IPL 2023: ಈ ಬಾರಿ ಐಪಿಎಲ್ ಕಪ್ ಯಾರ ಪಾಲಿಗೆ? ಪಂದ್ಯ ಆರಂಭಕ್ಕೂ ಮೊದಲೇ ಇವೆಲ್ಲಾ ಬೇಕಿತ್ತಾ? ಇಷ್ಟಕ್ಕೂ ಶ್ರೀಶಾಂತ್ ಹೇಳಿದ್ದೇನು ಗೊತ್ತೇ?

20223 ಐಪಿಎಲ್ ಗೆ ಕ್ಷಣಗಣನೆ ಶುರು ಆಗಿದೆ. ಕಪ್ ಯಾರೇ ಗೆಲ್ಲಲಿ, ಕರ್ನಾಟಕದವರು ಮಾತ್ರ ಆರ್ ಸಿ ಬಿಗೇ ಸಪ್ಪೋರ್ಟ್ ಮಾಡುವುದನ್ನು ಅಂತೂ ನಿಲ್ಲಿಸಿಲ್ಲ. 2008ರಿಂದ ಈವರೆಗೂ ಆರ್ಸಿಬಿ ಕಪ್ಪು ಗೆಲ್ಲದೆ ಇದ್ರೂ ಕರ್ನಾಟಕದ ಜನತೆ ಕಪ್ ನಮ್ದೇ ಅಂತಹ ಬೀಗುತ್ತಲೆ ಇದ್ದಾರೆ. ಆರ್‌ಸಿಬಿಗೆ ಅತಿ ಹೆಚ್ಚು ಫ್ಯಾನ್ಸ್ ಇದ್ದಾರೆ. ಈ ಬಾರಿಯಾದರೂ ಆರ್‌ಸಿಬಿ ಐಪಿಎಲ್ ಕಪ್ ಅನ್ನು ತಮ್ಮದಾಗಿಸಿಕೊಳ್ಳುತ್ತಾ ಅಂತ ಜನ ಕಾಯುತ್ತಿದ್ದಾರೆ.

ಇನ್ನು ಇತ್ತೀಚಿಗೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ಕೂಡ ಆರ್‌ಸಿಬಿ ತಂಡ ಕಪ್ ಗೆಲ್ಲುವುದರ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ಖಾಸಗಿ ವಾಹಿನಿ ಒಂದರ ಸಂದರ್ಶನದಲ್ಲಿ ಮಾತನಾಡಿರುವ ಎಸ್ ಶ್ರೀಶಾಂತ್, ಈ ಬಾರ್ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆಲ್ಲೋದಕ್ಕೆ ಚಾನ್ಸ್ ಇಲ್ಲ ಅಂತ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರ ಕ್ರಿಕೆಟ್ ಚಾಣಕ್ಯತೆಯನ್ನು ಮರೆಯುವ ಹಾಗೆ ಇಲ್ಲ. ಆರ್‌ಸಿಬಿ ಗೆದ್ದರೆ ವಿರಾಟ್ ಕೊಹ್ಲಿ ಅವರಿಗೆ ಮತ್ತೊಂದು ಗೌರವ ಸಿಕ್ಕಿದಂತಾಗುತ್ತದೆ. ಇತ್ತೀಚಿನ ಟೀಮ್ ಇಂಡಿಯಾದ ಬೆಳವಣಿಗೆ ನೋಡಿದರೆ ಆರ್‌ಸಿಬಿ ಗೆಲ್ಲುವ ಭರವಸೆ ಕೂಡ ಹೆಚ್ಚಾಗಿದೆ ಎಂದು ಶ್ರೀಶಾಂತ್ ತಮ್ಮ ಭರವಸೆಯ ಮಾತನ್ನು ಹೇಳಿದ್ದಾರೆ.

ಒಂದೇ ತಂಡ ಗೆದ್ದರೆ ಆಟದಲ್ಲಿ ಮಜಾ ಇರುವುದಿಲ್ಲ. ಗೆಲುವು ಬದಲಾದರೆ ಆಟ ಇನ್ನಷ್ಟು ರೋಚಕವಾಗಿರುತ್ತದೆ ಕ್ರೀಡಾ ಅಭಿಮಾನಿಗಳ ನಿರೀಕ್ಷೆ ಕೂಡ ಇಮ್ಮಡಿಯಾಗುತ್ತೆ. ಆರ್ಸಿಬಿ ಈಗಾಗಲೇ ಹರಾಜು ಪ್ರಕ್ರಿಯೆಯಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದ್ದು ಈ ಬಾರಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಶ್ರೀಶಾಂತ್ ಅವರ ಅಭಿಪ್ರಾಯ. ಇವರ ಈ ಭವಿಷ್ಯ ನಿಜವಾಗಲೂ ಕ್ರಿಕೆಟ್ ಅಭಿಮಾನಿಗಳ ಆಶಯ.

Comments are closed.