Film: ಒಂದು ಟೈಮ್ ನಲ್ಲಿ ದರ್ಶನ್ ರವರ ತಮ್ಮನಿಗೆ ಫೋನ್ ಮಾಡಿ ಕಿಚ್ಚ ಸುದೀಪ್ ಏನ್ ಹೇಳಿದ್ರು ಗೊತ್ತಾ? ಕಾಲ್ ಡೀಟೇಲ್ಸ್ ಈಗ ವೈರಲ್!

Film: ಕನ್ನಡ ಚಿತ್ರರಂಗದಲ್ಲಿ ಕುಚಿಕುಗಳು ಎನ್ನುವಂತಹ ಸ್ಥಾನಕ್ಕೆ ಬೆಲೆ ಕೊಟ್ಟವರು ಅಂಬರೀಶ್ ಹಾಗೂ ವಿಷ್ಣುವರ್ಧನ್. ಅದಾದ ನಂತರ ಈ ವಾಕ್ಯಕ್ಕೆ ಸರಿಯಾದ ಅರ್ಥವನ್ನು ಯಾರಾದರೂ ನೀಡಿದ್ದಾರೆ ಅಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದು ಹೇಳಬಹುದಾಗಿದೆ. ಬಹುತೇಕ ಒಂದೇ ಸಮಯಕ್ಕೆ ಚಿತ್ರರಂಗಕ್ಕೆ ಕಾಲಿಟ್ಟಂತಹ ಪ್ರತಿಭೆಗಳು ಇವರು. ವಯಸ್ಸಿನಲ್ಲಿ ಸ್ವಲ್ಪಮಟ್ಟಿಗೆ ಅಂತರ ಇರಬಹುದು ಆದರೆ ಸ್ನೇಹದಲ್ಲಿ ಯಾವುದೇ ಅಂತರ ಇರಲಿಲ್ಲ ಒಂದೇ ಜೀವ ಎರಡು ದೇಹ ಅನ್ನೋ ರೀತಿಯಲ್ಲಿ ಇದ್ರು. ಆದರೆ ಯಾವ ಕೆಟ್ಟ ದೃಷ್ಟಿ ಇವರ ಸ್ನೇಹದ ಮೇಲೆ ಬಿತ್ತು ಏನೋ ಇಬ್ರೂ ಕೂಡ ಈಗ ನೀನೊಂದು ತೀರ ನಾನೊಂದು ತೀರ ಅನ್ನೋ ರೀತಿಯಲ್ಲಿ ಇದ್ದಾರೆ.

ಪರಸ್ಪರ ಒಬ್ಬರಿಗೊಬ್ಬರು ಸಾಕಷ್ಟು ಕ್ಲೋಸ್ ಆಗಿದ್ರು. ಜೊತೆಗೆ ಕ್ರಿಕೆಟ್ ಆಡೋದು ಜೊತೆಗೆ ಪರಸ್ಪರ ಸಿನಿಮಾಗಳಿಗೆ ಪ್ರಮೋಷನ್ ಮಾಡೋದು ಈ ರೀತಿಯ ಸಾಕಷ್ಟ ಕೆಲಸಗಳನ್ನು ಮಾಡಿಕೊಂಡು ಬಂದಿದ್ದರು. ಅದರಲ್ಲಿ ವಿಶೇಷವಾಗಿ ಕಿಚ್ಚ ಸುದೀಪ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ವಾಯ್ಸ್ ಓವರ್ ಮಾಡುವುದರ ಮೂಲಕ ಸ್ನೇಹದ ನಿಜವಾದ ಪರಿಚಯವನ್ನು ಮಾಡಿಕೊಟ್ಟಿದ್ದರು. ಮಾತನಾಡುವುದಕ್ಕೆ ಹೊರಟಿರೋದು ಸಾರಥಿ ಸಂಧರ್ಭದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಪತ್ನಿಯ ಪ್ರಕರಣದಲ್ಲಿ ಜೈಲು ಪಾಲಾಗಿದ್ರು. ಈ ಸಂದರ್ಭದಲ್ಲಿ ಇನ್ನೇನು ಸಾರಥಿ ಬಿಡುಗಡೆಯಾಗುವಂತಹ ದಿನಗಳು ಸಮೀಪಿಸುತ್ತಿದ್ದವು. ಇನ್ನು ಆ ಸಂದರ್ಭದಲ್ಲಿ ಸಾರಥಿ ಸಿನಿಮಾದ ನಿರ್ದೇಶಕರಾಗಿ ಅವರು ತಮ್ಮ ಆಗಿರುವಂತಹ ದಿನಕರ್ ತೂಗುದೀಪ್.

ಆ ಕಷ್ಟದ ಸಂದರ್ಭದಲ್ಲಿ ದಿನಕರ್ ತೂಗುದೀಪ್ ರವರಿಗೆ ಧೈರ್ಯ ತಂದಿದ್ದು ಕಿಚ್ಚನ ಕಾಲ್!

ಆ ಸಂದರ್ಭದಲ್ಲಿ ಸಾರಥಿ ಸಿನಿಮಾ ಬಿಡುಗಡೆ ಆಗೋದಕ್ಕೆ ರೆಡಿಯಾಗಿತ್ತು ಹಾಗೂ ದರ್ಶನ್ ರವರು ಜೈಲಿನಲ್ಲಿ ಇರೋದ್ರಿಂದಾಗಿ ದಿನಕರ್ ತೂಗುದೀಪ್ ಸಾಕಷ್ಟು ಕಷ್ಟವನ್ನು ಎದುರಿಸಬೇಕಾಗಿ ಬಂದಿತ್ತು. ಚಿತ್ರರಂಗದಲ್ಲಿ ಯಾರೊಬ್ಬರ ಸಪೋರ್ಟ್ ಕೂಡ ಆಗ ದರ್ಶನ್ ಅಥವಾ ದಿನಕರ್ ತೂಗುದೀಪ್ ಮೇಲೆ ಇರ್ಲಿಲ್ಲ. ಸಿನಿಮಾದ ನಿರ್ಮಾಪಕರು ಸಾಲ ಸೋಲ ಮಾಡಿ ಸಿನಿಮಾವನ್ನ ನಿರ್ಮಾಣ ಮಾಡಿದ್ರು ಆದರೆ ಸಿನಿಮಾ ಬಿಡುಗಡೆಯಾಗುವುದು ಲೇಟಾಗುತ್ತ ಬಂದಂತೆ ಅವರು ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗಿ ಬಂತು. ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನದಲ್ಲಿ ದಿನಕರ್ ತೂಗುದೀಪ್ ರವರು ಇಂತಹ ಕಷ್ಟದ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರ ಕಾಲ್ ಬಂದು ಯಾವ ರೀತಿಯಲ್ಲಿ ಪಾಸಿಟಿವ್ ಎನರ್ಜಿ ಸಿಕ್ತು ಅನ್ನೋದನ್ನ ಹೇಳಿಕೊಂಡಿದ್ದಾರೆ.

ಇಡೀ ಇಂಡಸ್ಟ್ರಿಯವರು ನಿಮ್ಮಿಬ್ಬರ ಮೇಲೆ ಕಾಲಿಟ್ಟುಕೊಂಡು ಕುಳಿತಿದ್ದಾರೆ. ನೀವಿಬ್ರೂ ಶಕ್ತಿ ತಗೊಂಡು ಮೇಲೆದ್ದು ನಿಂತ್ರೆ, ಅವರೆಲ್ಲರೂ ಕೂಡ ಕೆಳಗಡೆ ಬೀಳ್ತಾರೆ ಅನ್ನೊದಾಗಿ ನಾನು ಕುಗ್ಗಿದ ಸಂದರ್ಭದಲ್ಲಿ ಕಿಚ್ಚ ಸುದೀಪ್ ರವರು ಫೋನ್ ಮಾಡಿ ನಮಗೆ ಧೈರ್ಯ ತುಂಬಿದರು. ಅದು ನನಗೆ ಒಂತರ ಎನರ್ಜಿ ಸಿಗೋ ಹಾಗೆ ಮಾಡ್ತು ಎನ್ನುವುದಾಗಿ ದಿನಕರ್ ತೂಗುದೀಪ್ ಈಗಲೂ ಕೂಡ ಅದನ್ನು ನೆನಪಿಸಿಕೊಂಡು ಹೇಳುತ್ತಾರೆ. ಕಿಚ್ಚ ಸುದೀಪ್ ರವರು ಮಾಡಿದ್ದ ಆ ವಿಶ್ ಇವತ್ತಿಗೂ ಕೂಡ ಸಾರಥಿ ಸಿನಿಮಾದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ನಮಗೆ ಎನರ್ಜಿ ನೀಡಿತು ಅನ್ನೋದನ್ನ ದಿನಕರ್ ತೂಗುದೀಪ್ ಹೇಳಿಕೊಂಡಿದ್ದಾರೆ.

Comments are closed.