Actress Pallavi Gowda: ಕನ್ನಡ ಕಿರುತೆರೆ ಲೋಕಕ್ಕೆ (Kannada Serial) ಸಾಕಷ್ಟು ನಟಿ ಮಣಿ (Avtress) ಯರು ಬಂದು ಹೋಗಿದ್ಡಾರೆ. ಇನ್ನು ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ ಮತ್ತೆ ತಮಿಳು, (Tamil) ತೆಲುಗು (Telugu) ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಕ್ಕು, ಇತರ ಭಾಷೆಗಳಲ್ಲಿಯೂ ನಟಿಸುತ್ತಿರುವ ನಟಿಯರು ಸಾಕಷ್ಟು ಜನ ಇದ್ದಾರೆ. ಅಂತಹ ನಟಿಯರಲ್ಲಿ ಕನ್ನಡದ ಪಲ್ಲವಿ ಕೂಡ ಒಬ್ಬರು.
ಹೌದು, ಕನ್ನಡತಿ ಪಲ್ಲವಿ ಗೌಡ (Pallavi Gowda) ಕನ್ನಡಕ್ಕಿಂತ ಇತರ ಭಾಷಾ ಧಾರಾವಾಹಿಗಳಲ್ಲಿಯೇ ಹೆಚ್ಚಾಗಿ ನಟಿಸಿದ್ದಾರೆ ಎಂದರೆ ತಪ್ಫಾಗಲ್ಲ. ಅವರು ತೆಲುಗಿನ ಪಸುಪು ಕುಂಕುಮ ಧಾರಾವಾಹಿಯಲ್ಲಿ ಅಂಜಲಿ ಎನ್ನುವ ಬಹು ಮುಖ್ಯ ಪಾತ್ರವನ್ನು ನಿಭಾಯಿಸುತ್ತಿದ್ದರು. ಇದರಿಂದ ಸಾಕಷ್ಟು ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದ್ದರು. ನಂತರ ಸಾವಿತ್ರಿ ಧಾರಾವಾಹಿಯಲ್ಲಿಯೂ ಕೂಡ ನಟಿಸಿದ್ದಾರೆ.
ಸದ್ಯ ಫಿದಾ ಎನ್ನುವ ಡಬ್ಬಿಂಗ್ ಧಾರಾವಾಹಿಯ ಮೂಲಕ ತೆಲಗು ಪ್ರೇಕ್ಷಕರನ್ನು ರಂಜಿಸುತ್ತಿರುವ ಪಲ್ಲವಿ ಗೌಡ ಇದ್ದಕ್ಕಿದ್ದ ಹಾಗೆ ಸಾವಿತ್ರಿ ಧಾರಾವಾಹಿ ತೊರೆದಿದ್ದಾರೆ. ಇದಕ್ಕೆ ಕಾರಣವೂ ತಿಳಿದಿಲ್ಲ. ಇನ್ನು ಮತ್ತೆ ತೆಲುಗು ಧಾರಾವಾಹಿಗೆ ಮರಳುವುದಾಗಿ ಹೇಳಿರುವ ಪಲ್ಲವಿ ಗೌಡ, ತಮಗೆ ಇಷ್ಟವಾದ ಫೀಲ್ಡ್ ಆನಿಮೇಷನ್ ಆಗಿತ್ತು. ಆದರೆ ಕಾರಣಾಂತರಗಳಿಂದ ಧಾರಾವಾಹಿಗೆ ನಟನೆಗೆ ಬಂದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:Viral Video: ರಸ್ತೆಯ ಬದಿಯಲ್ಲಿ ಆಟವಾಡಿಕೊಂಡಿದ್ದ ಪುಟ್ಟ ಬಾಲಕಿಯ ಮೇಲೆ ರಾಕ್ಷಸನಂತೆ ಎರಗಿ ಬಂದ ಶ್ವಾನ; ಆ ಕ್ಷಣಕ್ಕೆ ಅಲ್ಲಿ ನಡೆದಿದ್ದೇನು ಗೊತ್ತೇ! ವೈರಲ್ ಆಯ್ತು ವಿಡಿಯೋ!
ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೆಲುಗು ನಿರ್ಮಾಪಕರ ಮಂಡಳಿಯಲ್ಲಿ ತನ್ನ ಮೇಲೆ ಹೇರಿರುವ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಾವಿತ್ರಿ ಧಾರಾವಾಹಿ ಮಾಡುವಾಗ ಬೇರೆ ಯಾವುದೇ ತೆಲುಗು ಧಾರಾವಾಹಿಯಲ್ಲಿ ನಟಿಸುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ.
ಪಲ್ಲವಿ ಗೌಡ ಹೇಳಿದ್ದೇನು?
“ಸಾವಿತ್ರಿ ಧಾರಾವಾಹಿಯಲ್ಲಿ ಹಣ ಸರಿಯಾಗಿ ಕೊಟ್ಟಿಲ್ಲ. ಎರಡು ತಿಂಗಳ ಕಾಲ ಹೀಗೆಯೇ ಮುಂದುವರೆಯಿತು. ಈ ಹಿನ್ನೆಲೆಯಲ್ಲಿ ಬೇರೆ ಧಾರಾವಾಹಿಯಲ್ಲಿ ಅವಕಾಶ ಬಂದರೆ ಮಾಡುತ್ತೇನೆ ಎಂದು ಹೇಳಿದ್ದೆ ಅದಕ್ಕೆ ಒಪ್ಪಲಿಲ್ಲ. ಹಣದ ಸಮಸ್ಯೆಯಿಂದ ಮತ್ತೊಂದು ಧಾರಾವಾಹಿ ಮಾಡುವುದಾಗಿ ಹೇಳಿದ್ದರಿಂದ ನಿರ್ಮಾಪಕ ಮಂಡಳಿಯಿಂದ ನಿಷೇಧ ಹೇರಲಾಗಿದೆ” ಎಂದಿದ್ದಾರೆ ಪಲ್ಲವಿ ಗೌಡ.
ಪತಿಯಿಂದ ದೂರಾದ ಪಲ್ಲವಿ!
ಪಲ್ಲವಿ ಗೌಡ ಅವರ ವೈಯಕ್ತಿಕ ಜೀವನವೂ ಸದ್ಯ ಸುಗಮವಾಗಿ ಸಾಗುತ್ತಿಲ್ಲ. ಯಾಕಂದ್ರೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಪತಿಯಿಂದ ದೂರಾಗಿದ್ಡಾರೆ. ಕೆಲ ದಿನಗಳ ಹಿಂದೆ ವಿಚ್ಛೇದನ ಪಡೆದಿರುವುದಾಗಿಯೂ ಪಲ್ಲವಿ ಹೇಳಿದ್ದಾರೆ. ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮರೆಯಲು ಪ್ರಯತ್ನಿಸುತ್ತಿರುವುದಾಗಿ ಹಾಗೂ ಅದಕ್ಕಾಗಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವುದಾಗಿಯೂ ಪಲ್ಲವಿ ತಿಳಿಸಿದ್ದಾರೆ. ಇನ್ನು ತನ್ನ ವಯಕ್ತಿಕ ಜೀವನದ ಕಹಿ ಘಟನೆಯನ್ನು ಮರೆಯಲು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವುದಾಗಿಯೂ ಹೇಳಿಕೊಂಡಿದ್ದಾರೆ. ಹಾಗಾಗಿ ಪಲ್ಲವಿಗೆ ಕನ್ನಡದಲ್ಲಿ ಅವಕಾಶಗಳು ಇನ್ನಷ್ಟು ಬಂದರೆ ತೆಲಗುವಿನಲ್ಲಿ ಬಹುಶಃ ಕಷ್ಟಪಡಬೇಕಾಗಿಲ್ಲ ಎನ್ನಿಸುತ್ತೆ!