DBoss Birthday: ಇವತ್ತೂ ಸುಮ್ಮನಿರಲಿಲ್ಲ ಒಳ್ಳೆ ಹುಡುಗ ಪ್ರಥಮ್ ಬಾಯಿ; ದರ್ಶನ್ ಹುಟ್ಟುಹಬ್ಬದಂದೇ ಅವರಿಗೆ ಬುದ್ದಿ ಹೇಳಲು ಹೋದ ಪ್ರಥಮ್ ಗೆ ಡಚ್ಚು ಅಭಿಮಾನಿಗಳು ಕೊಟ್ರು ಟಾಂಗ್; ಇಷ್ಟಕ್ಕೂ ಪ್ರಥಮ್ ಹೇಳಿದ್ಡೇನು ಗೊತ್ತಾ?

DBoss Birthday: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging start darshan) ಅವರಿಗೆ ಇಂದು 46ರ ಸಂಭ್ರಮ. ದರ್ಶನ್ ಅವರಿಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಇದು ಖುಷಿಯ ವಿಚಾರ. ದರ್ಶನ್ ಅಭಿಮಾನಿಗಳು ಒಟ್ಟಾಗಿ ಕ್ರಾಂತಿ (Karnti) ಸಿನಿಮಾವನ್ನ ಗೆಲ್ಲಿಸಿದ್ದಾರೆ. ಈಗ ತಮ್ಮ ಡಿ ಬಾಸ್ ಅವರ ಹುಟ್ಟು ಹಬ್ಬದ ಖುಷಿಯಲ್ಲಿ ಇದ್ದಾರೆ ನಿನ್ನೆ ತಡರಾತ್ರಿ ದರ್ಶನ್ ಅವರ ಮುಂದೆ ಅವರ ಅಭಿಮಾನಿಗಳ ಬಳಗ ಸಾಲುಗಟ್ಟಿ ನಿಂತಿತ್ತು. ದರ್ಶನ್ ಅವರು ಈಗಾಗಲೇ ನನ್ನ ಬರ್ತಡೆ (Birth day) ಗೆ ಹಾರ, ತುರಾಯಿ, ಕೇಕ್ ತಂದು ದುಂದು ವೆಚ್ಚ ಮಾಡಬೇಡಿ ಅದರ ಬದಲು ದವಸ ಧಾನ್ಯಗಳನ್ನು ಕೊಡಿ ಅದರ ಅಗತ್ಯ ಇರುವವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಾನು ಮಾಡುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ದರ್ಶನ್ ಅವರ ಮಾತಿಗೆ ಬೆಲೆಕೊಟ್ಟ ಅವರ ಅಭಿಮಾನಿಗಳು ದರ್ಶನ್ ಅವರ ಮನೆಯ ಮುಂದೆ ಟನ್ ಗಟ್ಟಲೆ ದವಸ ಧಾನ್ಯಗಳನ್ನು ತಂದು ಶೇಖರಿಸಿದ್ದಾರೆ.

ಇನ್ನು ದರ್ಶನ್ ಅವರು ತಮ್ಮ ಅಭಿಮಾನಿಗಳ (Fans) ಪ್ರೀತಿಗೆ ಸದಾ ಚಿರಋಣಿ ಎಂದು ಹೇಳಿಕೊಳ್ಳುತ್ತಾರೆ ಹಾಗಾಗಿ ಇತ್ತೀಚಿಗೆ ಪ್ರೀತಿಯ ಸೆಲೆಬ್ರಿಟಿಸ್ (Celebrities)  ಎಂದು ಎದೆಯ ಮೇಲೆ ಟ್ಯಾಟು ಕೂಡ ಹಾಕಿಸಿಕೊಂಡಿದ್ದಾರೆ. ಇನ್ನು ದರ್ಶನ್ ಅವರ ಹುಟ್ಟುಹಬ್ಬಕ್ಕೆ ಇಡೀ ಸ್ಯಾಂಡಲ್ ವುಡ್ (Sandalwood) ವಿಶ್ ಮಾಡಿದೆ. ಇದನ್ನೂ ಓದಿ:House Constriction: 40 ಲಕ್ಷ ರೂ. ಗಳಲ್ಲಿ ನಿರ್ಮಿಸಿ ಬಂಗಲೆಯಂಥ ಮನೆ; 2 ಪ್ಲೋರ್, 4 BHK, 1RK, ಪಕ್ಕಾ ಪೈಸಾ ವಸೂಲ್ ಮನೆ!

ಹೌದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಬಹುತೇಕ ಕಲಾವಿದರು, ದರ್ಶನ್ ಅಭಿಮಾನಿಗಳು ಸಿನಿಪ್ರಿಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳು ತಿಳಿಸಿದ್ದಾರೆ ಲಕ್ಷಾಂತರ ಜನ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಬೆಸ್ಟ್ ವಿಶಸ್ ಹೇಳಿದ್ದಾರೆ ಇದರ ಜೊತೆಗೆ ಒಳ್ಳೆಯ ಹುಡುಗ ಪ್ರಥಮ್ ಕೂಡ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಪತ್ರವನ್ನು ಬರೆದು ಸೋಶಿಯಲ್ ಮೀಡಿಯಾ (Social Media) ದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಸ್ವಲ್ಪವೂ ಫಿಲ್ಟರ್ ಇಲ್ಲದೆ ಮಾತನಾಡುವ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ (Olle Huduga Pratham) ಇದೀಗ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿ, ದರ್ಶನ್ ಅವರೈಗೆ ಸಲಹೆ ನೀಡಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದೀಗ ಒಳ್ಳೆ ಹುಡುಗ ಪ್ರಥಮ್ ಬರೆದುಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಳ್ಳೆ ಹುಡುಗ ಪ್ರಥಮ್ ಬರೆದ ಪೋಸ್ಟ್ ನಲ್ಲಿ ಏನಿದೆ?

“ಹ್ಯಾಪಿ ಬರ್ತಡೆ ದರ್ಶನ್ ಸರ್ ಎರಡು ಮಾತು ಹೇಳ್ತೀನಿ ದಯವಿಟ್ಟು ಸ್ವೀಕರಿಸಿ.

ಮೊದಲನೆಯದಾಗಿ ಅಂಬರೀಶ್ ಅವರ ನಂತರ ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡ ಮಾಸ್ ಹೀರೋ ನೀವು. ಭಗವಂತ ಎಲ್ಲಾ ಕೊಟ್ಟಿದ್ದಾನೆ. ನಿಮಗೆ ಎಷ್ಟು ಫ್ಯಾನ್ಸ್ ಇದ್ದಾರೆ ನೋಡಿ. ಇಷ್ಟಿದ್ಮೇಲೆ ಕೂಲ್ ಆಗಿರಿ ಆರಾಮಾಗಿರಿ.

ಎರಡನೆಯದಾಗಿ ನಿಮ್ಮ ಮತ್ತು ಮಾಧ್ಯಮದ ನಡುವಿನ ಮುನಿಸು ನಿಲ್ಲಲಿ. ನೀವು ಮತ್ತು ಮಾಧ್ಯಮ ಒಂದಾಗಲಿ ಅನ್ನೋದೇ ಪ್ರಾಮಾಣಿಕ ಆಸೆ. ಇವತ್ತು ಅಂಬರೀಶ್ ಸರ್ ಇದ್ದಿದ್ರೆ ನಿಮ್ಮ ಮಾಧ್ಯಮದ ನಡುವಿನ ಬಿರುಕು ಬೆಳೆಯೋಕೆ ಬಿಡ್ತಿರಲಿಲ್ಲ. ನಿಮ್ಮ ಹಿತ ಬಯಸುವವರು ಪ್ರಾಮಾಣಿಕವಾಗಿ ಸಂಧಾನ ಮಾಡಿ ನೀವು ಮಾಧ್ಯಮ ಒಂದಾಗಲಿ ಅದೇ ನಿಮ್ಮ ಬರ್ತಡೇ ಗಿಫ್ಟ್ ನಿಮ್ಮ ಅಭಿಮಾನಿಗಳಿಗೆ ಸಿಗಲಿ ಎಂಬುದೇ ನನ್ನಾಸೆ”. ಈ ರೀತಿಯಾಗಿ ಬರೆದುಕೊಂಡಿದ್ದಾರೆ.

ಇನ್ನು ಒಳ್ಳೆ ಹುಡುಗ ಪ್ರಥಮ್ ಬರೆದ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಪ್ರಥಮ್ ಅವರ ಮಾತನ್ನು ಕೆಲವರು ಬೆಂಬಲಿಸಿದ್ದಾರೆ. ಇನ್ನು ಕೆಲವರು ಮೀಡಿಯಾ ನಮ್ಮ ಬಾಸ್ ನ್ನು ಬೇಡ ಅಂದಮೇಲೆ ನಮಗೂ ಮೀಡಿಯಾ ಬೇಡ ಅಂತ ಗರಂ ಆಗಿ ಕಮೆಂಟ್ ಮಾಡಿದ್ದಾರೆ.

Comments are closed.