Vastu Tips: ನಿಮ್ಮ ಮನೆಯಲ್ಲಿ ತೀರಾ ಸಮಸ್ಯೆನಾ, ಹಣಕಾಸು ತೊಂದರೆನಾ? ಹಾಗಾದ್ರೆ ಇದೊಂದು ಕೆಲಸ ಮಾಡಿ, ನಿಮ್ಮ ಜೀವನದಲ್ಲಿ ಚಮತ್ಕಾರವೇ ನಡೆಯುತ್ತೆ!

Vastu Tips: ಒಂದು ವೇಳೆ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ ಆ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಅಂದ್ರೆ ತಪ್ಪದೇ ಈ ರೀತಿ ಮಾಡಿ. ಅಡುಗೆ ಅಂದ್ರೆ ಉಪ್ಪು ಇರಲೇಬೇಕು ಅನ್ನೋದು ಮೊದಲಿನಿಂದಲೂ ಕೂಡ ಮುಂದುವರೆದುಕೊಂಡು ಬಂದಿರುವ ನಿಯಮ. ಈ ಉಪ್ಪನ್ನು ಕೇವಲ ಅಡಿಗೆಗೆ ಮಾತ್ರವಲ್ಲದೆ ಈ ರೀತಿ ವಾಸ್ತು ದೋಷದ ಸಮಸ್ಯೆಗಳಿಗೆ ಕೂಡ ಬಳಸಿಕೊಳ್ಳಬಹುದಾಗಿದೆ. ಒಂದು ವೇಳೆ ನಿಮಗೆ ಜೀವನದಲ್ಲಿ ಸಮಸ್ಯೆ ಹೆಚ್ಚಾಗ್ತಾ ಇದೆ ಅಂದ್ರೆ ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಮುಖ್ಯದ್ವಾರಕ್ಕೆ ಕಟ್ಟಿದರೆ ಸಮಸ್ಯೆಗಳು ದೂರವಾಗುತ್ತವೆ ಅನ್ನು ವಾಸ್ತು ಟಿಪ್ಸ್ ಕೂಡ ಇದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಅದನ್ನ ಮುಖ್ಯದ್ವಾರಕ್ಕೆ ತೂಗು ಹಾಕುವುದರಿಂದಾಗಿ ಮನೆಯ ಒಳಗೆ ಕೆಟ್ಟ ಶಕ್ತಿಗಳು ಪ್ರವೇಶ ಆಗುವುದು ದೂರವಾಗುತ್ತದೆ. ಯಾವುದೇ ರೀತಿಯ ವಾಸ್ತು ಸಮಸ್ಯೆಗಳು ನಿಮ್ಮ ಮನೆಯಲ್ಲಿ ಕಾಡುತ್ತಿದ್ರೆ ಆ ಸಂದರ್ಭದಲ್ಲಿ ಕೆಂಪು ಬಟ್ಟೆಯಲ್ಲಿ ಉಪ್ಪನ್ನು ಕಟ್ಟಿ ಮುಖ್ಯ ದ್ವಾರಕ್ಕೆ ತೂಗು ಹಾಕುವುದು ಅತ್ಯಂತ ಉತ್ತಮ ಉಪಾಯವಾಗಿದೆ ಎನ್ನಬಹುದಾಗಿದೆ. ಹೀಗಾಗಿ ಈ ಉಪಾಯವನ್ನು ಈ ಸಮಸ್ಯೆಯಿಂದ ಪಾರಾಗುವುದಕ್ಕೆ ಬಳಸಬಹುದಾಗಿದೆ.

ಒಂದು ವೇಳೆ ಮನೆಯಲ್ಲಿ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಮುಗಿಯದ ಜಗಳಗಳು ಕಂಡು ಬರುತ್ತಿದ್ದರೆ ಆ ಸಂದರ್ಭದಲ್ಲಿ ಕೂಡ ಈ ವಾಸ್ತು ಟಿಪ್ಸ್ ಅನ್ನು ನೀವು ನಿಮ್ಮ ಜೀವನದಲ್ಲಿ ಫಾಲೋ ಮಾಡುವುದರಿಂದ ನಿಮಗೆ ಪರಿಹಾರ ನೀಡುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹಣ ನಿಲ್ತಾ ಇಲ್ಲ ಅಂದ್ರೆ ಹಾಗೂ ದರಿದ್ರ ಹೆಚ್ಚಾಗಿ ಕಾಡ್ತಾ ಇದೆ ಅಂದ್ರೆ ಆ ಸಂದರ್ಭದಲ್ಲಿ ಕೂಡ ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯ ಮುಂದೆ ತೂಗುಹಾಕುವುದು ಈ ಸಮಸ್ಯೆಯಿಂದ ನಿಮಗೆ ಹೊರಗೆ ಬರೋದಕ್ಕೆ ಸಹಾಯ ಮಾಡುತ್ತದೆ. ಇದರಿಂದಾಗಿ ನೀವು ನಿಮ್ಮ ಆರ್ಥಿಕ ಸಮಸ್ಯೆಯಿಂದ ಹೊರಬರುವುದಕ್ಕೆ ಈ ಉಪಾಯ ಸಹಾಯ ಮಾಡುತ್ತದೆ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಮನೆಯಲ್ಲಿ ದಿನನಿತ್ಯ ಜಗಳ ಅಥವಾ ಯಾವುದೇ ರೀತಿಯ ಕಲಹಗಳು ಇಲ್ಲವೇ ಅಶಾಂತಿ ನೆಲೆಸಿರುವುದರಿಂದ ಮನೆಯ ವಾತಾವರಣ ಹಾಳಾಗುತ್ತಿದ್ದರೆ ಆ ಸಂದರ್ಭದಲ್ಲಿ ಕೂಡ ನೀವು ಇದೇ ಉಪಾಯವನ್ನು ಬಳಸುವ ಮೂಲಕ ಸಮಸ್ಯೆ ಎಂದು ಹೊರಬರಬಹುದಾಗಿದೆ. ಪ್ರಮುಖವಾಗಿ ಯಾವುದೇ ಕೆಟ್ಟ ದೃಷ್ಟಿಗಳು ನಿಮ್ಮ ಮನೆ ಮೇಲೆ ಬೀಳೋದಿಲ್ಲ. ಯಾಕೆಂದ್ರೆ ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟುವುದರ ಮೂಲಕ ಮನೆಯ ಮುಂದೆ ತೂಗು ಹಾಕಿದರೆ ಸಾಕು ಈ ಎಲ್ಲ ಸಮಸ್ಯೆಗಳನ್ನು ನೀವು ಮುಕ್ತಿಯನ್ನು ಪಡೆದುಕೊಳ್ಳುತ್ತೀರಿ. ಪ್ರತಿಯೊಂದು ಸಮಸ್ಯೆಗಳಿಗೂ ಕೂಡ ವಾಸ್ತು ಶಾಸ್ತ್ರದಲ್ಲಿ ಪರಿಹಾರ ಇದೆ ಎನ್ನುವುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

Vastu Tips