Crime news: ಹೆಂಡತಿ ಮೇಲೆ ಅನುಮಾನ ಪಟ್ಟು, ರಾತ್ರೋ ರಾತ್ರಿ ಹೆಂಡತಿಗೆ ತಿಳಿಯದಂತೆ ಮನೆಗೆ ನುಗ್ಗಿದ ಗಂಡ: ರೂಮ್ ನಲ್ಲಿ ಹೆಂಡತಿ ಏನು ಮಾಡುತ್ತಿದ್ದಳು ಗೊತ್ತೇ??

Crime news: ದಾಂಪತ್ಯ ಜೀವನದಲ್ಲಿ ಅನುಮಾನ ಎನ್ನುವುದು ವಿಷ ಬೀಜದ ಹಾಗೆ, ಇದು ಒಂದು ಸಾರಿ ಶುರುವಾದರೆ, ಸಂಸಾರವೇ ನಾಶ ಆಗುವುದು ಖಂಡಿತ. ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಪ್ರಕಾಶಮ್ ಜಿಲ್ಲೆಯಲ್ಲಿ ನಡೆದಿರುವ ಘಟನೆ ಇದು. ಅಷ್ಟು ಒಳ್ಳೆಯ ಹೆಂಡತಿಯ ಮೇಲೆ ಕಾರಣವೇ ಇಲ್ಲದೆ ಅನುಮಾನ ಪಟ್ಟ ಗಂಡ, ಕೊನೆಗೆ ಆಕೆ ಎಂಥಹ ಸ್ಥಿತಿಗೆ ತಲುಪುವ ಹಾಗೆ ಮಾಡಿದ್ದಾನೆ ಅಂದ್ರೆ.. ಅದನ್ನ ತಿಳಿದರೆ ನೀವು ಕೂಡ ಕಣ್ಣೀರು ಹಾಕುತ್ತೀರಿ.. ಇವರಿಬ್ಬರ ಜೀವನದಲ್ಲಿ ಏನಾಯಿತು ಎಂದು ತಿಳಿಸುತ್ತೆ ನೋಡಿ..

ಪ್ರಕಾಶಮ್ ಜಿಲ್ಲೆಯಲ್ಲಿ ಸುನೀತಾ ಶ್ರೀನು ಎನ್ನುವ ದಂಪತಿ ವಾಸವಾಗಿದ್ದರು. ಇವರಿಬ್ಬರಿಗೆ ಮದುವೆಯಾಗಿ ಬಹಳ ವರ್ಷಗಳೇ ಕಳೆದಿತ್ತು. ಆರಂಭದ ಕೆಲ ವರ್ಷಗಳಲ್ಲಿ ಇವರ ಸಂಸಾರ ಬಹಳ ಚೆನ್ನಾಗಿಯೇ ಸಾಗುತ್ತಿತ್ತು, ಆದರೆ ಇದ್ದಕ್ಕಿದ್ದ ಹಾಗೆ ಗಂಡನಿಗೆ ಹೆಂಡತಿಯ ಮೇಲೆ ಅನುಮಾನ ಶುರುವಾಯಿತು.

ಆತ ಹೆಂಡತಿಗೆ ತೊಂದರೆ ಕೊಡುವುದಕ್ಕೆ ಶುರು ಮಾಡಿದ. ಸಂಸಾರ ಎಂದಮೇಲೆ ಇದೆಲ್ಲವೂ ಕಾಮನ್ ಎಂದುಕೊಂಡ ಸುನೀತಾ, ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಶ್ರೀನು ಅನುಮಾನ ಮಾತ್ರ ಕಡಿಮೆ ಆಗಲಿಲ್ಲ. ಆದರೆ ಇವನು ಕೊಡುತ್ತಿದ್ದ ಕಾಟ ಜಾಸ್ತಿ ಆಗಿ ಅದು ಮನೆಯವರೆಗು ಹೋಯಿತು.

ದೊಡ್ಡವರೆಲ್ಲ ಕೂತು ಬುದ್ಧಿ ಹೇಳಿದಾಗ, ಆತ ಇನ್ನುಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿದನು, ಆದರೆ ಅವನ ಅವಮಾನ ಮುಗಿಯಲೇ ಇಲ್ಲ. ಕೊನೆಗೆ ಈ ಸೋಮವಾರ, ಮಲಗಿದ್ದ ವೇಳೆ ರೂಮಿಗೆ ನುಗ್ಗಿದ ಶ್ರೀನು ಹೆಂಡತಿಯನ್ನು ಎಬ್ಬಿಸಿ ಜಗಳ ಆಡುವುದಕ್ಕೆ ಶುರು ಮಾಡಿದ್ದಾನೆ, ಕೋಪ ಹೆಚ್ಚಾಗಿ ಕೊನೆಗೆ ಹೆಂಡತಿಯನ್ನೇ ಮುಗಿಸಿಬಿಟ್ಟಿದ್ದಾನೆ.

ಇದನ್ನು ನೋಡಿದ ಅಕ್ಕಪಕ್ಕದ ಜನರು ತಕ್ಷಣವೇ ಪೊಲೀಸರಿಗೆ ತಿಳಿಸಿದ್ದು, ಅವರು ಬಂದು ಸುನೀತಾ ದೇಹವನ್ನು ಪರೀಕ್ಷೆಗೆ ಕಳಿಸಿದ್ದು, ಸುನೀತಾ ತಂದೆ ತಾಯಿ ಮಗಳಿಗೆ ಹೀಗಾಯಿತು ಎಂದು ಕಣ್ಣೀರು ಹಾಕಿದ್ದಾರೆ. ಶ್ರೀನುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Comments are closed.