Cricket News: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲದೆ ಇರಬಹುದು ಆದರೆ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ಕ್ರಿಕೆಟ್ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ವಿಶೇಷವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಗರದ ರೀತಿಯಲ್ಲಿ ಆರ್ಸಿಬಿ ಅಭಿಮಾನಿಗಳು ಇನ್ನು ವಿಶೇಷವಾಗಿ ನಾವು ಮಾತನಾಡಲು ಹೊರಟಿರುವುದು ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಮುಗಿದಿರುವಂತಹ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಅಂದ್ರೆ ಒಟ್ಟಾರೆಯಾಗಿ ಐಪಿಎಲ್ ನಿಂದಲೇ ದಿನೇಶ್ ಕಾರ್ತಿಕ್ ರವರು ನಿವೃತ್ತಿಯನ್ನು ಹೊಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ಅದರಲ್ಲೂ ವಿಶೇಷವಾಗಿ ಫಿನಿಷರ್ ರೂಪದಲ್ಲಿ ದಿನೇಶ್ ಕಾರ್ತಿಕ್ ರವರು ಆಟ ಆಡಿರುವಂತಹ ರೀತಿ ನಿಜಕ್ಕೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಕಾಲ ಹಚ್ಚಹಸಿರಾಗಿ ಉಳಿದುಕೊಳ್ಳುತ್ತದೆ. ದಿನೇಶ್ ಕಾರ್ತಿಕ್ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬ್ಯಾಟ್ಸ್ಮನ್ ಆಗಿ ಸಾಕಷ್ಟು ಸೋಲುತ್ತಿರುವ ಪಂದ್ಯಗಳನ್ನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆದ್ದು ಕೊಟ್ಟಿದ್ದಾರೆ. ಹೀಗಾಗಿ ಆರ್ಸಿಬಿ ತಂಡದಿಂದ ಅವರನ್ನು ಬಿಟ್ಟು ಬೇರೆ ಕಡೆ ನೋಡೋದು ಯಾರಿಂದಲೂ ಕೂಡ ಸಾಧ್ಯ ಇಲ್ಲ. ಹೀಗಾಗಿ ಈ ಬಾರಿ ಮತ್ತೆ ಅವರನ್ನು ತಂಡಕ್ಕೆ ಕರೆದುಕೊಳ್ಳಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಮತ್ತೆ ಆರ್ಸಿಬಿ ಸೇರಿಕೊಂಡ ದಿನೇಶ್ ಕಾರ್ತಿಕ್!
ಹೌದು ಮತ್ತೆ ತನ್ನನ್ನು ತಾನು ದಿನೇಶ್ ಕಾರ್ತಿಕ್ ರವರು ಆರ್ಸಿಬಿಯ ಟೀಮ್ ಮ್ಯಾನೇಜ್ಮೆಂಟ್ ನಲ್ಲಿ ಕಂಡುಕೊಳ್ಳಬೇಕು ಎಂದು ಆರ್ಸಿಬಿ ಟೀಂ ಮ್ಯಾನೇಜ್ಮೆಂಟ್ ಬಯಸಿದೆ. ಇನ್ನು ಈ ಆಹ್ವಾನಕ್ಕೆ ದಿನೇಶ್ ಕಾರ್ತಿಕ್ ರವರು ಕೂಡ ಒಪ್ಪಿಗೆ ಸೂಚಿಸಿದ್ದು ನಾನು ಯಾವುದೇ ಹಣಕ್ಕಾಗಿ ಬರ್ತಾ ಇಲ್ಲ ಬದಲಾಗಿ ಆರ್ಸಿಬಿ ಜೊತೆಗೆ ಮತ್ತೆ ತಂಡವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಮೈದಾನದ ಹೊರಗೆ ಕೂಡ ಮುಂದುವರಿಸಬೇಕು ಎನ್ನುವಂತಹ ಇಚ್ಛೆಯಲ್ಲಿ ಮತ್ತೆ ತಂಡದ ಭಾಗವಾಗಿ ಇರೋದಕ್ಕೆ ಇಷ್ಟ ಪಡ್ತೇನೆ ಎಂಬುದಾಗಿ ಈ ವಿಚಾರದ ಬಗ್ಗೆ ದಿನೇಶ್ ಕಾರ್ತಿಕ್ ರವರು ಹೇಳಿದ್ದಾರಂತೆ.
ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೀಮ್ ಮ್ಯಾನೇಜ್ಮೆಂಟ್ ಮಾತ್ರ ದಿನೇಶ್ ಕಾರ್ತಿಕ್ ಅವರಿಗೆ ಪ್ರತಿ ವರ್ಷ 5 ಕೋಟಿ ರೂಪಾಯಿ ಸಂಭಾವನೆಯನ್ನು ಈ ಕೆಲಸಕ್ಕಾಗಿ ನೀಡುವುದನ್ನು ಮುಂದುವರಿಸುವಂತಹ ಬಗ್ಗೆ ಕೂಡ ದಿನೇಶ್ ಕಾರ್ತಿಕ್ ರವರಿಗೆ ಹೇಳಿದೆ ಎಂಬುದಾಗಿ ಕೂಡ ಮಾಹಿತಿ ತಿಳಿದು ಬಂದಿದೆ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಸಲಹೆಗಾರ ಅಥವಾ ಬ್ಯಾಟಿಂಗ್ ಕೋಚ್ ರೂಪದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಲವನ್ನ ಇನ್ನಷ್ಟು ಹೆಚ್ಚಿಸುವಂತಹ ಕೆಲಸವನ್ನು ದಿನೇಶ್ ಕಾರ್ತಿಕ್ ರವರು ಈ ಮೂಲಕ ಮಾಡಲಿದ್ದಾರೆ ಎಂಬುದಾಗಿ ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.