Crime news:ಮೊಬೈಲ್ ನಲ್ಲಿ ಹೆಂಡತಿ ಬೇರೆಯವರೊಂದಿಗೆ ಮಾತನಾಡುತ್ತಿದ್ದಾಳೆ ಎಂದು, ಗಂಡ ಒಂದು ಹೆಜ್ಜೆ ಮುಂದೆ ಹೋಗಿ ಕಂಡು ಹಿಡಿದು ಮಾಡಿದ್ದೇನು ಗೊತ್ತೇ? ಇದು ಬೇಕಿತ್ತಾ?

Crime news: ದಾಂಪತ್ಯ ಜೀವನದಲ್ಲಿ ಅನುಮಾನ ಎನ್ನುವ ಹುಳ ಶುರುವಾದರೆ ಅದನ್ನು ಸರಿ ಮಾಡುವುದು ಬಹಳ ಕಷ್ಟ. ಒಂದು ಸಾರಿ ಅನುಮಾನದ ಹುಳ ತಲೆಯೊಳಗೆ ಬಂದರೆ ನೋಡಿದ್ದೆಲ್ಲವು ಅನುಮಾನದ ದೃಷ್ಟಿಯಲ್ಲೇ ತೋರುತ್ತದೆ. ಅನುಮಾನ ಹೆಚ್ಚಾದರೆ ಅದರಿಂದ ಅನಾಹುತಗಳು ಕೂಡ ನಡೆದುಹೋಗುತ್ತದೆ. ಇಂಥದ್ದೊಂದು ಘಟನೆ ಭೂಪಾಲ್ ಪಲ್ಲಿಯಲ್ಲಿ ಇತ್ತೀಚೆಗೆ ನಡೆದಿದ್ದು, ಹೆಂಡತಿ ಮೇಲಿನ ಅನುಮಾನದಿಂದ ಏನು ನಡೆದಿದೆ ಗೊತ್ತಾ? ಇದನ್ನೂ ಓದಿ: Kannada film News: ರಗಡ್‌ ಲುಕ್‌ನಲ್ಲಿ ಕಮಾಲ್‌ ಮಾಡಲಿದ್ದಾರೆ ಸಲಗ ಸೂರಿ ಖ್ಯಾತಿಯ ದಿನೇಶ್‌ ಕುಮಾರ್! “ಮಾರಿಗುಡ್ಡದ ಗಡ್ಡಧಾರಿಗಳು” ಏ.14ರಂದು ತೆರೆಗೆ!

ಪೆದ್ದ ಪಲ್ಲಿ ಜಿಲ್ಲೆಯ ಮಂಥನಿ ಮಂಡಲದ ಎರ್ರಯ್ಯ ಅವರ ಮಗಳು ಲಕ್ಷ್ಮಿ ಎನ್ನುವವರ ಜೊತೆಗೆ ಭೂಪಾಲಪಲ್ಲಿ ಜಿಲ್ಲೆಯ ಮಲ್ಹಾರ ಮಂಡಲದ ರುದ್ರಾರಾಮ್ ಗ್ರಾಮದ ಮೂಡೆತ್ತುಲ ರಮೇಶ್ ಎನ್ನುವವರ ಜೊತೆಗೆ 2008ರಲ್ಲಿ ಮದುವೆ ಆಗಿತ್ತು. ಇವರಿಬ್ಬರಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇಬ್ಬರು ಇದ್ದಾರೆ. ಮದುವೆಯಾಗಿ ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ, ಒಂದು ಫೋನ್ ಇಂದಾಗಿ ಇವರಿಬ್ಬರ ನಡುವೆ ಅನುಮಾನ ಶುರುವಾಯಿತು.

ಆಕೆಯ ಗಂಡನಿಗೆ ತನ್ನ ಹೆಂಡತಿ ಬೇರೆ ಯಾರದ್ದೋ ಜೊತೆಯಲ್ಲಿ ಮಾತನಾಡುತ್ತಿದ್ದಾಳೆ ಎಂದು ಅನುಮಾನ ಶುರುವಾಯಿತು. ಈ ವಿಷಯದಿಂದ ಗಂಡನಿಗೆ ಹೆಂಡತಿ ಮೇಲೆ ಕೋಪ ಅನುಮಾನ ಶುರುವಾಗಿ, ಹೆಂಡತಿ ಜೊತೆಗೆ ಜಗಳ ಆಡಲು ಶುರು ಮಾಡಿದ, ಇದರಿಂದ ಆಕೆ ಗಂಡನ ಜಗಳ ತಾಳಲಾರದೆ ತಂದೆ ಮನೆಗೆ ಹೊರಟು ಹೋದರು. ಆದರೆ ಮನೆಯವರೆಲ್ಲಾ ಕೂತು ಮಾತುಕತೆ ನಡೆಸಿ, ರಾಜಿ ಮಾಡಿಸಿದ್ದಾರೆ. ಗಂಡ ಹೆಂಡತಿ ಮನಸ್ತಾಪ ಸರಿಮಾಡಿಕೊಂಡು, ಆಕೆ ಕಳೆದ ಮಂಗಳವಾರ ಗಂಡನ ಮನೆಗೆ ಹೋದರು.. ಇದನ್ನೂ ಓದಿ: Karnataka Politics: ಕುಮಾರಣ್ಣನ ವಿರುದ್ಧ ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು; ಬಿಜೆಪಿ ಪರ ಎಂದಿದ್ದಕ್ಕೆ ನೇರವಾಗಿ ಸುದೀಪ್ ಬಗ್ಗೆ ಹೇಳಿದ್ದೇನು ಗೊತ್ತೇ??

ಗಂಡನ ಮನೆಗೆ ಹೋದ ನಂತರ ಸುದರ್ಶನ್ ಎನ್ನುವ ವ್ಯಕ್ತಿಯಿಂದ ತೊಂದರೆಯಾಗುತ್ತಿದೆ ಎಂದು ಪೊಲೀಸರಲ್ಲಿ ದೂರು ನೀಡಿದರು. ಆದರೆ ಬುಧವಾರದ ದಿನ ಲಕ್ಷ್ಮಿ ಉಸಿರು ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಯನ್ನು ಮಹಾದೇವಪುರ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ. ಆಕೆಯ ಸಹೋದರ, ತನ್ನ ಅಕ್ಕನಿಗೆ ಈ ಸ್ಥಿತಿ ಬಂದಿದ್ದಕ್ಕೆ ಕಾರಣ ಆದವರಿಗೆ ಸರಿಯಾದ ಶಿಕ್ಷೆ ಕೊಡಬೇಕು ಎಂದು ಪೊಲೀಸರ ಬಳಿ ದೂರು ನೀಡಿದ್ದು, ಪೊಲೀಸರು ಈಗ ತನಿಖೆ ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಇತ್ಯರ್ಥವಾಗಲಿದೆ ಎಂದು ಎಸ್.ಐ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ:LIC Policy: ಒಂದು ಕಾಫಿ ಗೆ ಖರ್ಚು ಮಾಡುವ 55 ರೂಪಾಯಿ ಖರ್ಚು ಮಾಡಿ 55 ಲಕ್ಷ ಪಡೆಯುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??

Comments are closed.