Roopesh Shetty:ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಊರಿಗೆ ಹೋಗಿ ನೇರವಾಗಿ ಪೋಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು ಯಾಕೆ ಗೊತ್ತಾ?

Roopesh Shetty: ಕಲರ್ಸ್ ಕನ್ನಡ ವಾಹಿನಿಯ ಟಾಪ್ ರೇಟೆಡ್ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇದು ಈಗ ೯ ಸೀಸನ್ ಮುಗಿಸಿದೆ. ಈ ಬಾರಿ ಮಂಗಳೂರಿನ ಹುಡುಗ, ನಟ, ರೂಪೇಶ್ ಶೆಟ್ಟಿ ಬಿಗ್ ಬಾಸ್ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ. ಇದಾದ ಬಳಿಕ ಅವರು ಸಾಕಷ್ಟು ಬ್ಯುಸಿ ಆಗಿದ್ದಾರೆ. ತಾನೊಬ್ಬ ಒಳ್ಳೆಯ ನಟ ಆಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಶ್ರಮ ಪಡುತ್ತಿದ್ದಾರೆ. ಎಲ್ಲ ವಾಹಿನಿಗಳು, ವೆಬ್ ಸೈಟ್ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ್ದಾರೆ.
ರೂಪೇಶ್ ಶೆಟ್ಟಿ ಅವರು ಮಂಗಳೂರಿಗೆ ಭೇಟಿ ನೀಡಿದ ವೇಳೆ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಹ್ವಾನಿಸಲಾಗಿತ್ತು. ಈ ವೇಳೆ ಅವರಿಗೆ ಮೈಸೂರು ಪೇಟ, ಹಾರ ಹಾಕಿ ಸನ್ಮಾನಿಸಲಾಯಿತು. ಇದನ್ನೂ ಓದಿ:Gayathri Raghuram Quits BJP: ಅಣ್ಣಾಮಲೈ ವಿರುದ್ಧ ಬಿಜೆಪಿ ಯಲ್ಲಿ ಮಹಿಳೆಯರು ಸುರಕ್ಷಿತವಲ್ಲ ಎಂದು ಆರೋಪ ಮಾಡಿದಕ್ಕೆ ನಿಜವಾದ ಕಾರಣ ಏನಂತೆ ಗೊತ್ತೇ??

ಈ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಸಣ್ಣ ಕಲಾವಿದನಾಗಿ ತನ್ನ ವೃತ್ತಿ ಜೀವನ ಆರಂಭಿಸಿದ ರೂಪೇಶ ಶೆಟ್ಟಿ ಅವರು ಇಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ತುಳು ಸಿನೆಮಾ ರಂಗದಿಂದ ಬಂದ ರೂಪೇಶ್ಗೆ ಇಂದು ಬಿಗ್ ಬಾಸ್ನಲ್ಲಿ ಅವಕಾಶ ಸಿಕ್ಕಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಅದರಲ್ಲಿ ಗೆಲುವು ಕಂಡಿದ್ದಾರೆ. ತುಳು, ಕೊಂಕಣಿ, ಕನ್ನಡ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಜನಿಸಿದರೂ ಅವರು ಬಾಲ್ಯವನ್ನು ಕಳೆದಿದ್ದು ಮಂಗಳೂರಿನಲ್ಲಿ. ದಿಬ್ಬಣ, ಐಸ್ಕ್ರೀಂ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೂ ಇವರಿಗೆ ಬ್ರೇಕ್ ನೀಡಿದ್ದು ಗಿರಗಿಟ್ ಸಿನೆಮಾ. ಬಿಗ್ ಬಾಸ್ನಲ್ಲಿ ವಿನ್ನರ್ ಮಾತ್ರವಲ್ಲದೆ ವೃತ್ತಿ ಜೀವನದಲ್ಲೂ ಅವಕಾಶಗಳು ಸಿಗುತ್ತಿವೆ. ನಾನು ಬಿಗ್ ಬಾಸ್ ಕಾರ್ಯಕ್ರಮದ ಕೆಲವೊಂದು ಎಪಿಸೋಡ್ಗಳನ್ನು ನೋಡಿದ್ದೇನೆ. ರೂಪೇಶ್ ಶೆಟ್ಟಿ ಅವರು ಬಹಳ ಚೆನ್ನಾಗಿ ಆಟವಾಡಿದ್ದಾರೆ. ಅಂತಿಮವಾಗಿ ರೂಪೇಶ್ ಅವರಿಗೆ ಒಂದು ಕೋಟಿಗೂ ಅಧಿಕ ಜನರು ಮತ ನೀಡುವ ಮೂಲಕ ಗೆಲ್ಲಿಸಿದ್ದಾರೆ ಎಂದರು. ಇದನ್ನೂ ಓದಿ: UPI Payment Refund:ನೀವು ಯಾರಿಗಾದರೂ ತಪ್ಪಾಗಿ ಹಣ ಕಳುಹಿಸಿದರೆ, ವಾಪಸ್ಸು ಪಡೆಯುವುದು ಹೇಗೆ ಗೊತ್ತೇ?? ಸುಲಭವಾಗಿ ವಾಪಾಸ್ ಪಡೆಯಿರಿ.

ರೂಪೇಶ್ ಶೆಟ್ಟಿಯವರು ಪೊಲೀಸ್ ಅಧಿಕಾರಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅವರು ಮಂಗಳೂರಿಗೆ ಬಂದಿರುವ ವಿಚಾರ ತಿಳಿದು ನಮ್ಮ ಕಚೇರಿಗೂ ಕರೆಯಿಸಲಾಯಿತು. ಸಿನೆಮಾ ರಂಗದಲ್ಲಿ ರಿಶಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಶೆಟ್ಟಿ ಹೀಗೆ ತ್ರಿಬಲ್ ಆರ್ ಮಿಂಚಿದೆ. ರೂಪೇಶ್ ಅವರೂ ಕೂಡ ಹಾಗೆಯೇ ಮಿಂಚಲಿ. ಅವರಿಗೆ ಪೊಲೀಸ್ ಭದ್ರತೆ ನೀಡುವಷ್ಟರ ಮಟ್ಟಿಗೆ ಬೆಳೆಯಲಿ ಎಂದು ಹಾರೈಸಿದರು.

ನಂತರ ಮಾತನಾಡಿದ ರೂಪೇಶ್ ಶೆಟ್ಟಿ, ನಾನು ಸಾಕಷ್ಟು ಬ್ಯೂಸಿ ಇದ್ದರೂ ಇಲ್ಲಿಗೆ ಬರಲು ಮೂರು ಕಾರಣಗಳಿವೆ. ಅದು ಏನು ಎಂದರೆ ಮೊದಲನೆಯದಾಗಿ ಕಮಿಷನರ್ ಶಶಿಕುಮಾರ್ ಅವರು ಕಲಾವಿದರಿಗೆ ನೀಡುವ ಗೌರವ, ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎರಡನೆಯದಾಗಿ ಪೊಲೀಸ್ ಇಲಾಖೆಯ ಮೇಲೆ ಇರುವ ಗೌರವ. ಮೂರನೆಯದಾಗಿ ನಾನು ಸಣ್ಣ ಕಲಾವಿದನಾಗಿದ್ದಾಗಲೂ ಇಲ್ಲಿನ ಪೊಲೀಸರು ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಈ ಕಾರಣಗಳಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

bigg boss kannada season 9Roopesh Settyಕನ್ನಡ ಬಿಗ್ ಬಾಸ್ ಸೀಸನ್ 9ರೂಪೇಶ್ ಶೆಟ್ಟಿ