Ayyappa Swami: ಇನ್ನು ಮುಂದೆ ನೀವು ಅಯ್ಯಪ್ಪನ ದರ್ಶನ ಮಾಡಬೇಕು ಎಂದರೆ ಈ ನಿಯಮ ಪಾಲಿಸಲೇಬೇಕು. ಹೊಸ ರೂಲ್ಸ್ ಘೋಷಿಸಿದ ದೇವಾಲಯ. ಏನು ಗೊತ್ತೇ??

Ayyappa Swami: ಶಬರಿಮಲೆ ಸ್ವಾಮಿ ಅಯ್ಯಪ್ಪನ (Shabarimale swamiayyappa) ದರ್ಶನ ಪಡೆಯಲು ದೇಶದ ವಿವಿಧೆಡೆಯಿಂದ ಭಕ್ತರು ಶಬರಿಮಲೆಗೆ ಬರುತ್ತಾರೆ, ಸೌತ್ ಇಂಡಿಯಾದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಶಬರಿಮಲೆ ಕೂಡ ಒಂದು, ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಅಭಿಮಾನಿಗಳು ಬರುತ್ತಾರೆ. ಈ ದೇವಸ್ಥಾನಕ್ಕೆಹೋಗಲು, ಬಹಳಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಬೇಕು, ದೀಕ್ಷೆ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ವಿಶೇಷವಾಗಿ ಪೂಜೆ ಪುನಸ್ಕಾರಗಳನ್ನು ಸಹ ಮಾಡುತ್ತಾರೆ. ಇದರಿಂದ ಜನರ ಮನಸ್ಸಿನಲ್ಲಿ ಭಕ್ತಿ ಮೂಡುತ್ತದೆ. ಮೊದಲೇ ಶಬರಿಮಲೆಗೆ ಹೋಗಲು ಬಹಳಷ್ಟು ನಿಯಮಗಳಿವೆ. ಇದನ್ನೂ ಓದಿ: Temple: ಬೆಟ್ಟದ ಮೇಲಿರುವ ಈ ದುರ್ಗಾದೇವಿಗೆ ಹಿಂದೂ ಸಂಪ್ರದಾಯದಂತೆಯೇ ಪೂಜೆ ಮಾಡುವ ಮುಸ್ಲಿಂ ಅರ್ಚಕ; ತಲ ತಲಾಂತರದಿಂದ ಮುಸ್ಲಿಮರೇ ಈ ದುರ್ಗಾದೇವಿಯನ್ನು ಯಾಕೆ ಪೂಜೆ ಮಾಡುತ್ತಿದ್ದಾರೆ ಗೊತ್ತಾ?

ಇನ್ನುಮುಂದೆ ಅಲ್ಲಿಗೆ ಹೋಗುವುದಕ್ಕೆ, ಎಲ್ಲರೂ ಪಾಲಿಸಬೇಕಾದ ನಿಯಮಗಳು ಯಾವ್ಯಾವು ಗೊತ್ತಾ? ಕೋವಿಡ್ ಶುರುವಾದ ನಂತರ ಅಯ್ಯಪ್ಪನ ಭಕ್ತರು ಶಬರಿಮಲೆಗೆ ಹೋಗುವ ಬಗ್ಗೆ ಸ್ವಲ್ಪ ಗೊಂದಲದಲ್ಲಿದ್ದರು, ದೀಕ್ಷೆ ತೆಗೆದುಕೊಳ್ಳಬೇಕೋ ಬೇಡವೋ ಎಂದು ಯೋಚನೆ ಮಾಡುವ ಹಾಗೆ ಆಗಿತ್ತು. ಆದರೆ ಈಗ ಕೋವಿಡ್ ಕಡಿಮೆ ಆಗಿರುವುದರಿಂದ, ದೇವಸ್ಥಾನದ ಸ್ಥಿತಿ ಕೂಡ ಬದಲಾಗಿದೆ, ಮಲಯಾಳಂ ಯಿನಗೌ ಕರ್ಕಿಡಕಂ ಮಾಸದ ಪೂಜೆ ಸಮಯದಲ್ಲಿ ಈಗ ದೇವಸ್ಥಾನವನ್ನು ತೆರೆಯಲಾಯಿತು. ಆ ವೇಳೆ ಐದು ದಿನಗಳ ಕಾಲ ವಿಶೇಷವಾದ ಪೂಜೆ ನಡೆಯಲಿದೆ.

ಹಾಗಾಗಿ, ಜುಲೈ 16ರಂದು ಶುಕ್ರವಾರ ಸಂಜೆಯಿಂದ ದೇವಸ್ಥಾನವನ್ನು ಓಪನ್ ಮಾಡಲಾಯಿತು. ಶನಿವಾರ ಬೆಳಗ್ಗೆ ಇಂದ ಭಕ್ತರು ಬರಲು ಅವಕಾಶ ನೀಡಲಾಗಿತ್ತು. ಕೋವಿಡ್ ಸಮಯದಲ್ಲಿ ಅಡ್ವಾನ್ಸ್ ಬುಕಿಂಗ್ ಮಾಡಿದ್ದ 5000 ಭಕ್ತರಿಗೆ ಮಾತ್ರ ಈ ಅವಕಾಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಕೂಡ ತಿಳಿಸಿದ್ದರು.ಇನ್ನು ಕೋವಿಡ್ ಎರಡನೇ ಅಲೆ ನಂತರ ಭಕ್ತರು ದೇವಸ್ಥಾನಕ್ಕೆ ಬಂದದ್ದು ಅದೇ ಮೊದಲು, ಅಂದು ಬೆಳಗ್ಗೆ ಇಂದಲೇ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಯಿತು.ಇದನ್ನೂ ಓದಿ: Crime News: ಗಂಡ ರೈಲ್ವೆ ಅಧಿಕಾರಿ; ಹೆಂಡತಿ ಬ್ಯಾಂಕ್ ಉದ್ಯೋಗಿ: ಹಣ ಬೇಕಾದಷ್ಟು ಇದ್ದರೂ, ಗಂಡ ಹಣದ ಆಸೆಗೆ ಬಿದ್ದು ಏನು ಮಾಡಿದ್ದಾನೆ ಗೊತ್ತೇ? ಇವೆಲ್ಲ ಬೇಕಿತ್ತಾ??

ಇನ್ನುಮುಂದೆ ಕೂಡ ಅದೇ ರೀತಿ, ಅಯ್ಯಪ್ಪಸ್ವಾಮಿಯ ದರ್ಶನ ಪಡೆಯಲು, ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಹಾಕಿಸಿರಬೇಕು. ಹಾಗೆಯೇ ಆರ್.ಟಿ.ಪಿ.ಸಿ.ಆರ್ ನೆಗಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ದೇವಸ್ಥಾನದ ಒಳಗೆ ಹೋಗುವ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಭಕ್ತರಿಗೆ ಐದು ದಿನಗಳು ದರ್ಶನ ಮಾಡುವ ಅವಕಾಶ ಕೊಡಲಾಗಿದೆ. ಈ ಎಲ್ಲಾ ನಿಯಮಗಳನ್ನು ಪಾಲಿಸಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಜನ್ಮ ಸಾರ್ಥಕ ಮಾಡಿಕೊಳ್ಳಬಹುದು. ಇದನ್ನೂ ಓದಿ: Agriculture: ಅಡಿಕೆ ತೋಟದಲ್ಲಿ ಕಳೆನಾಶಕಗಳನ್ನು ಬಳಸಿದ್ರೆ ಕಳೆ ಮಾತ್ರವಲ್ಲ, ಜೀವ, ತೋಟ ಎರಡನ್ನೂ ಕಳೆದುಕೊಳ್ಳಬೇಕಾಗುತ್ತೇ ಎಚ್ಚರ, ಸಂಶೋಧಕರಿಂದ ಹೊರಬಿತ್ತು ಭಯಾನಕ ಸುದ್ದಿ!

Comments are closed.