Pray To God: ಈ ಸೂಚನೆಗಳು ನಿಮಗೆ ಸಿಕ್ಕರೆ ನಿಮ್ಮ ಪ್ರಾರ್ಥನೆ ದೇವರಿಗೆ ತಲುಪಿದೆ ಅಂತ ಅರ್ಥ!

Pray To God: ಭಗವಂತನ ನಾಮ ಸ್ಮರಣೆಯಿಂದಾಗಿ ಪ್ರತಿಯೊಂದು ಕಷ್ಟಗಳು ಕೂಡ ದೂರವಾಗುತ್ತವೆ ಎಂಬುದಾಗಿ ಹೇಳಲಾಗುತ್ತದೆ. ಭಗವಂತ ನಾಮಸ್ಮರಣೆ ಮಾಡುವಾಗ ಆ ದೇವರಿಗೆ ನಾಮಸ್ಕಾರಣೆ ಮಾಡಬೇಕು ಅಥವಾ ಈ ದೇವರಿಗೆ ನಾಮಸ್ಮರಣೆ ಮಾಡಬೇಕು ಎನ್ನುವಂತಹ ನಿರ್ದಿಷ್ಟ ಎಲ್ಲೇಯನ್ನು ಇಟ್ಕೊಂಡು ಯಾವತ್ತೂ ಕೂಡ ದೇವರಿಗೆ ಜಪಿಸೋಕೆ ಹೋಗಬೇಡಿ. ಹಾಗಿದ್ರೆ ಒಂದು ವೇಳೆ ನಿಮ್ಮ ನಾಮಜಪ ಎನ್ನುವುದು ದೇವರಿಗೆ ತಲುಪಿದರೆ ನಿಜಕ್ಕೂ ಯಾವ ಸೂಚನೆಗಳನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

  • ಸಾಮಾನ್ಯವಾಗಿ ಆಗಾಗ ಮಲಗುವವರನ್ನು ಜೀವನದಲ್ಲಿ ಆಲಸ್ಯ ಹೊಂದಿದ್ದಾರೆ ಎನ್ನುವುದಾಗಿ ನಾವು ಪರಿಗಣಿಸುತ್ತೇವೆ. ಒಂದು ವೇಳೆ ನೀವು ದೇವರ ಸ್ಮರಣೆಯಿಂದ ಈ ರೀತಿಯ ಪದೇಪದೇ ಮಲಗುವಂತಹ ಆದರ್ಶವನ್ನು ಕಳೆದುಕೊಂಡಿದ್ದೀರಿ ಎಂದರೆ ನಿಮ್ಮ ದೇವರ ನಾಮಸ್ಮರಣೆ ದೇವರನ್ನು ತಲುಪಿದೆ ಎಂಬುದಾಗಿ ಅರ್ಥವಾಗಿದೆ.
  • ಪ್ರೀತಿಯಿಂದ ಜಗತ್ತನ್ನು ಗೆಲಬಹುದೆಂಬುದಾಗಿ ಹೇಳುತ್ತಾರೆ ಆದರೆ ಕೆಲವೊಮ್ಮೆ ಕೆಲವರ ಮೇಲಿನ ಪ್ರೀತಿ ಅನಗತ್ಯವಾಗಿರುತ್ತದೆ ಹಾಗೂ ಒಂದು ವೇಳೆ ಕಾರ್ಯಕ್ರಮವಾಗಿ ಅವರ ಮೇಲಿನ ಪ್ರೀತಿ ಕಡಿಮೆ ಆಗ್ತಾ ಇದೆ ಅಂದ್ರೆ ನಿಮ್ಮ ಪ್ರಾರ್ಥನೆ ದೇವರಿಗೆ ಸಲ್ಲಿಕೆಯಾಗಿದೆ ಎಂಬುದಾಗಿ ಅರ್ಥ ಹಾಗೂ ದೇವರೇ ನಿಮ್ಮನ್ನು ಅವರಿಂದ ದೂರ ಇಡುತ್ತಿದ್ದಾರೆ ಎಂಬುದಾಗಿ ಅರ್ಥವಾಗಿದೆ.
  • ಇಂದ್ರಿಯಗಳು ಸಾಕಷ್ಟು ಬಾರಿ ಅಗತ್ಯಕ್ಕಿಂತ ಹೆಚ್ಚಾಗಿ ಸುಖಗಳನ್ನು ಅಪೇಕ್ಷಿಸುತ್ತವೆ. ಆದರೆ ಯಾವಾಗ ಇದನ್ನು ನೀವು ನಿಯಂತ್ರಣ ಮಾಡಲು ಪ್ರಾರಂಭಿಸುತ್ತಿರೋ ಅದರ ಅರ್ಥ ದೇವರ ಅನುಗ್ರಹ ನಿಮಗೆ ಆಗಿದೆ ಎಂಬುದಾಗಿ ಅರ್ಥವಾಗಿದೆ.
  • ದೇವರ ನಾಮಸ್ಮರಣೆಯಿಂದಾಗಿ ನೀವು ನಿಮ್ಮ ಜೀವನದಲ್ಲಿ ಅನಗತ್ಯವಾಗಿ ಸದಾ ಕಾಲ ನಗುತ್ತಿದ್ದರೆ ಆ ನಗು ಅಂತ್ಯವಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಅಂತಹ ನಗು ಯಾವತ್ತೂ ಕೂಡ ಒಳ್ಳೆಯದಲ್ಲ ಎಂಬುದನ್ನು ಶಾಸ್ತ್ರಗಳು ಪ್ರತಿಪಾದಿಸುತ್ತದೆ.
  • ದೇವರ ನಾಮಸ್ಮರಣೆಯನ್ನು ಪ್ರತಿ ಬಾರಿ ಮಾಡುವುದರಿಂದಾಗಿ ನಿಮ್ಮ ಬುದ್ಧಿ ಶಕ್ತಿ ಅಂದರೆ ಭೌತಿಕ ಸಾಮರ್ಥ್ಯ ಹೆಚ್ಚಾಗುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಒಂದು ವೇಳೆ ನಿಮ್ಮ ಬುದ್ಧಿಶಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅಂದ್ರೆ ನಿಮ್ಮ ದೇವರ ನಾಮಸ್ಮರಣೆ ಅನ್ನೋದು ದೇವರನ್ನ ತಲುಪಿದೆ ಎಂಬುದಾಗಿ ಅರ್ಥವಾಗಿದೆ.

ಹೀಗಾಗಿ ನಿಮ್ಮ ಪ್ರತಿದಿನದ ದಿನಚರಿಯಲಿ ಬೆಳಿಗ್ಗೆ ಎದ್ದ ತಕ್ಷಣ ಶುಚಿಗೊಂಡು ದೇವರಿಗೆ ಕೈ ಮುಗಿಯುವ ಸಂದರ್ಭದಲ್ಲಿ ಆತನ ಪ್ರಿಯವಾಗಿರುವಂತಹ ಮಂತ್ರವನ್ನು ಜಪಿಸುವುದರಿಂದಾಗಿ ನೀವು ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗಳನ್ನು ನಿಮ್ಮ ಜೀವನದಲ್ಲಿ ಆಹ್ವಾನ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ರತಿದಿನ ದೇವರಿಗೆ ಪೂಜೆ ಮಾಡುವ ಸಂದರ್ಭದಲ್ಲಿ ಆತನ ನಾಮಸ್ಮರಣೆ ಮಾಡುವುದನ್ನ ಮಾತ್ರ ಮರೆಯಬೇಡಿ

Comments are closed.