Relationship: ಗಂಡನಿಗೆ ಕೈ ಕೊಡಲು ಪ್ರಿಯಕರ ಕೊಟ್ಟ ಭರ್ಜರಿ ಆಫರ್: ಒಪ್ಪಿಕೊಂಡ ಮಹಿಳೆ, ಕೊನೆಗೆ ಮಾಡಿದ ಗಟ್ಟಿ ನಿರ್ಧಾರ ಏನು ಗೊತ್ತೇ??

Relationship:ಇತ್ತೀಚಿನ ವರ್ಷಗಳಲ್ಲಿ ಮದುವೆಯ ಸಂಬಂಧಗಳಲ್ಲಿ ಗಂಡ ಹೆಂಡತಿ ತಮ್ಮಿಬ್ಬರನ್ನು ಬಿಟ್ಟು, ಗಂಡನಿಗೆ ಗೊತ್ತಾಗದ ಹಾಗೆ ಹೆಂಡತಿ, ಹೆಂಡತಿಗೆ ಗೊತ್ತಾಗದ ಹಾಗೆ ಗಂಡ ಬೇರೆಯವರೊಡನೆ ಸಂಬಂಧ ಇಟ್ಟುಕೊಳ್ಳುವುದು ಸಾಮಾನ್ಯ ಎನ್ನುವ ಹಾಗೆ ಆಗಿದೆ. ಇದರಿಂದ ತಮ್ಮ ಪಾರ್ಟ್ನರ್ ಗೆ ತೊಂದರೆ ಆಗುತ್ತಿದೆ, ಕೆಲವೊಂದು ಕೇಸ್ ಗಳಲ್ಲಿ ಪ್ರಾಣವೇ ಹೋಗುತ್ತಿದೆ. ಇಂಥದ್ದೊಂದು ಘಟನೇ ಭದ್ರಾದ್ರಿ ಕೊತಗುಡೇಮ್ ಎನ್ನುವ ಊರಿನಲ್ಲಿ ನಡೆದಿದ್ದು, ಲವ್ವರ್ ಕೊಟ್ಟ ಆಫರ್ ಗೆ ಈ ಹೆಣ್ಣು ಮದುವೆಯಾದ ಗಂಡನಿಗೆ ಏನು ಮಾಡಿದ್ದಾಳೆ ಗೊತ್ತಾ?

32 ವರ್ಷದ ಪ್ರವೀಣ್ 5 ವರ್ಷಗಳ ಹಿಂದೆ ಲಾವಣ್ಯ ಎನ್ನುವ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಆರಂಭದಲ್ಲಿ ಇವರ ಸಂಸಾರ ಚೆನ್ನಾಗಿಯೇ ಇತ್ತು, ನಂತರ ಇಬ್ಬರ ನಡುವೆ ಜಗಳಗಳು ಶುರುವಾಗಿ ದೊಡ್ಡವರು ಹೇಳಿದ ಮಾತು ಕೇಳದೆ, ಇಬ್ಬರು ಬೇರೆ ಬೇರೆ ಜೀವನ ನಡೆಸುತ್ತಿದ್ದರು.

ಈ ಸಮಯದಲ್ಲಿ ಲಾವಣ್ಯಗೆ ಎದುರಿಮನೆಯ ಸುಮಂತ್ ಮೇಲೆ ಪ್ರೀತಿ ಶುರುವಾಯಿತು, ಇಬ್ಬರ ನಡುವೆ ಸಂಬಂಧ ಶುರುವಾಗಿ ಇಬ್ಬರು ಕೂಡ ಆಗಾಗ ಎಂಜಾಯ್ ಮಾಡುತ್ತಿದ್ದರು. ಆಗ ಸುಮಂತ್ ಲಾವಣ್ಯಗೆ ನಿನ್ನ ಗಂಡನನ್ನು ಬಿಟ್ಟು ನನ್ನ ಜೊತೆಗೆ ಬಂದುಬಿಡು ಎಂದು ಹೇಳಿದ, ಅದಕ್ಕೆ ಲಾವಣ್ಯ ಕೂಡ ಒಪ್ಪಿ, ಗಂಡನನ್ನು ಮುಗಿಸಿಬಿಡಬೇಕು ಎಂದು ಪ್ಲಾನ್ ಮಾಡಿಕೊಂಡಳು.

ಅದೇ ರೀತಿ ಕಳೆದ ಭಾನುವಾರ ಲಾವಣ್ಯ ಗಂಡ ಆಕೆಯ ಮನೆಗೆ ಬಂದು ಜಗಳ ಅಡುವುದಕ್ಕೆ ಶುರು ಮಾಡಿದ, ಆಗ ಇಬ್ಬರ ನಡುವೆ ಜಗಳ ತಾರಕಕ್ಕೆ ಏರಿ, ಕೋಪದಲ್ಲಿ ಒಂದು ಕಬ್ಬಿಣದ ರಾಡ್ ತೆಗೆದುಕೊಂಡು ಅವನಿಗೆ ಜೋರಾಗಿ ಹೊಡೆದಿದ್ದಾಳೆ, ತಕ್ಷಣವೇ ಕೆಳಗೆ ಬಿದ್ದ ಪ್ರವೀಣ್ ಗೆ ಅತಿಹೆಚ್ಚು ರಕ್ತಸ್ರಾವ ಆಗಿತ್ತು, ತಕ್ಷಣವೇ ಸ್ಥಳೀಯರು ಮತ್ತು ಪ್ರವೀಣ್ ತಂದೆ ತಾಯಿ ಬಂದು ಆತನನ್ನು ಆಸ್ಪತ್ರೆಗೆ ಸೇರಿಸಿದರು, ಆದರೆ ವೈದ್ಯರ ಚಿಕಿತ್ಸೆ ಫಲ ನೀಡದೆ ಪ್ರವೀಣ್ ಇನ್ನಿಲ್ಲವಾದ.

ಕೊನೆಗೆ ಪೊಲೀಸರಿಗೆ ವಿಚಾರ ಹೋಗಿ, ಪೊಲೀಸರು ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ. ಇತ್ತ ಲಾವಣ್ಯ ಈ ಕೆಲಸ ಮಾಡಿದ ನಂತರ ಲವ್ವರ್ ಸುಮಂತ್ ಜೊತೆಗೆ ಓಡಿ ಹೋಗಿದ್ದು, ಆಕೆಯನ್ನು ಪೊಲೀಸರು ಹುಡುಕುತ್ತಿದ್ದಾರೆ.

Comments are closed.