Man in Crime: ಹದಿಹರೆಯದಲ್ಲಿ ಪ್ರೀತಿ-ಪೇಮ ಎಲ್ಲವೂ ಸಾಮಾನ್ಯವಾಗಿ ಆಗುತ್ತದೆ. ಇದು ಮನುಷ್ಯನ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯಿಂದ ಈ ರೀತಿಯ ಭಾವನೆಗಳು ಹುಟ್ಟಿಕೊಳ್ಳುತ್ತದೆ. ಪ್ರೀತಿ ಎಲ್ಲಿ ಆಗುತ್ತದೆ, ಯಾರ ಮೇಲೆ ಆಗುತ್ತದೆ ಎಂದು ಹೇಳುವುದೇ ಕಷ್ಟ. ಇದನ್ನು ಇನ್ನೂ ಅರ್ಥೈಸಲು ಆಗಿಲ್ಲ. ದೆಹಲಿಯಲ್ಲಿ ಐಟಿ ಕಂಪನಿ ಉದ್ಯೋಗಿಯೊಬ್ಬ ತನ್ನ ಸಹೋದ್ಯೋಗಿಯನ್ನೇ ಪ್ರೇಮಿಸಿ ಲೀವಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದ. ಒಂದು ದಿನ ಆಕೆ ತನ್ನನ್ನು ಮದುವೆ ಆಗುವಂತೆ ಒತ್ತಾಯಿಸಿದಾಗ ಅದು ಆತನಿಗೆ ಇಷ್ಟವಿರಲಿಲ್ಲ. ಹಾಗಾಗಿ ಈ ಒತ್ತಡ ಜಾಸ್ತಿಯಾದಾಗ ಆಕೆಯನ್ನು ಕೊಂದು ಆಕೆಯ ದೇಹವನ್ನು ೩೨ ಭಾಗವಾಗಿ ತುಂಡರಿಸಿ ಪ್ರಿಡ್ಜ್ನಲ್ಲಿಟ್ಟಿದ್ದ. ನಂತರ ಒಂದೊಂದೆ ತುಂಡುಗಳನ್ನು ಕಾಡಿಗೆ ತೆಗೆದುಕೊಂಡು ಹೋಗಿ ಎಸೆದು ಬರುತ್ತಿದ್ದ. ಇದೀಗ ಆ ಯುವಕ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಹಸಿಯಾಗಿರುವಾಗಲೇ ಇನ್ನೊಂದು ಘಟನೆ ಕೇರಳಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: Real Story: ಎಲ್ಲವೂ ಚೆನ್ನಾಗಿತ್ತು, ಆದರೆ ಅತ್ತಿಗೆ ಮನೆಯಲ್ಲಿ ಒಬ್ಬರೇ ಇದ್ದಾಗ ಮೈದುನ ಬಂದು ಮಾಡಿದ್ದೇನು ಗೊತ್ತೇ? ಬೆಚ್ಚಿ ಬೀಳುವಂತಹ ಘಟನೆ ನಡೆದೇ ಹೋಯ್ತು!
೨೦೨೨ರ ಅಕ್ಟೋಬರ್ ೨೨ನೇ ತಾರೀಕಿನಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ. ಜೈಲಿನಲ್ಲಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ತನ್ನ ಕಥೆಯನ್ನು ಬಿಚ್ಚಿಟ್ಟಿದ್ದಾನೆ. ಯಾವುದೇ ಬೇಸರ, ಪಶ್ಚಾತಾಪ ಆತನ ಮುಖದಲ್ಲಿ ಇರಲಿಲ್ಲ.
ಕೊಲೆಯಾದ ಹುಡುಗಿಯ ಹೆಸರು ವಿಷ್ಣುಪ್ರಿಯ. ಕೊಲೆ ಮಾಡಿದ ಕಿರಾತಕನ ಹೆಸರು ಸ್ಯಾಮ್. ವಿಷ್ಣುಪ್ರಿಯ ಅಕ್ಟೋಬರ್ ೨೨ ರಂದು ತನ್ನ ತಾತನ ಅಂತ್ಯಕ್ರಿಯೆ ಕಾರ್ಯಕ್ರಮಕ್ಕಾಗಿ ಕೇರಳದ ಕಣ್ಣೂರಿಗೆ ಬಂದಿದ್ದಳು. ತಾತನ ಅಂತ್ಯ ಸಂಸ್ಕಾರ ಮುಗಿದ ಬಳಿಕ ಬಟ್ಟೆ ಬದಲಿಸಿ ಬರುತ್ತೇನೆ ಎಂದು ಹತ್ತಿರದಲ್ಲೇ ಇದ್ದ ಮನೆಗೆ ತೆರಳಿದ್ದಾಳೆ. ಆದರೆ ಮನೆಯೊಳಗೆ ಹೋಗಿ ಒಂದು ಘಂಟೆಯಾದರೂ ಬಾರದಿರುವುದನ್ನು ನೋಡಿ ವಿಷ್ಣುಪ್ರಿಯ ಪಾಲಕರು ಆ ಮನೆಗೆ ಬಂದು ನೋಡಿದಾಗ ವಿಷ್ಣುಪ್ರಿಯ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಇದನ್ನು ನೋಡಿ ವಿಷ್ಣುಪ್ರಿಯ ಪಾಲಕರು ದಂಗಾಗಿ ಹೋಗಿದ್ದರು. ಕೂಡಲೇ ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ. ಪೊಲೀಸರು ಆಗಮಿಸಿ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ನಂತರ ವಿಷ್ಣುಪ್ರಿಯಾಳ ಮೊಬೈಲ್ ವಶಕ್ಕೆ ಪಡೆದು ಅದನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಎರಡು ಹೆಸರುಗಳಿಗೆ ಹೆಚ್ಚಿನ ಕರೆ ಮಾಡಿರುವುದು ಕಂಡು ಬಂದಿದೆ. ಇದೇ ಆಧಾರದ ಮೇಲೆ ಕೇರಳದಲ್ಲಿ ಹೊಟೇಲ್ ನಡೆಸುತ್ತಿರುವ ಸ್ಯಾಮ್ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ:Girls are afraid of these things: ಪ್ರತಿ ಹುಡುಗಿಯರು, ಈ ಐದು ವಿಚಾರಗಳಿಗೆ ಗಡ ಗಡ ಎಂದು ನಡುಗುತ್ತಾರೆ, ಜೀವನದಲ್ಲಿ ಇರುವುದು ಈ ಐದು ಭಯ ಮಾತ್ರ!
ವಿಷ್ಣುಪ್ರಿಯಾಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿಷ್ಣುಪ್ರಿಯಾ ಫಾರ್ಮಸಿ ಓದುತ್ತಿದ್ದ ಹುಡುಗಿ. ಬಿಡುವಿನ ಸಮಯದಲ್ಲಿ ರೀಲ್ಸ್ ಮಾಡುತ್ತಿದ್ದಳು. ಇದನ್ನು ನೋಡಿದ ಸ್ಯಾಮ್ ಸಂದೇಶ ಕಳುಹಿಸಲು ಆರಂಭಿಸಿದ್ದಾನೆ. ಮೊದಲು ಯಾವುದೇ ರಿಪ್ಲೈ ನೀಡಿದ ವಿಷ್ಣುಪ್ರಿಯಾ ನಂತರ ಸಂದೇಶ ಕಳುಹಿಸಲು ಆರಂಭಿಸಿದ್ದಾಳೆ. ಹೀಗೆ ಸಂದೇಶದಿಂದ ಸ್ನೇಹಿತರಾಗಿದ್ದಾರೆ. ನಂತರ ಇಬ್ಬರು ಪ್ರೀತಿಸತೊಡಗಿದ್ದಾರೆ. ಮೊದಲು ಎಲ್ಲವೂ ಸರಿ ಇತ್ತು. ಬರಬರುತ್ತ ಸ್ಯಾಮ್ ವರ್ತನೆ ವಿಷ್ಣುಪ್ರಿಯಾಗೆ ಇಷ್ಟವಾಗಲಿಲ್ಲ. ಆತ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಳ್ಳುತ್ತಿದ್ದ. ಅಲ್ಲದೆ ಸಣ್ಣ ಸಣ್ಣ ವಿಚಾರಗಳಿಗೆ ವಿಷ್ಣುಪ್ರಿಯಳಿಗೆ ಬಯ್ಯುತ್ತಿದ್ದ. ಹೀಗಾಗಿ ವಿಷ್ಣುಪ್ರಿಯಾ ಸ್ಯಾಮ್ನೊಂದಿಗೆ ಲವ್ ಬ್ರೇಕಪ್ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: Man Cheated his wife: ಹತ್ತಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು, ಆದರೆ ಎರಡನೇ ವಾರಕ್ಕೆ ಗಂಡನ ಪರಿಸ್ಥಿತಿ ನೋಡಿ ಶಾಕ್ ಆದ ಹೆಂಡತಿ. ಏನಾಗಿದೆ ಗೊತ್ತೇ??
ಇಷ್ಟಾದರೂ ಸ್ಯಾಮ್ ವಿಷ್ಣುಪ್ರಿಯಾಳನ್ನು ಬಿಟ್ಟಿರಲಿಲ್ಲ. ನೀನು ನನಗೆ ಬೇಕೇ ಬೇಕು ಎಂದು ಹಠ ಹಿಡಿದಿದ್ದ. ಆದರೆ ವಿಷ್ಣುಪ್ರಿಯಾ ಮಾತ್ರ ಆತನ ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಈ ನಡುವೆ ವಿಷ್ಣುಪ್ರಿಯಾ ಮತ್ತೊಬ್ಬ ಹುಡುಗನೊಂದಿಗೆ ಓಡಾಡುತ್ತಿರುವುದು ಹಾಗೂ ಆತನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದಿದೆ. ಇದರಿಂದ ಸ್ಯಾಮ್ನ ಕೋಪ ನೆತ್ತಿಗೇರಿತ್ತು. ನನಗೆ ಸಿಗದವಳು ಯಾರಿಗೂ ಸಿಗಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದ. ವಿಷ್ಣುಪ್ರಿಯಾ ಕಣ್ಣೂರಿಗೆ ಬಂದಾಗ ಅವಳನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದ. ವಿಷ್ಣುಪ್ರಿಯಾಳನ್ನು ಕೊಂದ ಬಳಿಕ ಆ ಯುವಕನನ್ನು ಕೊಲ್ಲುವ ನಿರ್ಧಾರ ಮಾಡಿದ್ದ ಸ್ಯಾಮ್.
ವಿಷ್ಣುಪ್ರಿಯಾ ತಾತ ಮರಣಹೊಂದಿರುವ ವಿಚಾರ ತಿಳಿದು ಕಣ್ಣೂರಿಗೆ ಬಂದಾಗ ಒಬ್ಬಳೇ ಸಿಗುತ್ತಾಳೆ ಎಂದು ಆಕೆಯ ಮನೆಗೆ ತೆರಳಿದ್ದ. ಅಲ್ಲಿ ಆತ ಎಣಿಸಿದಂತೆ ವಿಷ್ಣುಪ್ರಿಯಾ ಒಬ್ಬಳೇ ಮನೆಗೆ ಬಂದಿದ್ದಳು. ಅಲ್ಲಿ ವಿಷ್ಣುಪ್ರಿಯಳನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ನಂತರ ಬಟ್ಟೆ, ಚಾಕು ಎಲ್ಲವನ್ನು ಒಂದು ಬ್ಯಾಗ್ನಲ್ಲಿ ತುಂಬಿಕೊಂಡು ಅಲ್ಲಿಯೇ ಪಕ್ಕದಲ್ಲಿದ್ದ ಬಾವಿಯಲ್ಲಿ ಹಾಕಿ ತೆರಳಿದ್ದ. ಸ್ಯಾಮ್ ಈ ಎಲ್ಲ ವಿಚಾರವನ್ನು ಯಾವುದೇ ಪಶ್ಚಾತಾಪ ಇಲ್ಲದೆ ತಿಳಿಸಿರುವುದು ಆಶ್ಚರ್ಯ ಮೂಡಿಸಿದೆ.