾಗಾಗಿ ಶಾಂತಕುಮಾರ್ ಗೆ ವಾರ್ನಿಂಗ್ ಕೂಡ ಕೊಟ್ಟಿದ್ದರು.

 ರಾಜಗೋಪಾಲ್ ಅವರ ವರ್ತನೆ ಶಿವ ಜ್ಯೋತಿ ಯವರ ತಂದೆಗೆ ಸರಿಬರಲಿಲ್ಲ. ಹಾಗಾಗಿ ಇವರು ಆ ಕಾಲುವೆಯನ್ನು ತೊರೆದು ಎಂಜಿಆರ್ ನಗರಕ್ಕೆ ಬಂದು ನೆಲೆಸುತ್ತಾರೆ. ಕ್ರಮೇಣ ಸರವಣ ಭವನ ದಲ್ಲಿ ಕೆಲಸವನ್ನು ಕೂಡ ಬಿಡುತ್ತಾರೆ. ನಂತರ ವ್ಯಾಪಾರ ಮಾಡಲು ಮಲೇಶಿಯಾಗೆ ಹೋಗುತ್ತಾರೆ. ಶಿವ ಜ್ಯೋತಿ ಹಾಗೂ ಶಾಂತಕುಮಾರ್ ಇನ್ನಷ್ಟು ಹತ್ತಿರವಾದರೂ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದಕ್ಕೆ ಶಿವಜ್ಯೋತಿ ಅವರ ತಾಯಿಯ ಒಪ್ಪಿಗೆ ಇರಲಿಲ್ಲ ಅವರ ವಿರೋಧದ ನಡುವೆಯೂ ಶಿವ ಜ್ಯೋತಿ 1999 ರಲ್ಲಿ ಶಾಂತಕುಮಾರ್ ಅವರ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗುತ್ತಾರೆ. 

ಈ ನಡುವೆ ಶಿವ ಜ್ಯೋತಿ ತಮ್ಮದೇ ಆದ ಟ್ರಾವೆಲ್ ಏಜೆನ್ಸಿ ಒಂದನ್ನು ಆರಂಭಿಸುತ್ತಾರೆ. ಆದರೆ ಅದನ್ನು ಇನ್ನಷ್ಟು ಬೆಳೆಸುವುದಕ್ಕೆ ರಾಜಗೋಪಾಲ್ ಅವರ ಸಹಾಯ ಅಗತ್ಯವಿರುತ್ತೆ. ಕೊನೆಗೆ ರಾಜಗೋಪಾಲ್ ಅವರ ಸಹಾಯ ಕೇಳಿದ, ಶಿವ ಜ್ಯೋತಿ ಹಾಗೂ ಅವರ ತಾಯಿ ರಾಜಗೋಪಾಲ್ ಹೇಳಿದಂತೆ ಅವರು ಕಟ್ಟಿಸಿದ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಹಾಗೆನೇ ಶಿವ ಜ್ಯೋತಿ ಅವರನ್ನು ನೋಡೋದಕ್ಕೆ ಬರುವ ರಾಜಗೋಪಾಲ್ ಕೈತುಂಬ ದುಬಾರಿ ಉಡುಗೊರೆ ತಂದು ಕೊಡುತ್ತಾರೆ.

ಇದಕ್ಕಿಂತ ಹಾಗೆ ಒಮ್ಮೆ ಶಿವ ಜ್ಯೋತಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಯಾವ ಆಸ್ಪತ್ರೆಯಲ್ಲೂ ಅವರ ರೋಗಕ್ಕೆ ಚಿಕಿತ್ಸೆ ಸಿಗುವುದಿಲ್ಲ ನಂತರ ರಾಜ್ ಗೋಪಾಲ್ ತಮಗೆ ಪರಿಚಯ ಇರುವ ಆಸ್ಪತ್ರೆ ಒಂದರಲ್ಲಿ ತಾವೇ ಖರ್ಚನ್ನು ನಿಭಾಯಿಸಿ ಚಿಕಿತ್ಸೆ ಕೊಡಿಸುತ್ತಾರೆ. ನಿಮಗೆ ಯಾವ ಸಮಸ್ಯೆಯೂ ಇಲ್ಲ ನಿಮ್ಮ ಗಂಡನ ತಪಾಸಣೆ ಮಾಡಿಸಬೇಕು ಎಂದು ಹೇಳುತ್ತಾರೆ. ಅವರಿಗೆ ಹೆಚ್ ಐ ವಿ ಇದೆ ಎಂಬುದಾಗಿಯೂ ಹೇಳುತ್ತಾರೆ ಆದರೆ ಇದೆಲ್ಲದರ ಹಿಂದೆ ರಾಜಗೋಪಾಲ್ ಕೈವಾಡ ಇದ್ದಿದ್ದು ಶಿವ ಜ್ಯೋತಿಗೆ ಗೊತ್ತಾಗುತ್ತೆ.

ಕೊನೆಗೆ ಶಿವ ಜ್ಯೋತಿ ರಾಜಗೋಪಾಲ್ ಅವರನ್ನು ಈ ರೀತಿ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ನನ್ನ ಮೂರನೇ ಹೆಂಡತಿಯಾಗಿ ನೀನು ಬಂದರೆ ನನ್ನ ಎಲ್ಲಾ ಆಸ್ತಿಯನ್ನು ನೀನು ಅನುಭವಿಸಬಹುದು. ನಿನ್ನ ಗಂಡನನ್ನು ಬಿಟ್ಟುಬಿಡು ಎಂದು ಹೇಳುತ್ತಾರೆ ಆದರೆ ಇದಕ್ಕೆ ಶಿವಜ್ಯೋತಿ ಒಪ್ಪುವುದಿಲ್ಲ. ನನಗೆ ಶಿವಜ್ಯೋತಿ ಅವರ ಪರಿವಾರವನ್ನು ಒಂದು ಕಡೆ ಕೂಡ ಹಾಕಿ ಇನ್ನಿಲ್ಲದಷ್ಟು ಚಿತ್ರಹಿಂಸೆ ಕೊಡುತ್ತಾರೆ ರಾಜಗೋಪಾಲ್. ಕೊನೆಗೆ ಶಾಂತಕುಮಾರ್ ಕೂಡ ಆಗಾಗ ಸಿಕ್ಕ ಸಿಕ್ಕಲ್ಲಿ ತನ್ನ ಬಂಟರನ್ನ ಬಿಟ್ಟು ಹೊಡೆಸುತ್ತಾರೆ.

ಈ ನಡುವೆ ರಾಜಗೋಪಾಲ್ ಅವರ ಜೊತೆ ಕೆಲಸ ಮಾಡುತ್ತಿದ್ದ ಡ್ಯಾನಿಯಲ್ ಎಂಬ ವ್ಯಕ್ತಿ ಶಿವಜ್ಯೋತಿ ಕರೆ ಮಾಡುತ್ತಾನೆ. ರಾಜಗೋಪಾಲ್ ಅವರ ನಡವಳಿಕೆ ಬಗ್ಗೆ ನನಗೂ ಬೇಸರವಾಗಿದೆ ನೀವು ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಳ್ಳಿ ಎಂದು ಹೇಳುತ್ತಾನೆ ಜೊತೆಗೆ ಅವರ ತಪ್ಪಿಸಿಕೊಳ್ಳಲು ಸಹಾಯ ಕೂಡ ಮಾಡುತ್ತಾನೆ ಇದೆ ವೇಳೆ   ಶಿವ ಜ್ಯೋತಿ ಹಾಗೂ ಅವರ ಪರಿವಾರದವರು ಓಡಿ ಹೋಗುತ್ತಿರುವಾಗ, ರಾಜಗೋಪಾಲ್ ಕೈಗೆ ಸಿಕ್ಕಿ ಬೀಳುತ್ತಾರೆ. ನಂತರ ರಾಜಗೋಪಾಲ್ ಶಾಂತಕುಮಾರ್ ಅವರನ್ನು ಮುಗಿಸಲು ಹೇಳಿ ಶಿವಜ್ಯೋತಿಯನ್ನು ಮಾತ್ರ ವಾಪಸ್ ಕರೆದುಕೊಂಡು ಬರುತ್ತಾರೆ.

ಅದರಂತೆ ರಾಜಗೋಪಾಲ್ ಶಾಂತಕುಮಾರ್ ಅವರನ್ನು ಕೊಲೆ ಕೂಡ ಮಾಡಿಸುತ್ತಾರೆ. ಈ ನಡುವೆ ಶಿವ ಜ್ಯೋತಿ ಕಮಿಷನರ್ ಗೆ ರಾಜಗೋಪಾಲ್ ಬಗ್ಗೆ ದೂರನ ನೀಡಿದರು ಅದನ್ನ ಹಿಂತೆಗೆದುಕೊಳ್ಳುವಂತೆಯೂ ರಾಜಗೋಪಾಲ್ ಬೆದರಿಕೆ ಹಾಕಿದ್ರು. ಕೊನೆಗೆ ಈ ಕೇಸ್ ವಿಚಾರಣೆ ಮಾಡಲಾಗಿತ್ತು. ಬರೋಬ್ಬರಿ 18 ವರ್ಷಗಳ ನಂತರ 2019 ರಲ್ಲಿ ರಾಜಗೋಪಾಲ್ ಅವರ ಗೆ ಜೈಲು ಶಿಕ್ಷೆ ಆಯಿತು ಆದರೆ ಅದೇ ವರ್ಷ ರಾಜಗೋಪಾಲ್ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಒಂದು ಹೆಣ್ಣಿನ ಮೋಹದಿಂದ ರಾಜಗೋಪಾಲ ಮಾಡಿದ ಕೃತ್ಯ ಅಷ್ಟಿಷ್ಟಲ್ಲ.

Comments are closed.