Darshan Case: ದರ್ಶನ್ ರವರ ಸಹೋದರ ದಿನಕರ್ ತೂಗುದೀಪ್ ಯಾಕೆ ಬಾಡಿಗೆ ಮನೆಯಲ್ಲಿದ್ದಾರೆ ಈಗ ಗೊತ್ತಾಯಿತು ನೋಡಿ ನಿಜವಾದ ವಿಚಾರ?

Darshan Case: ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜೈಲುವಾಸವನ್ನ ಅನುಭವಿಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದ್ದು ಈ ಸಂದರ್ಭದಲ್ಲಿ ಪವಿತ್ರ ಗೌಡ ಅವರಿಗೆ ದರ್ಶನ್ ರವರು ಮನೆ ಕಟ್ಟಿಸಿ ಕೊಡಬಹುದು ಆದರೆ ತಮ್ಮ ಸ್ವಂತ ತಮ್ಮ ಆಗಿರುವಂತಹ ದಿನಕರವರಿಗೆ ಯಾಕೆ ಮನೆ ಕಟ್ಟಿಸಿ ಕೊಡುತ್ತಿಲ್ಲ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಆರೋಪ ಮಾಡಿದರು. ಆದರೆ ಹಿರಿಯ ನಿರ್ದೇಶಿಕ ಆಗಿರುವಂತಹ ಎಚ್ ವಾಸು ರವರು ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ನಿಜಾಂಶ ಏನು ಎಂಬುದಾಗಿ ಹೇಳಿಕೊಂಡಿದ್ದಾರೆ.

ದಿನಕರ್ ತೂಗುದೀಪ್ ರವರ ಬಳಿ ಸ್ವಂತ ಮನೆ ಇಲ್ಲ ಯಾಕೆ ಗೊತ್ತಾ?

ದಿನಕರ್ ತೂಗುದೀಪ್ ರವರ ಬಳಿ ಸ್ವಂತ ಮನೆ ಇಲ್ಲದೆ ಇರಬಹುದು ಆದರೆ ಅವರು 2 ಬಿ ಎಚ್ ಕೆ ಮನೆಯಲ್ಲಿ ಆರಾಮಾಗಿದ್ದಾರೆ ಹಾಗೂ ಆ ಮನೆ ಕೂಡ ಬಡವರ ಮನೆ ಆಗಿಲ್ಲ ತುಂಬಾನೇ ಚೆನ್ನಾಗಿದೆ ಎಂದು ಹೇಳಿದ್ದಾರೆ. ದಿನಕರ್ ಬಳಿ ಸೈಟ್ ಇದೆ ಆದರೆ ತನ್ನ ಸ್ವಂತ ದುಡಿದ ದುಡ್ಡಿನಲ್ಲೇ ಮನೆಯನ್ನು ಕಟ್ಟಿಸಬೇಕು ಎನ್ನುವಂತಹ ಆಸೆ ಆತನ ಬಳಿ ಇದೆ. ಇದೇ ಕಾರಣಕ್ಕಾಗಿ ಆಟ ತಾನು ದುಡಿದಿರುವಂತಹ ದುಡ್ಡಿನಲ್ಲಿ ಮನೆಯನ್ನು ಕಟ್ಟಿಸಬೇಕು ಎಂಬುದಾಗಿ ಕಾಯುತ್ತಿದ್ದಾನೆ ಇಲ್ಲದೇ ಇದ್ದಿದ್ರೆ ದರ್ಶನ್ ರವರಿಗೆ ತಮ್ಮನಿಗೆ ಒಂದು ಮನೆ ಕೊಡಿಸುವುದಕ್ಕೆ ಎಷ್ಟು ಸಮಯ ಬೇಕಾಗಿರುತ್ತಿತ್ತು ನೀವೇ ಹೇಳಿ ಅಂದಾಗಿ ದರ್ಶನ್ ರವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಇನ್ನು ತಾಯಿಯ ಬಗ್ಗೆ ಮಾತನಾಡಿರುವಂತಹ ಎಚ್ ವಾಸು ಗಂಡ ಕಟ್ಟಿಸಿರುವಂತಹ ಮನೆಯಲ್ಲೇ ಇರಬೇಕು ಅನ್ನೋದು ಅವರ ಆಸೆ ಹೀಗಾಗಿ ಮೀನ ಅವರು ಆ ಮನೆಯಲ್ಲಿದ್ದಾರೆ ಎನ್ನುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಅಣ್ಣ ತಮ್ಮಂದಿರ ಮಧ್ಯೆ ಯಾವ ರೀತಿಯಲ್ಲಿ ಸಂಬಂಧ ಇದೆ ಅನ್ನೋದು ಅವರಿಗೆ ತಿಳಿದಿದೆ ಆದರೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಸಂಬಂಧ ಏನು ಹದಗೆಟ್ಟಿಲ್ಲ ಎನ್ನುವುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಎಚ್ ವಾಸು ರವರು ದರ್ಶನ್ ರವರಿಗೆ ನಾಲ್ಕು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ ಅನ್ನೋದನ್ನ ನಾವು ಇಲ್ಲಿ ತಿಳಿದುಕೊಳ್ಳಬಹುದು. ಚೆನ್ನಾಗಿದ್ದಾಗ ಒಬ್ಬ ವ್ಯಕ್ತಿಯ ವಿಚಾರದ ಬಗ್ಗೆ ಯಾವುದೇ ಮಾತುಗಳನ್ನ ಯಾರು ಕೂಡ ಆಡೋದಿಲ್ಲ ಆದರೆ ಒಮ್ಮೆ ಆಟ ಸಮಸ್ಯೆಗೆ ಸಿಲುಕಿ ಕೊಂಡಾಗ ಆತನ ಹಳೆಯ ವಿಚಾರಗಳನ್ನು ಕೂಡ ಕೆದಕಿ ಅದಕ್ಕೆ ಬಣ್ಣ ಕಟ್ಟುವಂತಹ ಪ್ರಯತ್ನ ಸಮಾಜದಲ್ಲಿ ನಡೆಯುತ್ತದೆ ಎಂಬುದಾಗಿ ವಾಸು ಅವ್ರು ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Darshan Case