Real Story: ಅಯ್ಯೋ ಮಕ್ಕಳು ವಿಷದ ಊಟ ತಿಂದಿದ್ದಾರೆ ಬೇಗ ಬಾರಯ್ಯ ಎಂದು ಪತಿಗೆ ಫೋನ್ ಮಾಡಿ ಗೋಳಾಡಿದ ಪತ್ನಿ. ತನಿಖೆ ನಂತರ ಬಯಲಾಯಿತು ಪುಟ್ಟ ಮಕ್ಕಳನ್ನು ಸ್ಮ*ಶಾನಕ್ಕೆ ಕಳಿಸಿದ್ದು ಯಾರು ಅಂತ!

Real Story: ಹೆಣ್ಣನ್ನು ಕ್ಷಮಯಾ ಧರಿತ್ರಿ ಅಂತಾರೆ, ಭಾರತದಲ್ಲಿ ಹೆಣ್ಣಿಗೆ ಬಹುದೊಡ್ಡ ಸ್ಥಾನವಿದೆ ಹೆಣ್ಣಿಲ್ಲದ ಮನೆ ಮನೆ ಅಲ್ಲ, ಕಣ್ಣಿಲ್ಲದ ಬದುಕು ಬದುಕು ಅಲ್ಲ ಎನ್ನುವಂತಹ ಮಾತಿದೆ ಹೆಣ್ಣನ್ನ ಮನೆಯ ಅದೃಷ್ಟ ದೇವತೆ ಆಕೆಯನ್ನು ಲಕ್ಷ್ಮಿ ಎಂದೆಲ್ಲ ಕರೆಯಲಾಗುತ್ತದೆ. ಆದರೆ ಮನೆಯನ್ನು ಸಂರಕ್ಷಿಸಬೇಕಾದ ಹೆಣ್ಣೇ ಮನೆಗೆ ವಿರುದ್ಧವಾಗಿ ನಡೆದುಕೊಂಡರೆ ಹೇಗೆ? ಬೇಲಿಯ ಎದ್ದು ಹೊಲ ಮೈದಂತೆ ಅಲ್ವಾ!

ಹೆಣ್ಣಿನ ಹೆಸರಿಗೆ ಚ್ಯುತಿ ಬರುವಂತಹ ಒಂದು ಕೆಲಸವನ್ನು ಈ ಮಹಾತಾಯಿ ಮಾಡಿಬಿಟ್ಟಿದ್ದಾಳೆ ನೋಡಿ. ಇತ್ತೀಚೆಗೆ ಹೆಣ್ಣು ತನ್ನ ಸ್ಥಾನ ಮಾನ ತನ್ನ ಕರ್ತವ್ಯ ಇವುಗಳ ಬಗ್ಗೆ ಪರಿವೇ ಇಲ್ಲದಂತೆ ವರ್ತಿಸುತ್ತಾಳೆ. ಮದುವೆಯಾದ ಗಂಡನಿಗೆ ಮೋಸ ಮಾಡಿ ಬೇರೆಯವರ ಜೊತೆ ಸಂಬಂಧ ಕಟ್ಟಿಕೊಂಡಿರುವ ಅದೆಷ್ಟು ಮಹಿಳೆಯರು ಇಂದು ಸಂಭಾವಿತ ಮಹಿಳೆಯರ ತಲೆ ತಗ್ಗಿಸುವಂತೆ ಮಾಡಿದ್ದಾರೆ.

ಈ ಘಟನೆ ಕನ್ಯಾಕುಮಾರಿ ಜಿಲ್ಲೆಯ ಮಾರ್ತಾಂಡ ಪ್ರದೇಶದ ಕುಲಕಚ್ಚಿ ಎನ್ನುವ ಸ್ಥಳದಲ್ಲಿ ನಡೆದಿದೆ. ಆಕೆ ಹೆಸರು ಕಾರ್ತಿಕ ಆಕೆಯ ಗಂಡ ಜಗದೀಶ್. ಇವರಿಬ್ಬರಿಗೆ ಮದುವೆಯಾಗಿ ಎರಡು ಮಕ್ಕಳು ಇದ್ದರು. ಮೂರು ವರ್ಷದ ಸಂಜನಾ ಹಾಗೂ ಒಂದುವರೆ ವರ್ಷದ ಶರಣ್ ಎನ್ನುವರು ಇವರ ಮಕ್ಕಳು. ಗಂಡ ದಿವೂ ಹೊರಗಡೆ ದುಡಿಯಲು ಹೋಗುತ್ತಿದ್ದ. ಹೆಂಡತಿ ಕಾರ್ತಿಕ ಮನೆಯಲ್ಲಿಯೇ ಇದ್ದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಅವರದ್ದು ಒಂದು ರೀತಿಯ ಚೊಕ್ಕ ಹಾಗೂ ಸುಂದರವಾದ ಸಂಸಾರವಾಗಿತ್ತು. ಆದರೆ ಕಾರ್ತಿಕಳಿಗೆ ಆದ ಎಲ್ಲಿಂದ ದುರ್ಬುದ್ದಿ ಎಲ್ಲಿಂದ ಬಂತೋ ಗೊತ್ತಿಲ್ಲ, ತಾನು ಹೆತ್ತ ಮಕ್ಕಳನ್ನೆ ಸ್ಮ- ಶಾನಕ್ಕೆ ಕಳುಹಿಸಿ ಬಿಟ್ಟಿದ್ದಾಳೆ.

ಹೌದು ಈಗ ಆಕೆ ಜೈಲು ಪಾಲಾಗಿರಬಹುದು. ಆದರೆ ಆಕೆ ಮಾಡಿದ ಕೆಲಸಕ್ಕೆ ಆಕೆಗೆ ಈಗ ಸಿಕ್ಕಿರುವ ಶಿಕ್ಷೆ ಏನೇನು ಅಲ್ಲ. ಅಷ್ಟಕ್ಕೂ ಆಕೆ ಮಾಡಿದ್ದೇನೋ ಗೊತ್ತಾ? ಮಕ್ಕಳು ವಿಷ ಸೇವಿಸಿದ್ದಾರೆ ಎಂದು ಪತಿಗೆ ಕರೆ ಮಾಡಿ ಹೇಳಿ ಗೋಳೋ ಎಂದು ಅಳುತ್ತಾಳೆ. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮಗ ಶರಣ ಅಸು ನೀಗಿದ್ದಾನೆ ಮಗಳು ಸಂಜನಾಳ ಸ್ಥಿತಿ ಗಂಭೀರವಾಗಿತ್ತು. ಕಡೆಗೂ ಪೊಲೀಸರ ತನಿಖೆಯಲ್ಲಿ ಮಕ್ಕಳು ಹೇಗೆ ವಿಷ ಸೇವಿಸಿದ್ದಾರೆ ಎನ್ನುವ ಸತ್ಯ ಬಯಲಾಗಿದೆ.

ಕಾರ್ತಿಕ ಕೆಲವು ದಿನಗಳ ಹಿಂದೆ ಒಬ್ಬ ಹುಡುಗನೊಂದಿಗೆ ಬೇಡದ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಆತ ನಿನಗೆ ಇಬ್ಬರು ಮಕ್ಕಳಿದ್ದಾರೆ ಎಂದು ಕಾರ್ತಿಕಳನ್ನು ದೂರ ಮಾಡಿದ. ಆದರೆ ಕಾರ್ತಿಕಾಳಿಗೆ ಆತನ ಮೇಲೆ ಅತಿಯಾದ ಮೋಹ ಇದಕ್ಕೆ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ತಿಳಿದ ಆಕೆ ಇಲಿ ಪಾ-ಷಣದಲ್ಲಿ ಉಪ್ಪು ನೀರು ಸೇರಿಸಿ ಮಕ್ಕಳಿಗೆ ಕೊಡಿಸಿ ಬಿಟ್ಟಿದ್ದಾಳೆ. ತನಗೇನು ಗೊತ್ತಿಲ್ಲದಂತೆ ನಾಟಕವಾಡಿದ ಕಾರ್ತಿಕ ಇದೀಗ ಕಂಬಿ ಹಿಂದೆ ಇದ್ದಾಳೆ.

Crimekarnatakareal storywoman killed her child