Bhagyalakshmi:ಭಾಗ್ಯಲಕ್ಷ್ಮಿ ಧಾರವಾಹಿಯ ಹೊಸ ಟ್ವಿಸ್ಟ್! ತಾಂಡವ್ ಮದ್ವೇ ತಪ್ಸೋದ್ ಯಾರು ಕುಸುಮಾನ? ಪೂಜಾನ?

Bhagyalakshmi: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ದಿನಕ್ಕೊಂದರಂತೆ ಟ್ವಿಸ್ಟ್ ಹಾಗೂ ಟರ್ನ್ ಗಳು ಪ್ರೇಕ್ಷಕರನ್ನ ಕುಳಿತುಕೊಂಡಿರುವಂತಹ ಸೀಟಿನ ತುದಿ ಭಾಗಕ್ಕೆ ಬಂದು ಕುಳಿತುಕೊಳ್ಳುವ ಹಾಗೆ ಮಾಡುತ್ತಿದೆ. ಶ್ರೇಷ್ಠ ತಾಂಡವ್ ಮದುವೆ ಬಗ್ಗೆ ಭಾಗ್ಯಗೆ ಗೊತ್ತಾಗಬಾರದು ಅಂತ ಅತ್ತೆ ಆಗಿರುವಂತಹ ಕುಸುಮ ಈಗ ಆಟೋದಲ್ಲಿ ಮದುವೆಯನ್ನು ನಿಲ್ಲಿಸುವುದಕ್ಕೆ ಹೋಗ್ತಿದ್ದಾಳೆ. ಅದೇ ಸಂದರ್ಭದಲ್ಲಿ ಹೋಗ್ತೀರೋ ಆಟೋ ಡಿಕ್ಕಿಯಾಗಿ ಅಲ್ಲಿ ಕೂಡ ಜಗಳ ಪ್ರಾರಂಭವಾಗುತ್ತೆ. ಆ ಸಂದರ್ಭದಲ್ಲಿ ಕುಸುಮ ನನ್ನ ಸೊಸೆಯ ಜೀವನ ಹಾಳಾಗುತ್ತೆ ಹೋಗುವುದಕ್ಕೆ ಬಿಡಿ ಅಂತ ಎದುರುಗಡೆ ಇರುವಂತಹ ವ್ಯಕ್ತಿಯ ಬಳಿ ಕೇಳಿಕೊಂಡರೂ ಕೂಡ ಆತ ದುಡ್ಡು ಕೊಟ್ಟು ಹೋಗೋದಿಕ್ಕೆ ಹೇಳ್ತಾನೆ ಆಗ ಕುಸುಮ ತನ್ನ ಬಂಗಾರದ ಬಳೆಯನ್ನು ಆತನಿಗೆ ಕೊಟ್ಟು ಮದುವೆ ಮಂಟಪಕ್ಕೆ ಹೊರಡ್ತಾಳೆ.

ಆ ಕಡೆ ಭಾಗ್ಯ ತಂಗಿ ಪೂಜಾ ಕೂಡ ಇದೇ ಕೆಲಸಕ್ಕಾಗಿ ಹೋರಾಟ ಕೊಡ್ತಿರ್ತಾಳೆ ಆದರೆ ಆಗ ಮಹೇಶ್ ಆಕೆಯನ್ನು ಕಿಡ್ನಾಪ್ ಮಾಡ್ತಾನೆ. ಆಗ ಸುಂದ್ರಿ ಪ್ಲಾನ್ ಮಾಡಿ ಪೂಜಾಳನ್ನು ಕಾಪಾಡ್ತಾಳೆ. ಅವಳು ಕೂಡ ಈ ಮದುವೆಯನ್ನು ನಿಲ್ಲಿಸುವುದಕ್ಕೆ ಹೊರಟಿದ್ದಾಳೆ ಆದರೆ ಇಬ್ಬರನ್ನು ಕೂಡ ಶ್ರೇಷ್ಠ ಮಂಟಪದ ಒಳಕ್ಕೆ ಬರೋದಕ್ಕೆ ಬಿಡ್ತಾಳ ಅನ್ನೋದೇ ಈಗ ಕುತೂಹಲದ ವಿಚಾರವಾಗಿದೆ. ಆದರೆ ಇದಕ್ಕಿಂತಲೂ ಕುತೂಹಲಕರವಾಗಿರುವುದು ಪ್ರೇಕ್ಷಕರ ನಿರೀಕ್ಷೆ.

ದೊಡ್ಡ ಹೋಟೆಲ್ ನಲ್ಲಿ ಕೆಲಸ ಗಿಟ್ಟಿಸಿಕೊಂಡು ಒಳ್ಳೆಯ ರೀತಿಯಲ್ಲಿ ಸಂಪಾದನೆ ಮಾಡುತ್ತಿರುವಂತಹ ಭಾಗ್ಯ ಅವಳೇ ಈ ಮದುವೆಯನ್ನು ನಿಲ್ಲಿಸಬಹುದೆಂಬುದಾಗಿ ಎಲ್ಲರೂ ಕೂಡ ಕಾಯುತ್ತಿದ್ದಾರೆ. ಭಾಗ್ಯಳನ್ನು ಮದುವೆಯಾಗಿ ಎರಡು ಮಕ್ಕಳಿದ್ದರೂ ಕೂಡ ಶ್ರೇಷ್ಠ ಮದುವೆ ಆಗೋದಕ್ಕೆ ತಾಂಡವ್ ಈಗ ಸಿದ್ಧವಾಗಿರೋದು ಪ್ರೇಕ್ಷಕರಿಗೆ ಬೇಸರವಾಗಿರುವಂತಹ ವಿಚಾರ ಇದೇ ಕಾರಣಕ್ಕಾಗಿ ಧಾರವಾಹಿ ನೋಡುವಂತಹ ಪ್ರೇಕ್ಷಕರು ತಾಂಡವ್ ಹಾಗೂ ಶ್ರೇಷ್ಠ ಜೋಡಿಯನ್ನು ಅಣಕಿಸುತ್ತಿರುತ್ತಾರೆ. ಈಗ ನಡಿತಿರುವಂತಹ ಶ್ರೇಷ್ಠ ಹಾಗೂ ತಾಂಡವ್ ಇಬ್ಬರ ಮದುವೆನಾ ಕುಸುಮ ತಡೀತಾಳ ಅಥವಾ ಪೂಜಾ ತಡೀತಾಳ ಎನ್ನುವಂತಹ ಪ್ರೇಕ್ಷಕರ ಅಭಿಪ್ರಾಯದ ಗುದ್ದಾಟದ ನಡುವೆ ಭಾಗ್ಯ ಕೂಡ ಈ ಮದುವೆಯನ್ನು ತಡೆಯುವಂತಹ ಪ್ರಯತ್ನವನ್ನು ಮಾಡಬಹುದು ಎನ್ನುವಂತಹ ಮಾತನ್ನು ಕೂಡ ಕೆಲವು ವರ್ಗದ ಪ್ರೇಕ್ಷಕರು ಈಗ ಪ್ರೋಮೋದ ಕಾಮೆಂಟ್ನಲ್ಲಿ ಹೇಳೋದಕ್ಕೆ ಪ್ರಾರಂಭ ಮಾಡಿದ್ದಾರೆ. ಇದಕ್ಕೆ ಮುಂದಿನ ಸಂಚಿಕೆಯೇ ಉತ್ತರ ನೀಡಬೇಕಾಗಿದೆ.