Crime Story: ಈ ಕುಟುಂಬದಲ್ಲಿ ಹುಡುಗನಿಗೆ 31 ವರ್ಷ ಆಗಿದ್ದರು ಇನ್ನು ಮದುವೆ ಆಗಿರಲಿಲ್ಲ, ಅವನಿಗೆ ಇಷ್ಟ ಅಗುವಂಥ ಹುಡುಗಿ ಸಿಗದೆ ಮದುವೆ ತಡವಾಗಿತ್ತು. ಮನೆಯಲ್ಲಿ ಹುಡುಗಿಯನ್ನು ಹುಡುಕುತ್ತಿದ್ದರು., ಆ ಸಮಯಕ್ಕೆ ಒಬ್ಬ ಬ್ರೋಕರ್ ಬಂದು, ಒಂದು ಹುಡುಗಿಯನ್ನು ತೋರಿಸಿದರು, ಆ ಹುಡುಗಿ ನೋಡಲು ತುಂಬಾ ಸುಂದರವಾಗಿದ್ದಳು, ಹಾಗಾಗಿ ಅವನು ಕೂಡ ಒಪ್ಪಿಕೊಂಡ. ಹುಡುಗಿ ಮನೆಯವರು ಅಕ್ಷಯ ತೃತೀಯ ದಿನ ಮದುವೆ ಮಾಡಬೇಕು ಎಂದು ನಿರ್ಧಾರ ಮಾಡಿದರು. ಹುಡುಗನಿಗೆ ಅಷ್ಟು ಕಾಯುವುದಕ್ಕೆ ಇಷ್ಟವಿರಲಿಲ್ಲ.
ಹಾಗಿದ್ದರೂ ಒಪ್ಪಿಕೊಂಡ. ನಂತರ ಏನಾಯಿತು ಎಂದರೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಶೋಕ್ ನಗರ ಜಿಲ್ಲೆಯ ಅನಿಲ್ ಭಾರ್ಗವ ಕಮಲೇಶ್ ಎನ್ನುವ ಬ್ರೋಜರ್ ಇಂದ ಆರತಿ ಸಾಹು ಎನ್ನುವ ಹುಡುಗಿಯನ್ನು ನೋಡಲು ಹೋಗಿದ್ದರು. ಹುಡುಗನಿಗೆ ಆಕೆ ತಕ್ಷಣವೇ ಇಷ್ಟವಾಗಿ, ಮದುವೆಗೆ ಒಪ್ಪಿದ. ಹುಡುಗಿ ಮದುವೆಗೆ ಸ್ವಲ್ಪ ಸಮಯ ಕೇಳಿದಳು, ಆದರೆ ಹುಡುಗ ಅದಕ್ಕೆ ಒಪ್ಪದೆ ಬಹಳ ಬೇಗನೆ ಮದುವೆ ಆಗಬೇಕು ಎಂದು ಮನೆಯವರೆಲ್ಲರ ಜೊತೆಗೆ ಮಾತನಾಡಿದ.. (Crime Story)
ಹುಡುಗಿಯನ್ನು ಬೇಗ ಮದುವೆಯಾಗಿ ಮನೆಗೆ ಕರೆದುಕೊಂಡು ಹೋದ.ಅವನಿಗೆ ಮದುವೆಯಾದ ನಂತರ ಬಹಳ ಸಂತೋಷವಾಗಿತ್ತು. ಮದುವೆಯಾದ ನಂತರ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋದ. (Crime Story) ಸೊಸೆಯನ್ನು ನೋಡಿ ಮನೆಯವರಿಗೂ ಕೂಡ ಸಂತೋಷವಾಗಿತ್ತು, ಆಕೆ ಅಡುಗೆ ಮಾಡುತ್ತೇನೆ ಎಂದು ಹೇಳಿ ಮಾಡಿದ ಅಡುಗೆಯನ್ನು ಮನೆಯವರೆಲ್ಲರು ಬಹಳ ಸಂತೋಷದಿಂದ ತಿಂದರು. ತಿಂದು ಚೆನ್ನಾಗಿ ನಿದ್ದೆ ಮಾಡಿ, ಮರುದಿನ ಬೆಳಗ್ಗೆ ಎದ್ದು ನೋಡಿದರೆ, ಮನೆ ಖಾಲಿ ಆಗಿದೆ. ಮನೆಯಲ್ಲಿದ್ದ 2 ಲಕ್ಸ್ಜ ಕ್ಯಾಶ್, ಚಿನ್ನದ ಒಡವೆಗಳು..
(Crime Story )ಬೆಳ್ಳಿ ವಸ್ತುಗಳು ಎಲ್ಲವನ್ನು ದೋಚಿಕೊಂಡು ಪರಾರಿಯಾಗಿದ್ದಳು ವಧು. ತಮಗೆ ಮೋಸ ಮಾಡಿ, ಈ ರೀತಿ ಆಗಿದ್ದಕ್ಕೆ, ವರನ ಮನೆಯವರಿಗೆ ಶಾಕ್ ಆಗಿದೆ. ಮದುವೆಯಾದ ವಧು ಊಟದಲ್ಲಿ ಏನನ್ನೋ ಮಿಕ್ಸ್ ಮಾಡಿ, ಮನೆಯವರಿಗೆಲ್ಲ ತಿನ್ನಿಸಿ, ಇಂಥ ಕೆಲಸ ಮಾಡಿದ್ದಾಳೆ. ಈ ವಿಷಯ ಅವರಿಗೆ ಅರಿವಾದ ನಂತರ, ಹುಡುಗನ ಮನೆಯವರು ಪೊಲೀಸರ ಬಳಿ ದೂರು ನೀಡಿದ್ದಾರೆ.