Astrology: ಮನೆಯಲ್ಲಿ ಈ ತರದ್ ಘಟ್ನೆ ನಡೆದರೆ, ಲಕ್ಷ್ಮಿ ನಿಮ್ಮ ಮನೆಗೆ ಬರುವ ಮುನ್ಸೂಚನೆ ಅಂತ ನಿಮಗೊತ್ತಿತ್ತಾ?

Astrology: ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತಿನ ಅಧಿದೇವತೆ ಎಂಬುದಾಗಿ ಕರೆಯಲಾಗುತ್ತದೆ. ಆಕೆಯನ್ನ ಪ್ರತಿಯೊಬ್ಬರು ಕೂಡ ಪೂಜಿಸುತ್ತಾರೆ ಅದರಲ್ಲೂ ವಿಶೇಷವಾಗಿ ಶುಕ್ರವಾರದ ದಿನದಂದು ಆಕೆಯನ್ನು ಪೂಜಿಸುವುದರಿಂದಾಗಿ ಇನ್ನಷ್ಟು ಆಕೆಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು ಎನ್ನುವಂತಹ ನಂಬಿಕೆ ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿದೆ.

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಅಥವಾ ತಮ್ಮ ಮನೆಗೆ ಲಕ್ಷ್ಮಿ ಆಗಮನ ಆಗಲಿ ಅದರಿಂದ ಅದೃಷ್ಟ ಹೆಚ್ಚಾಗಿ ಕೈ ತುಂಬಾ ಸಂಪಾದನೆ ಆಗಲಿ ಅನ್ನುವಂತಹ ಆಸೆಯನ್ನು ಹೊಂದಿರುತ್ತಾರೆ. ಆದರೆ ಲಕ್ಷ್ಮಿ ಮನೆಗೆ ಬರ್ತಾಳೆ ಅನ್ನೋದರ ಮುನ್ಸೂಚನೆ ಏನಿರುತ್ತೆ ಅನ್ನೋದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಹಾಗಿದ್ರೆ ಬನ್ನಿ ಆ ಮುನ್ಸೂಚನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಲಕ್ಷ್ಮಿ ಮನೆಗೆ ಬರ್ತಿದ್ದಾಳೆ ಅಂದ್ರೆ ಈ ಮುನ್ಸೂಚನೆ ಸಿಗುತ್ತೆ!

  • ಸಾಮಾನ್ಯವಾಗಿ ನಿಮ್ಮ ಮನೆಯ ಮಾಳಿಗೆಯ ಪ್ರದೇಶದಲ್ಲಿ ಹಕ್ಕಿ ಗೂಡು ಕಟ್ಟಿ ವಾಸಿಸುವುದನ್ನ ಪ್ರಾರಂಭಿಸಿದ್ರೆ ಅಥವಾ ಅದನ್ನ ನೀವು ನೋಡಿದ್ರೆ, ಇಲ್ಲವೇ ನಿಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ರೀತಿಯ ಹಕ್ಕಿಗೂಡು ಕಟ್ಟಿರುವುದನ್ನ ನೋಡಿದರೆ ನಿಮ್ಮ ಮನೆಗೆ ಮಹಾಲಕ್ಷ್ಮಿ ಕಾಲಿಡುತ್ತಿದ್ದಾಳೆ ಎನ್ನುವುದರ ಮುನ್ಸೂಚನೆಯಾಗಿದೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
  • ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಹಲ್ಲಿ ಕಂಡುಬರುತ್ತದೆ ಆದರೆ ವಿಶೇಷವಾಗಿ ಸೂರ್ಯ ಮುಳುಗಿ ಹೋದ ನಂತರ ಮೂರು ಹಲ್ಲಿಗಳು ನಿಮಗೆ ಒಟ್ಟಾಗಿ ಕಾಣಿಸಿಕೊಂಡರೆ ಅದನ್ನು ಅತ್ಯಂತ ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಮಹಾಲಕ್ಷ್ಮಿ ನಿಮ್ಮ ಮನೆಗೆ ಕಾಲಿಡುತ್ತಿದ್ದಾಳೆ ಎನ್ನುವುದರ ಮುನ್ಸೂಚನೆಯಾಗಿದೆ. ಇದರಿಂದಾಗಿ ನಿಮ್ಮ ಪ್ರತಿಯೊಂದು ಹಣಕಾಸಿನ ಸಮಸ್ಯೆಗಳು ಶೀಘ್ರದಲ್ಲಿ ಪರಿಹಾರ ಆಗಲಿವೆ.
  • ಒಂದು ವೇಳೆ ಸಂಜೆಯ ವೇಳೆಗೆ ನಿಮ್ಮ ಸುತ್ತಮುತ್ತ ಕಪ್ಪು ಇರುವೆಗಳು ಹೆಚ್ಚಾಗಿ ಕಂಡುಬಂದರೆ ಇದು ಕೂಡ ಮಹಾಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲೆ ಇದೇ ಅನ್ನೋದರ ಅರ್ಥವಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಅದೃಷ್ಟ ಹೆಚ್ಚಾಗಬೇಕು ಅಂದ್ರೆ ಅವುಗಳಿಗೆ ಸಕ್ಕರೆಯಂತಹ ಆಹಾರ ಪದಾರ್ಥವನ್ನು ನೀಡಬೇಕು.
  • ನಿಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುವಂತಹ ಕೆಲವೊಂದು ವಿಚಾರಗಳು ಕೂಡ ಇದಕ್ಕೆ ಸಂಬಂಧಪಟ್ಟಿದ್ದಾಗಿರುತ್ತದೆ. ಒಂದು ವೇಳೆ ಕನಸಿನಲ್ಲಿ ನಿಮಗೆ ಪೊರಕೆ ಗುಲಾಬಿ ಕಮಲ ಗಳಂತಹ ವಸ್ತುಗಳು ಕಾಣಿಸಿಕೊಂಡರೆ ಲಕ್ಷ್ಮೀದೇವಿ ಆಗಮನ ನಿಮ್ಮ ಜೀವನದಲ್ಲಿ ಆಗಿದೆ ಎನ್ನುವುದಾಗಿ ಅರ್ಥವಾಗಿದೆ. ಇಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆಗಳಿಂದ ಮುಕ್ತರಾಗಲಿದ್ದಾರೆ.

ಈ ಮೇಲೆ ತಿಳಿಸಿರುವ ಅಂತಹ ಮುನ್ಸೂಚನೆಗಳನ್ನು ನಿಮ್ಮ ಜೀವನದಲ್ಲಿ ನೀವು ಅನುಭವಿಸಿದ್ದರೆ ಅಥವಾ ಮುಂದಿನ ದಿನಗಳಲ್ಲಿ ಅನುಭವಿಸಿದರೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಿಮ್ಮ ಜೀವನದ ಮೇಲೆ ಇದೆ ಅನ್ನುವುದಾಗಿ ಅರ್ಥವಾಗಿದ್ದು ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ ಎನ್ನುವುದಾಗಿದೆ.

Astrology