Darshan: ಅತ್ತ ದರ್ಶನ್ ಅರೆಸ್ಟ್ ಆಗುತ್ತಿದಂತೆ ಈಕಡೆ ಅವ್ರ ಪತ್ನಿ ವಿಜಯಲಕ್ಷ್ಮಿ ಮಾಡಿದ್ದೇನು ಗೊತ್ತೆ?

Darshan: ನಿನ್ನೆಯಿಂದ ಇಡೀ ರಾಜ್ಯದಲ್ಲಿ ಯಾವುದೇ ನ್ಯೂಸ್ ಚಾನೆಲ್ ನೋಡಿದರೂ ಕೂಡ ಒಂದೇ ಸುದ್ದಿ ಓಡಾಡ್ತಾ ಇರೋದು. ಹೌದು ನಾವ್ ಮಾತಾಡ್ತಿರೋದು ಮ-ರ್ಡರ್ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪ್ರಕರಣದ ಬಗ್ಗೆ. ಕೋಟ್ಯಂತರ ಅಭಿಮಾನಿಗಳಿಗೆ ದೇವರ ರೀತಿಯಲ್ಲಿ ಇರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈ ರೀತಿಯ ಕೆಲಸವನ್ನು ಮಾಡ್ತಾರೆ ಅಥವಾ ಮಾಡಿಸ್ತಾರೆ ಅನ್ನೋದನ್ನ ಇಂದಿಗೂ ಯಾರಿಂದಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕಾಗಿ ಅವರನ್ನು ಬಂಧಿಸಿಟ್ಟಿರುವಂತಹ ಅಥವಾ ಅವರನ್ನು ಪ್ರಕರಣದಲ್ಲಿ ವಿಚಾರಣೆ ಮಾಡುತ್ತಿರುವಂತಹ ಪೊಲೀಸ್ ಸ್ಟೇಷನ್ ಹೊರಭಾಗದಲ್ಲಿ ಸಹಸ್ರಾರು ಅಭಿಮಾನಿಗಳು ಗುಂಪು ಕೂಡಿಕೊಂಡು ಇದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 2ನೇ ಪತ್ನಿ ಆಗಿರುವಂತಹ ಪವಿತ್ರ ಗೌಡ ರವರ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರೇಣುಕಾ ಸ್ವಾಮಿ ಎನ್ನುವಾತ ಕೆಟ್ಟ ರೀತಿಯಾಗಿ ಕಾಮೆಂಟ್ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಚಿತ್ರಹಿಂ-ಸೆ ಕೊಟ್ಟು ಮುಗಿಸಲಾಗಿತ್ತು ಎನ್ನುವುದಾಗಿ ತಿಳಿದುಬಂದಿದ್ದು ಈಗ ಇದೆ ಪ್ರಕರಣದ ಅಡಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಪವಿತ್ರ ಗೌಡ ಅವರ ಜೊತೆಗೆ ಒಟ್ಟಾರೆಯಾಗಿ 15 ಜನ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಈ ಪ್ರಕರಣದಲ್ಲಿ ಆರು ದಿನಗಳ ಕಷ್ಟಗಳು ಈಗಾಗಲೇ ಕೋರ್ಟ್ ಮೂಲಕ ಪಡೆದುಕೊಳ್ಳಲಾಗಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಇದರ ಬೆನ್ನಲ್ಲೇ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪತ್ನಿ ಆಗಿರುವಂತಹ ವಿಜಯಲಕ್ಷ್ಮಿ ದರ್ಶನ್ ರವರು ಮಾಡಿರುವಂತಹ ಕೆಲಸ ಎಲ್ಲರ ಆಶ್ಚರ್ಯವನ್ನು ಹೆಚ್ಚು ಮಾಡುವಂತೆ ಮಾಡಿದೆ ಎಂದು ಹೇಳಬಹುದಾಗಿದೆ.

ವಿಜಯಲಕ್ಷ್ಮಿ ದರ್ಶನ್ ಹೀಗೆ ಮಾಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ!

ವಿಜಯಲಕ್ಷ್ಮಿ ದರ್ಶನ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ದಂಪತಿಗಳಾಗಿದ್ದು ಈ ಪ್ರಕರಣದ ನಂತರ instagram ಖಾತೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ರವರು ತಮ್ಮ ಗಂಡನನ್ನ ಹಿಂಬಾಲಿಸುವುದನ್ನು ನಿಲ್ಲಿಸಿದ್ದಾರೆ ಹಾಗೂ ತಮ್ಮ ಡಿಪಿಯಿಂದ ಫೋಟೋವನ್ನು ಕೂಡ ಡಿಲೀಟ್ ಮಾಡಿದ್ದಾರೆ ಅನ್ನೋದು ತಿಳಿದುಬಂದಿದೆ. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಾಗೂ ವಿಜಯಲಕ್ಷ್ಮಿ ದರ್ಶನ್ ರವರ ನಡುವೆ ನಡೆದಂತಹ ಜಗಳ ಪ್ರಕರಣದಲ್ಲಿ ಯಾವ ರೀತಿ ನಡೆದಿತ್ತು ಏನಾಗಿತ್ತು ಅನ್ನೋದನ್ನ ನೀವೆಲ್ಲರೂ ತಿಳಿದುಕೊಂಡಿದ್ದೀರಿ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವಂತಹ ಸತತ ಡಿವೋರ್ಸ್ ಪ್ರಕರಣಗಳ ಕಾರಣದಿಂದಾಗಿ ಈಗ ಇದು ಕನ್ನಡ ಚಿತ್ರರಂಗದಲ್ಲಿ ಕೇಳಿ ಬಂದಿರುವಂತಹ ದೊಡ್ಡ ಮಟ್ಟದ ಅಪರಾಧದ ಆರೋಪ ಎನ್ನುವ ಹಿನ್ನೆಲೆಯಲ್ಲಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಡುವೆ ಕೂಡ ಈ ಬಾರಿ ಈ ರೀತಿಯ ಘಟನೆಗಳು ನಡೆಯಬಹುದು ಎನ್ನುವ ರೀತಿಯಲ್ಲಿ ಕೂಡ ಸುದ್ದಿಗಳು ಕೇಳಿ ಬರುತ್ತಿವೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ತಿರುಗು ಪಡೆದುಕೊಳ್ಳುತ್ತದೆ ಹಾಗೂ ದರ್ಶನ್ ರವರ ಮೇಲೆ ಅಪರಾಧ ಸಾಬೀತಾಗುತ್ತ ಎನ್ನುವುದನ್ನು ಕಾದು ನೋಡಬೇಕಾಗಿದೆ.

Comments are closed.