Film: ಅಪ್ಪು ಜೊತೆಗೆ ಪರಮಾತ್ಮ ಸಿನಿಮಾದ “ಪರವಶವಾದೆನು” ಹಾಡನ್ನು ಮತ್ತೆ ನೆನಪಿಸುವ ದೀಪ ಸನ್ನಿಧಿ ಇದ್ದಕ್ಕಿದ್ದಂತೆ ಸಿನಿಮಾರಂಗದಿಂದ ಮರೆಯಾಗಿದ್ದೇಕೆ?

Film: ಕೆಲವೊಂದು ಮಾಹಿತಿಗಳ ಪ್ರಕಾರ ದೊಡ್ಡ ಮಟ್ಟದಲ್ಲಿ ಬ್ಯಾಕ್ ಟು ಬ್ಯಾಕ್ ಯಶಸ್ಸನ್ನು ಕಾಣುತ್ತಿದ್ದ ಬೆನ್ನಲ್ಲೇ ನಟಿ ದೀಪಾ ಸನ್ನಿಧಿಯವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಹಾಗೂ ನಿರ್ಮಾಪಕರು ಅವರಿಗೆ ಅಷ್ಟೊಂದು ದೊಡ್ಡ ಮಟ್ಟದ ಹಣವನ್ನು ನೀಡುವುದರ ಬದಲು ಹೊಸ ನಾಯಕಿಯರಿಗೆ ಕಡಿಮೆ ಹಣದಲ್ಲಿ ಅವಕಾಶವನ್ನು ನೀಡುವುದಕ್ಕೆ ಪ್ರಾರಂಭ ಮಾಡುತ್ತಾರೆ ಅನ್ನೋದಾಗಿ ಸುದ್ದಿ ಕೇಳಿ ಬರುತ್ತೆ.

ದೀಪ ಸನ್ನಿದಿಯವರು ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಅನ್ನೋ ಕಾರಣಕ್ಕಾಗಿ ಕಿಚ್ಚ ಸುದೀಪ್ ರವರ ಬಚ್ಚನ್ ಉಪೇಂದ್ರ ಅವರ ಬ್ರಹ್ಮ ಸಿನಿಮಾಗಳು ತಪ್ಪಿ ಹೋಗಿದ್ದವು ಅನ್ನೋದಾಗಿ ಕೂಡ ಸುದ್ದಿ ಇದೆ. ಇದೇ ರೀತಿಯಲ್ಲಿ ಶಿವಣ್ಣ ಅವರ ಭಜರಂಗಿಯಲ್ಲಿ ಕೂಡ ಅವರೇ ಫಸ್ಟ್ ಆಯ್ಕೆ ಆಗಿದ್ದರು ಆದರೆ ಅಲ್ಲಿ ಕೂಡ ಸಂಭಾವನ ವಿಚಾರಕ್ಕಾಗಿ ಅವರು ಹೊರಗೆ ಬರಬೇಕಾಗಿ ಬರುತ್ತದೆ. ಸಾಕಷ್ಟು ಸಮಯಗಳ ನಂತರ ಚೌಕ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಚಕ್ರವರ್ತಿ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾರೆ. ಆದರೆ ಅದಾದ ನಂತರ ಸಂಪೂರ್ಣವಾಗಿ ತೆರೆಮರೆಗೆ ಸರಿಯುತ್ತಾರೆ. ಸದ್ಯ ಕಂತು ಅವರು ಎಲ್ಲಿದ್ದಾರೆ ಅನ್ನೋದೇ ಯಾರಿಗೂ ತಿಳಿದಿಲ್ಲ ಹಾಗೂ ಮತ್ತೆ ಚಿತ್ರರಂಗಕ್ಕೆ ಬರ್ತಾರೆ ಅನ್ನೋ ನಿರೀಕ್ಷೆ ಕೂಡ ಕಡಿಮೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅವರ ಬದಲಿಗೆ ಸಾಕಷ್ಟು ನಾಯಕನಟಿಯರು ಹೊಸದಾಗಿ ಬಂದು ಅವರ ಸ್ಥಾನವನ್ನು ಆಕ್ರಮಿಸಿ ಕೊಂಡು ಕುಳಿತುಕೊಂಡು ಬಿಟ್ಟಿದ್ದಾರೆ.

ಹೀಗಾಗಿ ಅವರ ಅಭಿಮಾನಿಗಳು ಕೂಡ ಈಗ ಅವರನ್ನು ಮರೆತಿರುವಂತೆ ಕಾಣಿಸುತ್ತಿದೆ ಎಂದು ಹೇಳಬಹುದಾಗಿದೆ. ನಾಯಕ ನಟರ ಸಮಯ ಅನ್ನೋದು ಚಿತ್ರರಂಗದಲ್ಲಿ ಹೆಚ್ಚಾಗಿರುತ್ತದೆ ಆದರೆ ನಾಯಕ ನಟಿಯರಿಗೆ ಕೆಲವೇ ವರ್ಷಗಳ ಕಾಲ ಮಾತ್ರ ನಾಯಕ ನಟಿಯಾಗಿ ಕಾಣಿಸಿಕೊಳ್ಳುವಂತಹ ಸಮಯಾವಕಾಶ ಇರುತ್ತೆ. ಈಗಾಗಲೇ ದೀಪಾ ಸನ್ನಿಧಿ ಚಿತ್ರರಂಗವನ್ನು ಬಿಟ್ಟು ಸಾಕಷ್ಟು ವರ್ಷಗಳೇ ಕಳೆದಿವೆ. ಹೀಗಾಗಿ ಅವರು ಮತ್ತೆ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಅನುಮಾನವೇ ಸರಿ ಎಂದು ಹೇಳುವಂತಹ ಮಾತಾಗಿದೆ.

Comments are closed.