Kannada Serial: ಚಿತ್ರರಂಗ ಅಥವಾ ಕಿರುತೆರೆಯಲ್ಲಿ ಪೈಪೋಟಿ ತುಂಬಾ ಹೆಚ್ಚಾಗಿದೆ. ಇಲ್ಲಿ ಉಳಿದುಕೊಳ್ಳುವುದು ತುಂಬಾ ಕಷ್ಟದ ವಿಚಾರ. ಹೆಸರು ಮಾಡುವುದು ಅಮೇಲಿನ ವಿಚಾರವಾಗುತ್ತದೆ. ಹೀಗೆ ಕಿರುತೆರೆಯಲ್ಲಿ ಉಳಿದುಕೊಂಡು, ಸದಬಿರುಚಿಯ ಧಾರಾವಾಹಿ (Serial) ಯ ಮೂಲಕ ವರ್ಷಕ್ಕೂ ಹೆಚ್ಚು ಕಾಲ ಜನರನ್ನು ರಂಜಿಸಿ ಮನೆ ಮಾತದಾವರು ವೈಷ್ಣವಿ ಗೌಡ (Vaishnavi Gowda). ವೈಷ್ಣವಿ ಗೌಡ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಟಾಪ್ ರೇಟೆಡ್ ಧಾರವಾಹಿ ಅಗ್ನಿ ಸಾಕ್ಷಿಯ ಹಿರೋಹಿನ್. ಇದರದಲ್ಲಿ ವೈಷ್ಣವಿ ಗೌಡ ಅವರು ತುಂಬಾ ನೈಜವಾಗಿ ಅಭಿನಯಿಸುವ ಮೂಲಕ ಕನ್ನಡ ನಾಡಿನ ಮನೆ ಮಗಳಾಗಿದ್ದಾರೆ. ಈ ಧಾರಾವಾಹಿಯ ನಂತರ ಅವರು ಬಿಗ್ ಬಾಸ್ (Bigg boss) ಸೀಸನ್ 8 ರ ಸ್ಪರ್ಧಿಯೂ ಆಗಿದ್ದರು. ಮನೆಯಲ್ಲಿ ಆನೆ ಇರುವೆ ಜೋಕ್ ಮಾಡುತ್ತ ಎಲ್ಲರನ್ನು ರಂಜಿಸುತ್ತಿದ್ದರು. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ವೈಷ್ಣವಿ ಗೌಡ ಅವರು ಹಸೆಮನೆ ಏರಲು ತಯಾರಿ ನಡೆಸಿದ್ದಾರೆ. ಅವರ ನಿಶ್ಚಿತಾರ್ಥ ಆಗಿದೆ. ನಿಶ್ಚಿತಾರ್ಥದ ಒಂದು ಫೋಟೊ ಎಲ್ಲೆಡೆ ವೈರಲ್ ಆಗಿದೆ.
ಹೌದು, ವೈಷ್ಣವಿ ಗೌಡ ಅವರು ವಿದ್ಯಾಭರಣ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ಆಗಮಿಸಿದ್ದರು. ಮನೆಯವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಹಲವು ಬಾರಿ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಬಿಗ್ ಬಾಸ್ ಮುಗಿದ ಮೇಲೂ ಸಿನೆಮಾ ಆಫರ್ಗಳು ಬಂದರೂ ಅವರು ಒಪ್ಪಿಕೊಂಡಿರಲಿಲ್ಲ. ಮೊನ್ನೆ ಮೊನ್ನೆ ಪ್ರಸಾರವಾದ ಲಕ್ಷಣ ಧಾರಾವಾಹಿಯಲ್ಲಿ ಒಂದು ಅತಿಥಿ ಪಾತ್ರ ನಿರ್ವಹಿಸಿದ್ದರು ಅಷ್ಟೆ.
ಇನ್ನು ವೈಷ್ಣವಿ ಗೌಡ ಅವರು ಮದುವೆ ಆಗುವ ವಿದ್ಯಾಭರಣ ಅವರು ಸಹ ಬೆಂಗಳೂರಿನವರೆ. ಬೆಂಗಳೂರಿನ ಬಿ.ಎಂ.ಎಸ್. ಕಾಲೇಜಿನಲ್ಲಿ ಇಂಜನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. 2018 ರಲ್ಲಿ ತೆರೆಕಂಡ ವಿರಾಜ್ ಚಿತ್ರದಲ್ಲಿ ಇವರು ಅಭಿನಯಿಸಿದ್ದರು. ಇದೀಗ ವಿದ್ಯಾಭರಣ ಅವರು ವೈಷ್ಣವಿ ಗೌಡ ಅವರನ್ನು ವರಿಸಲು ಸಿದ್ದರಾಗಿದ್ದಾರೆ. ಮದುವೆ ಯಾವಾಗ ಎನ್ನುವ ವಿಚಾರ ಇನ್ನಷ್ಟೆ ತಿಳಿಯಬೇಕಿದೆ.
ವೈಷ್ಣವಿ ಗೌಡ ಅವರು ಸಿನೆಮಾ, ಧಾರಾವಾಹಿಗಳಲ್ಲಿ ಮತ್ತೆ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಡಿದೆ. ಅವರಿಗೆ ಅವಕಾಶಗಳು ಹುಡುಕಿ ಬರುತ್ತಿದೆ. ವೈಷ್ಣವಿ ಗೌಡ ಅವರು ಮತ್ತೆ ಕಮ್ಬ್ಯಾಕ್ ಮಾಡುತ್ತಾರಾ? ಇಲ್ಲವಾ ಎನ್ನುವುದನ್ನು ಕಾದು ನೋಡಬೇಕಿದೆ.