Kannada Film: ಎರಡು ವರ್ಷಗಳ ಹಿಂದೆ ಲೇಖಕ ರವಿ ಬೆಳೆಗರೆ ನಟ ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತೇ? ವೈರಲ್ ಆದ ವಿಡಿಯೋ ನೋಡಿ ಡಿ ಬಾಸ್ ಅಭಿಮಾನಿಗಳ ಪ್ರತಿಕ್ರಿಯೆ ಏನು?

Kannada Film:ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಒಂದು ಕನ್ನಡದ ಟಾಪ್ ಒನ್ ನಟ. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ದರ್ಶನ್ ಚಂದನವನದ ಬಹುದೊಡ್ಡ ಆಸ್ತಿ. ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿ(Fans) ಗಳನ್ನು ಹೊಂದಿರುವ ದರ್ಶನ್ ನಿಜಜೀವನದಲ್ಲಿಯೂ ಒಬ್ಬ ಹಿರೋವೇ(hero). ಸಾಮಾಜಿಕ ಕಾರ್ಯಗಳಲ್ಲಿಯೂ ಕೂಡ ದರ್ಶನ್ ಎತ್ತಿದ ಕೈ.  

ಡಿ ಬಾಸ್(D Boss) ಹಾಗೂಗು ಸ್ಯಾಂಡಲ್ ವುಡ್(Sandalwood) ನ ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ಅಭಿನಯದ ಕ್ರಾಂತಿ ಸಿನಿಮಾ ಇದೆ ಬರುವ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಅಭಿಮಾನಿಗಳು ಈ ಸಿನಿಮಾಕ್ಕಾಗಿ ಕಾದು ಕುಳಿತಿದ್ದಾರೆ. ಜೊತೆಗೆ ಅಭಿಮಾನಿಗಳೇ ಈ ಸಿನಿಮಾಕ್ಕಾಗಿ ವಿಶೇಷ ಪ್ರಚಾರಗಳನ್ನೂ ಕೂಡ ಮಾಡುತ್ತಿದ್ದಾರೆ.

ಇನ್ನು ನಟ ದರ್ಶನ್ ಅವರಿಗೆ ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ಹೆಸರುಗಳು ಅವರ ಪರಿಶ್ರಮದ ಫಲವೇ ಹೊರತು ಸುಖಾ ಸುಮ್ಮನೆ ಬಂದಿದ್ದಲ್ಲ. ಖ್ಯಾತ ನಟ ತೂಗುದೀಪ್ ಶ್ರೀನಿವಾಸ್ ಅವರ ಮಗ ಆಗಿದ್ದರೂ ಕೂಡ ತಂದೆಯ ಹೆಸರು ಹೇಳಿಕೊಂಡು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟರಲ್ಲ ದರ್ಶನ್. ಅವರ ಪರಿಶ್ರಮ, ಗೆಲ್ಲಬೇಕೆನ್ನುವ ಛಲ ಅವರನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಸ್ನೇಹಿತರೆ, ರಾಜ್ಯದ ಹೆಮ್ಮೆಯ ಬರಹಗಾರ, ಅದ್ಭುತ ಸಾಹಿತಿ, ಜರ್ನಲಿಸ್ಟ್(Journalist) ರವಿ ಬೆಳೆಗೆರೆ(Ravi Belagere) ಇಂದು ನೆನಪು ಮಾತ್ರ. ಅವರು ನಮ್ಮನ್ನ ಅಗಲಿ ಆಗಲೇ ಎರದು ವರ್ಷಗಳು ಕಳೆದಿವೆ. ರವಿ ಬೆಳಗರೆಯವರು ತಮ್ಮ 64ನೇ ವಯಸ್ಸಿನಲ್ಲಿ ಸಂದರ್ಶನವೊಂದನ್ನು ನೀಡಿದ್ದರು. ಆ ಸಮಯದಲ್ಲಿ ದರ್ಶನ್ ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಖಾಪಟ್ಟೆ ವೈರಲ್ ಆಗುತ್ತಿದೆ. ರವಿ ಬೆಳಗೆರೆ ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತಾ?

ಸಂದರ್ಶನಕಾರರು, ಸರ್ ನೀವು ಯಾವಾಗಲೂ ದರ್ಶನ್ ಬಗ್ಗೆ ಮಾತನಾಡುತ್ತೀರಲ್ಲಾ ಯಾಕೆ ಎಂಡು ಕೇಳುತ್ತಾರೆ. ರವಿ ಬೆಳಗೆರೆ, ‘ದರ್ಶನ್ ಒಬ್ಬ ಹ್ಯಾಂಡ್ ಸಮ್ ಹುಡುಗ, ಸ್ಟ್ರಾಂಗ್ ಬಾಯ್, ವೆಲ್ ಗ್ರೋಯಿಂಗ್, ನಾನಗೆ ಅವನ ಪರಿಚಯ ಇಲ್ಲ ಆದ್ರೆ ನನಗೆ ದರ್ಶನ್ ಅಂದ್ರೆ ಇಷ್ಟ. ಇನ್ನು ಸ್ವಲ್ಪ ಏಕಾಗ್ರತೆ ವಹಿಸಿದ್ರೆ, ಕನ್ನಡದಲ್ಲಿ ನಂ ಒನ್ ನಟ ಆಗುತ್ತಾನೆ’.  ಹೀಗೆ ದರ್ಶನ್ ಬಗ್ಗೆ ರವಿ ಬೆಳೆಗೆರೆ ಉತ್ತಮ ಮಾತುಗಳನ್ನು ಆಡಿದ್ದರು. ಇದು ನಿಜವೂ ಹೌದು ಅಲ್ವಾ ಸ್ನೇಹಿತರೆ. ಈಗಾಗಲೇ ಕನ್ನಡದ ನಂ ಒನ್ ನಟ ಎನಿಸಿಕೊಂಡಿದ್ದಾರೆ ಡಿ ಬಾಸ್.

Challenging start DarshanKannada FilmKranti FilmRachita RamRavi belagereಕನ್ನಡ ಸಿನಿಮಾನಟ ದರ್ಶನ್