Shiva Rajkumar: ತೆಲುಗು ಅಲ್ಲೂ ಅರ್ಜುನ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಶಿವಣ್ಣ, ಇವೆಲ್ಲ ಬೇಕಿತ್ತಾ ಎಂದ ಫ್ಯಾನ್ಸ್. ಶಿವಣ್ಣನ ಮಾತಿಗೆ ಬೇಜಾರಾಗಿದ್ದು ಯಾಕೆ ಗೊತ್ತೆ?

Shiva Rajkumar: ಪವರ್ ಸ್ಟಾರ್ ಪುನೀತ್ ರಾಜಕುಮಾರ್ (puneet Rajkumar)  ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಅಶ್ವಿನಿ (Ashwini) ಪುನೀತ್, ಅಪ್ಪು ಅವರ ಎಲ್ಲಾ ಕೆಲಸಗಳನೂ ಮುದುವರೆಸಿಕೊಡು ಹೋಗುತ್ತಿದ್ದಾರೆ. ಅಪ್ಪು ಕೇವಲ ಸಿನಿಮಾ (Film)ದಲ್ಲಿ ನಾಯಕ (Hero) ನಾಗಿ ನಟಿಸಿದ್ದು ಮಾತ್ರವಲ್ಲ. ನಿಜಜೀವನದಲ್ಲಿಯೂ ಹಿರೋ ಆಗಿದ್ದವರು ಅವರು. ಹಾಗಾಗಿ ಇಂದು ಕೇವಲ ಕರುನಾಡು ಮಾತ್ರವಲ್ಲ ಇತರ ಭಾಷಾ ಸಿನಿಮಾ ಅಭಿಮಾನಿಗಳೂ ಕೂಡ ಪುನೀತ್ ರಾಜಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸಾಕಷ್ಟು ಸೆಲಿಬ್ರೆಟಿಗಳು ಹಲವು ಸಂದರ್ಭದಲ್ಲಿ ಅಪ್ಪುವನ್ನು ನೆನಪಿಸಿಕೊಳ್ಳುತ್ತಾರೆ.

ಶಿವಣ್ಣ ಅವರು ಕೂಡ ಇಂದಿಗೂ ಸಿನಿಮಾದಲ್ಲಿ ಆಕ್ಟಿವ್ ಆಗಿದ್ದಾರೆ. ಆದರೆ ಎಷ್ಟೇ ಯಶಸ್ಸನ್ನೂ ಕಂಡರೂ ಶಿವರಾಜ್ ಕುಮಾರ್ ಮಾತ್ರ ಬಹಳ ಸರಳವಾಗಿಯೇ ಇರುತ್ತಾರೆ. ಪುನೀತ್ ಕೂಡ ಹೀಗೆ ಇದ್ದವರು. ಇನ್ನು ಶಿವಣ್ಣ ಯಾವುದೇ ಕಾರ್ಯಕ್ರಮಕ್ಕೆ ವೇದಿಕೆಯನ್ನು ಹತ್ತಿದರೂ ಪುನೀತ್ ಅವರನ್ನ ನೆನಪು ಮಾಡಿಕೊಳ್ಳದೇ ಇರುವುದೇ ಇಲ್ಲ. ಇತ್ತೀಚಿಗೆ ಶಿವರಾಜ್ ಕುಮಾರ್ ಅಭಿನಯದ ’ವೇದ’ ಸಿನಿಮಾ ಕನ್ನಡ ಮಾತ್ರವಲ್ಲದೇ ತೆಲಗು ಭಾಷೆಯಲ್ಲಿಯೂ ಕೂಡ ಬಿಡುಗಡೆಯಾಗಿದೆ. ಇದನ್ನೂ ಓದಿ: Wedding tradition: ಅಣ್ಣನನ್ನು ಮದುವೆಯಾಗಿ ಆತನ ತಮ್ಮಂದಿರ ಜೊತೆಯೂ ಅಕೆಯೊಬ್ಬಳೇ ಸಂಸಾರ ಮಾಡುತ್ತಾಳೆ; ಇಂದಿಗೂ ಇದೆಯಾ ಪಾಂಚಾಲಿ ಆಚರಣೆ?! ಎಲ್ಲಿ ಗೊತ್ತೇ?

ವೇದ ಸಿನಿಮಾದ ಕಾರ್ಯಕ್ರಮದ ಸಂದರ್ಭದಲ್ಲಿ ತೆಲಗು ಇವೆಂಟ್ ಒಂದರಲ್ಲಿ ಶಿವಣ್ಣ ಭಾಗವಹಿಸಿದ್ದರು. ಈ ಸಿನಿಮಾದಲ್ಲಿ ತೆಲಗು ಖ್ಯಾತ ನಟ ಬಾಲಯ್ಯ (Balayya) ಕೂಡ ಅಭಿನಯಿಸಿದ್ದಾರೆ. ಈಹಿನ್ನೆಲೆಯಲ್ಲಿ ಶಿವಣ್ಣ ಜೊತೆ ಬಾಲಯ್ಯ ಕೂಡ ವೇದಿಕೆಯಲ್ಲಿದ್ದರು.

ಮಾತನಾಡುವಾಗ ಪುನೀತ್ ಬಗ್ಗೆ ಹೇಳುತ್ತಾ ಶಿವಣ್ಣ ಭಾವುಕರಾಗಿದ್ದಾರೆ. ಬಾಲಯ್ಯ ಸಾಂತ್ವಾನ  ಹೇಳಿದರು. ಹೌದು ಅಪ್ಪು ಅಂದ್ರೆ ಇತರ ಭಾಷೆಯವರು ಕೂಡ ಇಷ್ಟಪಡುತ್ತಾರೆ. ಹಾಗಾಗಿ ತೆಲಗು ಚಿತ್ರಗಳಲ್ಲಿ ಅಪ್ಪು ಅಭಿನಯಿಸದೇ ಇದ್ದರೂ ತೆಲಗು ಚಿತ್ರರಂಗಕ್ಕೂ ಪುನೀತ್ ಗೂ ನಂಟಿದೆ. ಇದನ್ನೂ ಓದಿ: Wedding Night: ಮೊದಲ ರಾತ್ರಿಯ ವಿಡಿಯೋನೂ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಜೋಡಿ! ಇಲ್ಲಿದೆ ನೋಡಿ  ವೈರಲ್ ವಿಡಿಯೋ!

ಇನ್ನು ಅಪ್ಪು ಬಗ್ಗೆ ಮಾತನಾಡಿದ ಶಿವಣ್ಣ, ಇಂದು ನನ್ನ ತಮ್ಮ ಜೊತೆಗಿಲ್ಲ. ಆದರೆ ಅಲ್ಲು ಅರ್ಜುನ್ (Allu Arjun) ಅವರನ್ನು ಆ ಸ್ಥಾನದಲ್ಲಿ ನೋಡುತ್ತೇನೆ. ಅವರ ನೃತ್ಯದಲ್ಲಿ ನಾನು ಅಪ್ಪುವನ್ನು ನೋಡುತ್ತೇನೆ ಎಂದರು. ಅಪ್ಪು ಹಾಗೂ ಅಲ್ಲೂ ಇಬ್ಬರು ಸ್ನೇಹಿತರು. ಒಬ್ಬರನ್ನೊಬ್ಬರು ಆಗಾಗ ಹೊಗಳಿಕೊಳ್ಳುತ್ತಿದ್ದರು. ಅಲ್ಲೂ ಅರ್ಜುನ್ ಕೂಡ ಅಪ್ಪು ಇಲ್ಲ ಎಂಬುದಾಗಿ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.