kannada Serial: ಕೊನೆಗೂ ಕಾರಣ ಸಿಕ್ತು; ರಾಜ್ಯವೇ ಮೆಚ್ಚಿರುವ ಭಾಗ್ಯ ರವರನ್ನು ಬಿಟ್ಟು ತಾಂಡವ್ ಯಾಕೆ ಮತ್ತೊಂದು ಪ್ರೀತಿಯಲ್ಲಿ ಇದ್ದಾನೆ ಗೊತ್ತೇ??

kannada Serial: ಭಾಗ್ಯಲಕ್ಷ್ಮಿ ಧಾರವಾಹಿ ಈಗ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದೆ. ಈ ಧಾರವಾಹಿಯಲ್ಲಿ ಈಗ ವೈಷ್ಣವ್ ಮತ್ತು ಲಕ್ಷ್ಮಿ ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದು, ವೈಷ್ಣವ್ ಗೆ ಈ ಮದುವೆ ಬೇಡದ ಹೋದರು, ಕೀರ್ತಿಗೆ ಹೊಟ್ಟೆ ಉರಿಸಿ ಆಕೆಯನ್ನೇ ಮದುವೆ ಆಗಬೇಕು ಎಂದು ವೈಷ್ಣವ್ ಪ್ಲಾನ್ ಮಾಡಿಕೊಂಡಿದ್ದಾನೆ. ಈ ಧಾರವಾಹಿಯ ಪ್ರಮುಖ ಜೋಡಿ ತಾಂಡವ್ ಮತ್ತು ಭಾಗ್ಯ. ಭಾಗ್ಯ ತುಂಬಾ ಒಳ್ಳೆಯ ಹೆಣ್ಣು, ಮನೆಯ ಜವಾಬ್ದಾರಿ, ಅತ್ತೆ ಮಾವ ಗಂಡ, ಮಕ್ಕಳು ಎಲ್ಲಾ ಜವಾಬ್ದಾರಿಯನ್ನು ಭಾಗ್ಯ ತೆಗೆದುಕೊಂಡಿದ್ದಾಳೆ.

ಗಂಡನ ಯಾವುದೇ ಕೆಲಸ ಆದರು ಸರಿ ಮಾಡುತ್ತಾಳೆ ಭಾಗ್ಯ. ಆದರೆ ಭಾಗ್ಯ ಏನೇ ಮಾಡಿದರೂ, ಎಷ್ಟೇ ಒಳ್ಳೆಯ ಕೆಲಸ ಮಾಡಿದರು ತಾಂಡವ್ ಗೆ ಭಾಗ್ಯಳನ್ನು ಕಂಡರೆ ಇಷ್ಟವಿಲ್ಲ. ತಾಂಡವ್ ಗೆ ಶ್ರೇಷ್ಠ ಮೇಲೆ ಪ್ರೀತಿ. ಭಾಗ್ಯ ಮುಗ್ಧವಾಗಿ, ಹಳ್ಳಿ ಹುಡುಗಿಯ ಹಾಗೆ ಸಿಂಪಲ್ ಆಗಿ ಇರುವುದು ತಾಂಡವ್ ಗೆ ಇಷ್ಟವಿಲ್ಲ. ತಾಂಡವ್ ಗೆ ಶ್ರೇಷ್ಠ ಮೇಲೆ ಪ್ರೀತಿ, ಭಾಗ್ಯ ಏನೇ ಮಾಡಿದರು ಅವಳಿಗೆ ಬಾಯಿಗೆ ಬಂದ ಹಾಗೆ ಬಯ್ಯುವುದು, ಅವಮಾನ ಮಾಡುವುದು, ಮನಸ್ಸಿಗೆ ನೋವು ಮಾಡುವುದು ಮಾಡುತ್ತಾನೆ. ಮುಗ್ಧೆ ಭಾಗ್ಯ ಗಂಡ ಏನೇ ಮಾಡಿದರೂ ಸಹಿಸಿಕೊಂಡಿದ್ದಾಳೆ.

ಗಂಡನಿಂದ ನೋವಾಗುತ್ತಿದ್ದರು ಸಹ ಅದನ್ನು ಹೊರಗಡೆ ಹೇಳಿಕೊಳ್ಳದೆ, ತನ್ನಲ್ಲೇ ಅನುಭವಿಸುತ್ತಿದ್ದಾಳೆ. ಧಾರವಾಹಿ ನೋಡುವ ವೀಕ್ಷಕರಲ್ಲಿ ಶುರುವಾಗಿರುವ ಒಂದು ಪ್ರಶ್ನೆ ಏನು ಎಂದರೆ, ಭಾಗ್ಯ ಅಷ್ಟೆಲ್ಲಾ ಮಾಡಿದರು ತಾಂಡವ್ ಗೆ ಹೆಂಡತಿಯನ್ನು ಕಂಡರೆ ಯಾಕೆ ಇಷ್ಟವಿಲ್ಲ ಎನ್ನುವುದು. ಅದಕ್ಕೆ ಖುದ್ಧು ತಾಂಡವ್ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಉತ್ತರ ಕೊಟ್ಟಿದ್ದು, “ಕೆಲಸದ ಬಗ್ಗೆ ಗಮನ ಕೊಡೋ ಶ್ರೇಷ್ಠ ಅಂದ್ರೆ ತಾಂಡವ್ ಗೆ ಇಷ್ಟ. ಶ್ರೇಷ್ಠ ಬುದ್ಧಿವಂತೆ ಜೊತೆಗೆ ಸ್ಮಾರ್ಟ್. ಭಾಗ್ಯ ತುಂಬಾ ಒಳ್ಳೆಯವಳು, ಆದರೆ ತಾಂಡವ್ ಭಾಗ್ಯಳನ್ನು ನೋಡುವಂಥ ಹುಡುಗ ಅಲ್ಲ, ಬೇರೆ ಹುಡುಗರಿಗೆ ಭಾಗ್ಯ ಇಷ್ಟ ಆಗ್ತಾಳೆ..” ಎಂದು ಹೇಳಿದ್ದಾರೆ. ಈ ರೀತಿಯಾಗಿ ಕೊನೆಗೂ ವೀಕ್ಷಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

Comments are closed.