kannada Serial: ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಂಡ ಅಗ್ನಿಸಾಕ್ಷಿಯ ಖ್ಯಾತಿಯ ನಟ ವಿಜಯ್ ಸೂರ್ಯ; ಅವಕಾಶ ಸಿಕ್ಕಿಲ್ಲಾ ಅಂತ ಹೆಸರು ಚೆಂಜ್ ಮಾಡಿದ್ರಾ ಅಂದ ಅಭಿಮಾನಿಗಳು!

kannada Serial: ವಿಜಯ್ ಸೂರ್ಯ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ತಮ್ಮ ಗುಳಿಕೆನ್ನೆಯ ಮೂಲಕ ಕಿರುತೆರೆಯ ಲೋಕದ ಪ್ರೇಕ್ಷಕರ ಫೇವರೆಟ್ ನಾಯಕ ನಟ ಆಗಿದ್ದಾರೆ. ಆರಂಭದಲ್ಲಿ ಅಗ್ನಿಸಾಕ್ಷಿ ಧಾರವಾಹಿಯ ಮೂಲಕ ಅವರು ನಿಜಕ್ಕೂ ಕೂಡ ಯಾವುದೇ ಸಿನಿಮಾ ನಾಯಕ ನಟನೆಗೂ ಕಡಿಮೆ ಇಲ್ಲದಂತೆ ಜನಪ್ರಿಯತೆಯನ್ನು ಸಂಪಾದಿಸಿದರು. ಕೇವಲ ಧಾರವಾಹಿಗಳಲ್ಲಿ ಮಾತ್ರವಲ್ಲದೆ ಸಿನಿಮಾದಲ್ಲಿ ಕೂಡ ಈಗಾಗಲೇ ನಟಿಸಿರುವಂತಹ ಅನುಭವವನ್ನು ವಿಜಯ್ ಸೂರ್ಯ ಹೊಂದಿದ್ದಾರೆ. ಸಾಕಷ್ಟು ಸಮಯಗಳ ನಂತರ ಈಗ ವಿಜಯ್ ಸೂರ್ಯ ಲಚ್ಚಿ ಧಾರವಾಹಿ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುವುದಕ್ಕೆ ಮತ್ತೆ ಬಂದಿದ್ದರು ಆದರೆ ಈಗ ಆಧಾರವಾಗಿ ಕೂಡ ಮತ್ತೆ ಮುಗಿದು ಹೋಗಿದೆ. ಮತ್ತೆ ವಿಜಯ್ ಸೂರ್ಯ ಯಾವ ಅವತಾರದಲ್ಲಿ ಯಾವ ಧಾರವಾಹಿನಲ್ಲಿ ಕಾಣಿಸಿಕೊಳ್ಳಬಹುದು ಅನ್ನೋದು ಅವರ ಅಭಿಮಾನಿಗಳಲ್ಲಿ ಈಗ ನಿರೀಕ್ಷೆ ರೂಪದಲ್ಲಿ ಹುಟ್ಟಿಕೊಂಡಿದೆ.

ಹೆಸರು ಬದಲಾಯಿಸಿಕೊಂಡ ವಿಜಯ್ ಸೂರ್ಯ!

ಹೌದು ಸೋಶಿಯಲ್ ಮೀಡಿಯಾದ ಮೂಲಕ ಈ ವಿಚಾರವನ್ನು ಹಂಚಿಕೊಂಡಿರುವಂತಹ ನಟ ವಿಜಯ್ ಸೂರ್ಯ ಅಮ್ಮಂದಿರ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅಮ್ಮನ ಪ್ರೀತಿಯನ್ನು ನೆನಪಿಸಿಕೊಳ್ಳುವುದಕ್ಕಾಗಿ ಹಾಗೂ ಅಮ್ಮನಿಗೆ ಕೊಡುಗೆ ನೀಡುವ ಸಲುವಾಗಿ ಇನ್ಮುಂದೆ ನನ್ನ ಹೆಸರನ್ನು ವಿಜಯ್ ಲಲಿತ ಸೂರ್ಯ ಎಂಬುದಾಗಿ ಬದಲಾಯಿಸಿಕೊಳ್ಳುತ್ತಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಮಕ್ಕಳ ಹೆಸರಿನಲ್ಲಿ ತಂದೆಯ ಹೆಸರನ್ನು ಜೋಡಿಸಲಾಗುತ್ತದೆ ಆದರೆ ವಿಜಯ್ ಸೂರ್ಯ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು ತಮ್ಮ ತಾಯಿಯ ಹೆಸರನ್ನು ಕೂಡ ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡಿದ್ದಾರೆ.

ಅಮ್ಮಂದಿರ ದಿನಾಚರಣೆ ಸಂದರ್ಭದಲ್ಲಿ ತಾಯಿಯ ಫೋಟೋ ಶೇರ್ ಮಾಡುವ ಮೂಲಕ ಭಾವುಕ ಸಾಲುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಅದೇ ಸಂದರ್ಭದಲ್ಲಿ ಈ ವಿಚಾರವನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಅಮ್ಮನ ಕುರಿತಂತೆ ಸಾಕಷ್ಟು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿರುವಂತಹ ವಿಜಯ್ ಸೂರ್ಯ ತಾಯಂದಿರ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ತಾಯಿಗೆ ಒಂದು ಅರ್ಥಪೂರ್ಣವಾಗಿರುವಂತಹ ಉಡುಗೊರೆಯನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ಮುಂದೆ ನನ್ನ ಹೆಸರನ್ನ ವಿಜಯ್ ಲಲಿತ ಸೂರ್ಯ ಎಂಬುದಾಗಿ ಇರಿಸಿಕೊಳ್ಳುತ್ತೇನೆ ಎಂದು ತಾಯಂದಿರ ದಿನಾಚರಣೆಯ ಸಂದರ್ಭದಲ್ಲಿ ವಿಜಯ್ ಸೂರ್ಯ ಹೇಳುವ ಮೂಲಕ ನಿಜಕ್ಕೂ ಕೂಡ ಪ್ರತಿಯೊಬ್ಬ ಅಭಿಮಾನಿಗಳಿಗೂ ಕೂಡ ತಾಯಿಯ ವಿಚಾರದಲ್ಲಿ ಯಾವ ರೀತಿಯಲ್ಲಿ ಪ್ರೀತಿ ಹಾಗೂ ಗೌರವಗಳಿಂದ ಇರಬೇಕು ಎನ್ನುವುದಕ್ಕೆ ಮಾದರಿಯಾಗಿದ್ದಾರೆ. ಲಲಿತ ನನ್ನ ಜೀವನದ ಉಸಿರು ನನ್ನ ಅಮ್ಮನ ಹೆಸರು ಎನ್ನುವುದಾಗಿ ಹೇಳಿಕೊಂಡು ವಿಜಯ್ ಸೂರ್ಯ ಈ ಕೆಲಸವನ್ನು ಮಾಡಿದ್ದಾರೆ. ಇದನ್ನು ನೋಡಿರುವಂತಹ ನೆಟ್ಟಿಗರು ಅಮ್ಮನಿಗೆ ತಕ್ಕ ಮಗ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Comments are closed.