Real Story: ನಮಸ್ಕಾರ ಸ್ನೇಹಿತರೇ ಆಂಧ್ರದ ನಂದ್ಯಾಲ ಜಿಲ್ಲೆಯ ಆಲಮೂರು ಗ್ರಾಮದ ದೇವೇಂದ್ರ ರೆಡ್ಡಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಮೊದಲ ಮಗಳು ಪ್ರಸನ್ನಳನ್ನು ಸಾಫ್ಟ್ ವೇರ್ ಇಂಜಿನಿಯರ್ ಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದರು. ಇಬ್ಬರೂ ಹೈದರಾಬಾದ್ನಲ್ಲಿ ನೆಲೆಸಿದ್ದಾರೆ. ಆದರೆ ಮದುವೆಗೂ ಮುನ್ನ ಪ್ರಸನ್ನ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗಷ್ಟೇ ಹೈದರಾಬಾದಿನಿಂದ ಹಳ್ಳಿಗೆ ಬಂದಿದ್ದ ಆಕೆ ಹುಡುಗನ ಬಲೆಗೆ ಮತ್ತೆ ಬಿದ್ದಿದ್ದಳು, ಆತನನ್ನು ಈಗಲೂ ಪ್ರೀತಿಸುತ್ತಿದ್ದು, ಮತ್ತೆ ಪತಿ ಬಳಿ ಹೋಗುತ್ತಿಲ್ಲ ಎಂಬುದು ತಿಳಿದು ಬಂದಿದೆ.
ಇದರಿಂದ ಮಾನ ಮರ್ಯಾದೆ ಹೋಗಿದೆ ಎಂದು ಭಾವಿಸಿ ತಂದೆ ದೇವೇಂದರ್ ರೆಡ್ಡಿ ಮಗಳ ಮೇಲೆ ಕೋಪಗೊಂಡರು. ಮಗಳಿಗೆ ಅದೆಷ್ಟೋ ಬಾರಿ ಬುದ್ದಿ ಹೇಳಿದನು, ಗಂಡನ ಮನೆಗೆ ಹೋಗುವಂತೆ ಕಾಲಿಗೆ ಬಿದ್ದು ಬೇಡಿಕೊಂಡನು, ಆದರೆ ಮಗಳು ಯಾವುದೇ ಕಾರಣಕ್ಕೂ ಮನೆಗೆ ಹೋಗಲು ಒಪ್ಪಲೇ ಇಲ್ಲ. ಕೊನೆಗೆ ಎಷ್ಟೇ ಹೇಳಿದರೂ ಕೇಳಿದಿದ್ದಾಗ ಇದೇ ತಿಂಗಳ 10 ರಂದು ಮಗಳ ಪ್ರಾಣ ಪಕ್ಷಿಯನ್ನು ಹಾರಿ ಹೋಗುವಂತೆ ಮಾಡಿದ್ದಾನೆ. ಬಳಿಕ ಕೆಲವರ ಜತೆಗೂಡಿ ಕಾರಿನಲ್ಲಿ ದೇಹವನ್ನು ನಂದ್ಯಾ-ಗಿದ್ದಲೂರು ರಸ್ತೆಯ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿಯೇ ಎಸೆದು ಏನು ತಿಳಿಯಂತೆ ಬಂದು ಮನೆ ಸೇರಿಕೊಂಡಿದ್ದಾನೆ.
ಇದಾದ ಬಳಿಕ ಮೊಮ್ಮಗಳು ಇತ್ತೀಚೆಗೆ ಕರೆ ಮಾಡದ ಕಾರಣ ಅಜ್ಜ ಶಿವಾರೆಡ್ಡಿಗೆ ಅನುಮಾನ ಬಂದು ಪ್ರಸನ್ನ ಎಲ್ಲಿಗೆ ಹೋಗಿದ್ದಾಳೆ ಎಂದು ವಿಚಾರಿಸಿದ್ದಾರೆ. ಮಾನಹಾನಿ ಮಾಡಿದ ಕಾರಣಕ್ಕೆ ದೇವೇಂದ್ರ ರೆಡ್ಡಿ ಮಗಳನ್ನು ಮುಗಿಸಿದ್ದಾರೆ ಎಂದು ಅನುಮಾನ ಬಂದಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ದೇವೇಂದ್ರ ರೆಡ್ಡಿಯನ್ನು ಬಂಧಿಸಿ ಪ್ರಶ್ನೆ ಮಾಡಿದಾಗ ಪ್ರಸನ್ನ ದೇಹವನ್ನು ಎಸೆದ ಸ್ಥಳಕ್ಕೆ ಕರೆದೊಯ್ದರು. ಇಡೀ ದಿನ ಹುಡುಕಾಡಿದರೂ ಸಿಗಲಿಲ್ಲ. ಶುಕ್ರವಾರ ಮತ್ತೆ ಹುಡುಕಿದಾಗ ಕೆಲವೊಂದ್ ಭಾಗಗಳು ಸಿಕ್ಕಿವೆ. ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.