Temple: ಬೆಟ್ಟದ ಮೇಲಿರುವ ಈ ದುರ್ಗಾದೇವಿಗೆ ಹಿಂದೂ ಸಂಪ್ರದಾಯದಂತೆಯೇ ಪೂಜೆ ಮಾಡುವ ಮುಸ್ಲಿಂ ಅರ್ಚಕ; ತಲ ತಲಾಂತರದಿಂದ ಮುಸ್ಲಿಮರೇ ಈ ದುರ್ಗಾದೇವಿಯನ್ನು ಯಾಕೆ ಪೂಜೆ ಮಾಡುತ್ತಿದ್ದಾರೆ ಗೊತ್ತಾ?

Temple: ದೇಶದಲ್ಲಿ ನಾವೆಲ್ಲರೂ ಒಂದೇ ಎಂದು ಹೇಳಿಕೊಳ್ಳುತ್ತೇವೆ. ಆದರೆ ಒಟ್ಟಾಗಿ ಬಾಳುವುದು ತುಂಬಾನೇ ಕಡಿಮೆ. ಅದರಲ್ಲೂ ಹಿಂದೂ, ಮುಸ್ಲಿಂ ಸಮುದಾಯಗಳ ನಡುವಿನ ಭಾಂಧವ್ಯ ಕೆಲವು ಕಡೆ ಉತ್ತಮವಾಗಿದ್ದರೆ ಇನ್ನೂ ಕೆಲವು ಕಡೆ ದ್ವೇಷದ ಬೆಂಕಿ ಹೊತ್ತಿ ಉರಿಯುತ್ತಿರುತ್ತದೆ. ಆದರೆ ನಾವು ಈಗ ಹೇಳುವ ವಿಚಾರ ಸ್ವಲ್ಪ ನಿಮ್ಮ ಮನಸ್ಸನ್ನು ತಣ್ಣಗಾಗಿಸಬಹುದು. ಯಾಕೆಂದರೆ ಬೆಟ್ಟದ ಮೇಲಿರುವ ಈ ಒಂದು ದುರ್ಗಿಯ ದೇವಾಲಯ (Durga Devi Temple) ದಲ್ಲಿ ಪೂಜೆ ಸಲ್ಲಿಸುವುದು ಯಾವ ಹಿಂದೂ ಅರ್ಚಕರು ಅಲ್ಲ ತಲತಲಾಂತರದಿಂದ ಮುಸ್ಲಿಂ ಸಮುದಾಯದವರೇ ಇಲ್ಲಿ ಪೂಜೆ ಸಲ್ಲಿಸಿತ್ತಾರೆ. ಇದನ್ನೂ ಓದಿ:Chanakya neeti: ನೀವು ಎಷ್ಟೇ ಕಷ್ಟಪಟ್ಟರು ಇದು ನಿಮಗೆ ಸಿಗಲು ಅದೃಷ್ಟ ಬೇಕು ಬಿಡಿ, ನೀವು ಕೂಡ ಆ ಅದೃಷ್ಟವಂತರ ಲಿಸ್ಟ್ ನಲ್ಲಿ ಇದ್ದೀರಾ ನೋಡಿ!

ದುರ್ಗಾ ದೇವಾಲಯ ಎಲ್ಲಿದೆ?

ರಾಜಸ್ಥಾನ (Rajasthan) ದ ಹಳ್ಳಿಯೊಂದರ ಬೆಟ್ಟದಲ್ಲಿ ಈ ದುರ್ಗಾದೇವಿಯ ದೇವಸ್ಥಾನವಿದೆ ಈ ದೇವಾಲಯ ಸುಮಾರು 600 ವರ್ಷಗಳಷ್ಟು ಹಳೆಯದು. ಈ ಪೇಪರ್ ಇದು ಪೂಜೆ ಮಾಡುವವರು ಜಲಾಲುದ್ದೀನ್ ಖಾನ್ (jalaluddhin khan)  ಎನ್ನುವ ಮುಸ್ಲಿಂ ಧರ್ಮ ಗುರು. ಆಗುತ್ತಾ ಈ ದೇವಸ್ಥಾನದಲ್ಲಿ ಮುಸ್ಲಿಂ ವ್ಯಕ್ತಿ ಪೂಜೆ ಮಾಡುವುದು ಇದೆ ಮೊದಲಲ್ಲ. ಕಳೆದ 13 ತಲೆಮಾರುಗಳಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಜೋಧ್ಪುರ ಜಿಲ್ಲೆಯ ಭೋಪಾಲ್ ಘಡ್ ತಹಸಿಲ್ ನ ಭಗೊರಿಯ ಗ್ರಾಮದಲ್ಲಿ ಈ ದೇವಾಲಯವನ್ನು ಮುಸ್ಲಿಮರೇ ಪೂಜೆ ಮಾಡುತ್ತಿದ್ದಾರೆ ಅದರಲ್ಲೂ ಹಿಂದೂ ಸಂಪ್ರದಾಯದಂತೆಯೇ ದೇವಿಯನ್ನು ಪ್ರತಿದಿನವೂ ಪೂಜೆ ಮಾಡಲಾಗುತ್ತದೆ.

ಬೆಟ್ಟದಲ್ಲಿರುವ ಈ ದೇವಾಲಯಕ್ಕೆ 500 ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕು ದೇವಿಯ ದರ್ಶನಕ್ಕಾಗಿ ಪ್ರತಿದಿನ ಜಾತಿ ಭೇದ ಎನ್ನದೆ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಇದನ್ನೂ ಓದಿ: Crime News: ನೋಡಲು ಮುದ್ದಾದ ಬಂಗಾರ; ನಡತೆಯಲ್ಲಿ ವಜ್ರ: ಮದುವೆಗೆ ಹತ್ತು ದಿನ ಬಾಕಿ ಇರುವಾಗ, ಅಣ್ಣ, ತಂದೆ ಮಾಡಿದ ಕೆಲಸಕ್ಕೆ ಏನಾಗಿದೆ ಗೊತ್ತೇ?

ಜಲಾಲುದ್ದೀನ್ ಕುಟುಂಬದ ಹಿನ್ನೆಲೆ:

ಈ ದುರ್ಗಾ ದೇವಾಲಯದಲ್ಲಿ ಪೂಜೆ ಮಾಡುವ ಜಲಾಲುದ್ದೀನ್ ಖಾನ್ ಅವರ ಪೂರ್ವಜರು ನೂರಾರು ವರ್ಷಗಳ ಹಿಂದೆ ಪಾಕಿಸ್ತಾನದ ಸಿಂಧು ನಿಂದ ವ್ಯಾಪಾರಕ್ಕಾಗಿ ರಾಜಸ್ತಾನಕ್ಕೆ ಬಂದು ನೆಲೆಸಿದರಂತೆ. ಈ ದೇವಾಲಯದ ಆವರಣದಲ್ಲಿ ಹಸಿವಿನಿಂದ ಬಾಯಾರಿಕೆಯಿಂದ ಕಂಗಾಲಾಗಿದ್ದ ಜಲಾಲುದ್ದೀನ್ ಅವರ ಪೂರ್ವಜರು ಜೀವ ಉಳಿಸಿಕೊಳ್ಳುತ್ತಾರೆ. ತಮ್ಮ ಜೀವ ಉಳಿಯುವುದಕ್ಕೆ ಈ ದೇವಿ ಕಾರಣ ಎಂದು ಅಂದಿನಿಂದ ಅಲ್ಲಿಗೆ ನಿಂತು ದೇವಿಯ ಸೇವೆ ಮಾಡುತ್ತಿದ್ದಾರೆ. ಈಗಾಗಲೇ 13 ತಲೆಮಾರಿನ ಮುಸ್ಲಿಂ ಸಮುದಾಯ ಈ ದೇವಿಗೆ ಪೂಜೆ ಮಾಡುತ್ತಿದ್ದು ಜಲಾಲುದ್ದೀನ್ ಖಾನ್ 13ನೇ ತಲೆಮಾರಿನವರು ಇವರು ಕೂಡ ಈ ಪೂಜೆಯ ಹಕ್ಕನ್ನು ತಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಲಿದ್ದಾರೆ. ದೇವರಿಗೆ ಭಕ್ತಿ ಅಷ್ಟೇ ಮುಖ್ಯ ಯಾವ ಜಾತಿ ಧರ್ಮವೂ ಅಲ್ಲ ಅನ್ನೋದಕ್ಕೆ ಇದೆ ಜ್ವಲಂತ ಉದಾಹರಣೆ. ಇದನ್ನೂ ಓದಿ: PMKSNY: ರೈತರ ಕಣ್ಣೀರು ಒರೆಸಲು ಮೋದಿ ಸರ್ಕಾರದ ಮತ್ತೊಂದು ಹೆಜ್ಜೆ, ರೈತರಿಗೆ ಸಿಗಲಿದೆ 8,000 ರೂಪಾಯಿ, ಜಸ್ಟ್ ಒಂದು ಕ್ಲಿಕ್ ಮಾಡಿದರೆ ಸಾಕು, ಹಣ ಪಡೆಯುವುದು ಹೇಗೆ ಗೊತ್ತೇ?

Comments are closed.