Film News:ಸಾವಿರಾರು ಕೋಟಿ ಒಡೆಯ ಸಾಯಿ ಧರಂ ತೇಜ್ ರವರ ಜೀವ ಉಳಿಸಿದ ಡೆಲಿವರಿ ಬಾಯ್ ಜೀವನ ಏನಾಗಿದೆ ಗೊತ್ತೇ?? ಕಣ್ಣೀರು ಬರುತ್ತೆ. ಮೆಗಾ ಕುಟುಂಬ ಹೀಗೆ ಮಾಡಬಹುದೇ??

Film News: ತೆಲುಗು ಚಿತ್ರರಂಗದಲ್ಲಿ ಮೆಗಾ ಕುಟುಂಬದಿಂದ ಬಂದ ಹೀರೋ ಸಾಯಿ ಧರಂ ತೇಜ್ ಅವರು ಇದೀಗ ವಿರೂಪಾಕ್ಷ ಸಿನಿಮಾ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಸಾಯಿ ಧರಂ ಅವರು 2021ರ ಸೆಪ್ಟೆಂಬರ್ 11ರಂದು ಭಾರಿ ಅಪಘಾತ ಎದುರಿಸಿದರು ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಹೈದರಾಬಾದ್ ನ ಮಾದಾಪುರ ಎನ್ನುವ ಪ್ರದೇಶದಲ್ಲಿ ಸಾಯಿ ಧರಂ ತೇಜ್ ಅವರ ಬೈಕ್ ಗೆ ಅಪಘಾತ ಆಯಿತು. ಇದನ್ನೂಓದಿ: Next Bumrah: ಪದೇ ಪದೇ ಕೈ ಕೊಡುವ ಬುಮ್ರಾ ರವರ ಸ್ಥಾನವನ್ನು ತುಂಬಾ ಆಟಗಾರ ಸಿಕ್ಕೇ ಬಿಟ್ಟ. ಇವನೇ ನೋಡಿ ಮುಂದಿನ ಬುಮ್ರಾ. ಆ ಕಿಲಾಡಿ ಯಾರು ಗೊತ್ತೇ?

ಅವರಿಗೆ ಗಂಭೀರವಾದ ಗಾಯಗಳಾಗಿ, ಆಸ್ಪತ್ರೆಗೆ ಸೇರಿಸಲಾಗಿತ್ತು. ಯಂಗ್ ಹೀರೋ ಒಂದು ತಿಂಗಳು ಕೋಮಾದಲ್ಲಿದ್ದು, ವೈದ್ಯರ ಚಿಕಿತ್ಸೆ ಪಡೆದು ಗುಣಮುಖರಾಗಿ, ಸಂಪೂರ್ಣವಾಗಿ ಚೇತರಿಸಿಕೊಂಡು, ಚಿತ್ರರಂಗಕ್ಕೆ ವಾಪಸ್ ಬಂದು, ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಸಾಕಷ್ಟು ತಿಂಗಳುಗಳೇ ತೆಗೆದುಕೊಂಡಿತು. ಸಾಯಿ ಧರಂ ತೇಜ್ ಅವರಿಗೆ ಆಕ್ಸಿಡೆಂಟ್ ಆದಾಗ ಅವರ ಸಹಾಯಕ್ಕೆ ಧಾವಿಸಿದ್ದು ಸೈಯದ್ ಅಬ್ದುಲ್ ಎನ್ನುವ ಹುಡುಗ. ಇವನ ಸಹಾಯ ಇಲ್ಲದೆ ಹೋಗಿದ್ದರೆ, ಸಾಯಿಧರಂ ತೇಜ್ ಅವರ ಸ್ಥಿತಿ ಅಷ್ಟಕ್ಕೇ ಮುಗಿಯುತ್ತಿರಲಿಲ್ಲ.

ತಮ್ಮನ್ನು ಉಳಿಸಿದ ಸೈಯದ್ ಗೆ ಮೆಗಾ ಕುಟುಂಬದ ಕಡೆಯಿಂದ ಸಹಾಯ ಆಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಸೈಯದ್ ಬಗ್ಗೆ ವಿರೂಪಾಕ್ಷ ಸಿನಿಮಾ ಪ್ರೊಮೋಷನ್ ನಲ್ಲಿ ಕೇಳಿದಾಗ ಸಾಯಿಧರಂ ತೇಜ್ ಅವರು, ಸೈಯದ್ ಗೆ ಒಂದಷ್ಟು ಹಣ ಕೊಟ್ಟು ಸುಮ್ಮನಾಗುವುದು ನನಗೆ ಇಷ್ಟವಿರಲಿಲ್ಲ. ಜೀವನದಲ್ಲಿ ಏನೇ ಕಷ್ಟ ಬಂದರೂ ನನಗೆ ಫೋನ್ ಮಾಡಿ ಅಂತ ಹೇಳಿ ನಂಬರ್ ಕೊಟ್ಟಿದ್ದೀನಿ ಎಂದು ಹೇಳಿದ್ದರು. ಈ ಮಾತು ನಿಜವೇ ಎಂದು ತಿಳಿಯಲು ಸೈಯದ್ ಅವರನ್ನು ಇಂಟರ್ವ್ಯೂ ಮಾಡಲಾಗಿದ್ದು, ಸೈಯದ್ ಹೇಳಿರುವ ಮಾತು ಈಗ ವೈರಲ್ ಆಗಿದೆ.

ಮೆಗಾ ಫ್ಯಾಮಿಲಿ ಇಂದ ನನಗೆ ಯಾವುದೇ ಸಹಾಯ ಸಿಕ್ಕಿಲ್ಲ. ಸಾಯಿ ಧರಂ ತೇಜ್ ಅವರು ನನಗೆ ಫೋನ್ ನಂಬರ್ ಕೊಟ್ಟಿಲ್ಲ, ಈ ಥರದ ಫೇಕ್ ನ್ಯೂಸ್ ಇಂದ ನನಗೆ ಕಷ್ಟ ಆಗುತ್ತೆ ಹೊರತು ಇನ್ನೇನು ಇಲ್ಲ..” ಎಂದು ಸೈಯದ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸೈಯದ್ ಈಗ ಹೈದರಾಬಾದ್ ನ ನಿಜಾಮ್ ಪೇಟೆಯಲ್ಲಿದ್ದು, ಆಕ್ಷಿಡೆಂಟ್ ಘಟನೆ ನಂತರ ಎಲ್ಲರೂ ಇವರಿಗೆ ಮೆಗಾ ಫ್ಯಾಮಿಲಿ ಇಂದ ನಿಮಗೆ ಎಷ್ಟು ಹಣ ಸಿಕ್ತು ಎಂದು ಕೇಳಿ ತಲೆ ತಿನ್ನುತ್ತಿದ್ದು, ಅದರಿಂದ ತಾವು ಕೆಲಸ ಮಾಡುತ್ತಿದ್ದ ಕಡೆ ಕೆಲಸ ಬಿಟ್ಟು, ಈಗ ಅಮೆಜಾನ್ ನಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಇದನ್ನೂ ಓದಿ; UPI Transfer: ಇಂಟರ್ನೆಟ್ ಇಲ್ಲದೆ, UPI ಮೂಲಕ ಹಣ ಪಾವತಿ ಮಾಡುವುದು ಹೇಗೆ ಗೊತ್ತೇ?? ಅದು ಉಚಿತವಾಗಿ. ಎಷ್ಟು ಸುಲಭ ಗೊತ್ತೇ??

Comments are closed.