Film News: ಜೀವಕ್ಕೆ ಜೀವ ಕೊಟ್ಟು ಪ್ರೀತಿ ಮಾಡುತ್ತಿದ್ದ, ಸಮಂತಾ, ನಾಗ ಚೈತನ್ಯ ದೂರವಾಗುವಂತೆ ಮಾಡಿದ್ದು ನಾಗಾರ್ಜುನ, ಕೊನೆಗೆ ಬಯಲಾಯ್ತು ಅಸಲಿ ಸತ್ಯ. ಏನು ಗೊತ್ತೇ?

Film News: ತೆಲುಗು ಚಿತ್ರರಂಗದ ಸ್ಟಾರ್ ಜೋಡಿ ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಬೇರೆಯಾಗಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದು ಹೋಗಿದೆ. ಬಹಳ ವರ್ಷಗಳ ಕಾಲ ಪ್ರೀತಿಸಿ, ಕುಟುಂಬಗಳನ್ನು ಒಪ್ಪಿಸಿ ಈ ಜೋಡಿ ಮದುವೆಯಾದರು. ಇವರ ಮೇಲೆ ಅಭಿಮಾನಿಗಳ ಪ್ರೀತಿ ಹೇಗಿತ್ತು ಅಂದ್ರೆ, ಲವ್ ಮ್ಯಾರೇಜ್ ಆದರೆ ಇವರ ಹಾಗೆ ಇರಬೇಕು ಎನ್ನುತ್ತಿದ್ದರು ಫ್ಯಾನ್ಸ್. ಆದರೆ ಇವರಿಬ್ಬರ ಮುದ್ದಾದ ಜೋಡಿ ಮೇಲೆ ಯಾರ ಕಣ್ಣು ಬಿತ್ತೋ, ಈ ಜೋಡಿ ಮದುವೆಯಾದ ನಾಲ್ಕು ವರ್ಷಗಳಿಗೆ ಬೇರೆಯಾದರು. ಇಂದಿಗೂ ಇವರಿಬ್ಬರು ಒಂದಾಗಲಿ ಎಂದು ಇವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಹಾಗೆಯೇ ಇವರಿಬ್ಬರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳು ಕೂಡ ವೈರಲ್ ಆಗುತ್ತದೆ. ತುಂಬಾ ಪ್ರೀತಿಯಿಂದ ಇದ್ದ ಸ್ಯಾಮ್ ಚೈತು ಜೋಡಿ ವಿಚ್ಚೇದನ ಪಡೆಯುವುದಕ್ಕೆ ಕಾರಣ ಏನು ಎಂದು ಅಭಿಮಾನಿಗಳಲ್ಲಿ ಕೂಡ ಕುತೂಹಲ ಇತ್ತು. ಅದಕ್ಕೆ ಕೆಲವರು ಅಕ್ಕಿನೇನಿ ಕುಟುಂಬ ಹಾಕಿದ ಕಂಡೀಷನ್ ಗಳ ಕಾರಣದಿಂದ ಸಮಂತಾ ಅವರು ವಿಚ್ಛೇದನ ನೀಡಿದರು ಎಂದರೆ, ಇನ್ನು ಕೆಲವರು ಸಮಂತಾ ಅವರಿಗೆ ಬೇರೆಯವರ ಜೊತೆಗೆ ಸಂಬಂಧ ಇತ್ತು ಆ ಕಾರಣಕ್ಕೆ ಚೈತು ವಿಚ್ಛೇದನ ನೀಡಿದರು ಹೇಳೋದಕ್ಕೆ ಶುರು ಮಾಡಿದರು. ಆದರೆ ಅಸಲಿ ವಿಚಾರ ಬೇರೆಯೇ ಇದೆ..ಈ ರೀತಿ ಆಗೋದಕ್ಕೆ ನಾಗಾರ್ಜುನ ಅವರು ತೆಗೆದುಕೊಂಡು ಆ ಒಂದು ನಿರ್ಧಾರ ಕೂಡ ಕಾರಣ ಆಗಿರಬಹುದು ಎಂದು ನಾಗಾರ್ಜುನ ಅವರ ಆಪ್ತರು ಹೇಳುತ್ತಿದ್ದಾರೆ.

ಮೊದಲಿನಿಂದಲೂ ನಾಗಾರ್ಜುನ ಅವರಿಗೆ ಜಾತಕ, ಜ್ಯೋತಿಷ್ಯದ ಮೇಲೆ ನಂಬಿಕೆ ಇಲ್ಲ. ಚೈತನ್ಯ ಮತ್ತು ಸಮಂತಾ ಅವರ ಜಾತಕ ನೋಡಿದ ಜ್ಯೋತಿಷಿಗಳು, 2017ರ ಅಕ್ಟೋಬರ್ 6 ರಂದು ಮದುವೆ ಮಾಡುವುದು ಬೇಡ ಒಳ್ಳೆಯದಾಗುವುದಿಲ್ಲ ಎಂದು ಸಲಹೆ ನೀಡಿದ್ದರಂತೆ. ಆದರೆ ನಾಗಾರ್ಜುನ ಅವರು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳದೆ, ಮದುವೆ ಮಾಡಿಸಿದರು. ಕೊನೆಗೆ ಈ ಜೋಡಿ ಬೇರೆ ಆಗುವ ಹಾಗೆ ಆಯಿತು. ಹೀಗಾಗುವುದಕ್ಕೆ ಒಂದು ರೀತಿಯಲ್ಲಿ ನಾಗಾರ್ಜುನ ಅವರೇ ಕಾರಣ. ಒಂದು ವೇಳೆ ನಾಗಾರ್ಜುನ ಅವರು ಈ ನಿರ್ಧಾರ ತೆಗೆದುಕೊಳ್ಳದೆ ಹೋಗಿದ್ದರೆ, ಚೈತನ್ಯ ಸಮಂತಾ ಬೇರೆ ಆಗುತ್ತಿರಲಿಲ್ಲವೇನೋ ಎನ್ನುತ್ತಿದ್ದಾರೆ ನೆಟ್ಟಿಗರು.

Comments are closed.