Chandana Ananthakrishna: ಕಿರುತೆರೆಯಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವಂತಹ ಲಕ್ಷ್ಮಿ ನಿವಾಸ್ ಧಾರವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ಚಂದನ ಅನಂತ ಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಏನು ಈ ಧಾರವಾಹಿಯಲ್ಲಿ ಈಗ ಪ್ರೇಕ್ಷಕರಿಗೆ ಬೇಸರವಾಗ್ತಿರೋದು ಏನಂದ್ರೆ ಜಾಹ್ನವಿಯ ಗಂಡ ಆಗಿರುವಂತಹ ಜಯಂತ್ ತನ್ನ ಹೆಂಡತಿಗೆ ಪ್ರೀತಿಯ ಪಂಜರದಲ್ಲಿ ಚಿತ್ರ ವಿಚಿತ್ರವಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾನೆ ಎನ್ನುವುದಾಗಿ. ಜಯಂತ್ ನ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಅಸಮಾಧಾನ ಎಂದು ಕಾಣುತ್ತಿದೆ ಎದ್ದು ಹೇಳಬಹುದಾಗಿದೆ.
ಸದ್ಯಕ್ಕೆ ಧಾರವಾಹಿಯ ಪ್ರಮುಖ ಸ್ಕ್ರೀನ್ ಟೈಮ ಅನ್ನೋದು ಜಾಹ್ನವಿಯ ಪಾತ್ರದ ಮೇಲೆ ಸಾಗುತ್ತದೆ ಅನ್ನೋದನ್ನ ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ. ಈ ಪಾತ್ರಕ್ಕೆ ಧಾರವಾಹಿಯಲ್ಲಿ ಅಷ್ಟೊಂದು ಪ್ರಾಮುಖ್ಯತೆ ಇದೆ ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ಆದರೆ ಇತ್ತೀಚಿಗೆ ಎಲ್ಲಾ ಕಡೆಗಳಲ್ಲಿ ಜಾಹ್ನವಿಯ ಪಾತ್ರಕ್ಕೆ ನಟಿಯಾಗಿರುವಂತಹ ಚಂದನ ಗುಡ್ ಬೈ ಹೇಳುತ್ತಿದ್ದಾರೆ ಅನ್ನೋ ಸುದ್ದಿಗಳು ಜೋರಾಗಿ ಕೇಳಿ ಬರುತ್ತಿದೆ. ಇದು ಅವರ ಪಾತ್ರವನ್ನು ಇಷ್ಟಪಟ್ಟಿರುವಂತ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನು ಮೂಡಿಸುವ ಹಾಗೆ ಮಾಡಿದೆ ಎಂದು ಹೇಳಬಹುದು. ನಟಿ ಚಂದನ ಕೊನೆಗೂ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಚಂದನ ಅವರು ಹೇಳಿರುವ ಪ್ರಕಾರ ನನ್ನ ಅಭಿಮಾನಿಗಳಿಗೆ ಹಾಗೆ ಖಂಡಿತವಾಗಿ ಈ ಶೋ ಅನ್ನು ಸದ್ಯಕ್ಕಂತೂ ಬಿಡೋದಿಲ್ಲ ಎನ್ನುವುದಾಗಿ ಹೇಳಿದ್ದಾರೆ. ನಿಮ್ಮ ಪ್ರೀತಿ ನನ್ನ ಜೊತೆಗೆ ಸದಾ ಇರಲಿ ನಾನು ಜಾಹ್ನವಿಯಾಗಿ ಮುಂದುವರೆಯುತ್ತಿದ್ದೇನೆ ಎಂಬುದಾಗಿ ಚಂದನ ಇಲ್ಲಿ ಹೇಳಿಕೊಂಡಿದ್ದಾರೆ. ಚಂದನ ಅವರು ಸಿನಿಮಾದಲ್ಲಿ ಕೂಡ ನಟಿಸ್ತಾ ಇದ್ದಾರೆ ಅನ್ನೋದು ಈಗಾಗಲೇ ಖಚಿತವಾಗಿದ್ದು ಇದರ ನಡುವೆ ಅವರು ಈ ಧಾರವಾಹಿಯನ್ನು ಬಿಡ್ತಾ ಇದ್ದಾರೆ ಅನ್ನೋ ಮಾಹಿತಿಗಳು ಕೂಡ ಹೊರಗೆ ಕೇಳಿ ಬಂದಿದ್ದವು. ಈಗ ಕೊನೆಗೂ ಅವರೇ ಅಧಿಕೃತವಾಗಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಅಭಿಮಾನಿಗಳಲ್ಲಿ ನಿಟ್ಟಿಸಿರು ಬಿಡುವಂತೆ ಮಾಡಿದೆ.
ಚಂದನ ಅವರು ಭಾವ ತೀರ ಯಾನ ಸಿನಿಮಾದಲ್ಲಿ ನಟಿಸೋದು ಖಚಿತವಾಗಿದ್ದು ಈ ಸಿನಿಮಾದ ಮೂಲಕ ಸಿನಿಮಾಗಳಲ್ಲಿ ಕೂಡ ತಮ್ಮ ಪ್ರತಿಭೆಯನ್ನು ತೋರ್ಪಡಿಸುವುದಕ್ಕೆ ಅವರು ಸಿದ್ಧರಾಗಿ ನಿಂತಿದ್ದಾರೆ. ಇದರ ಜೊತೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಚಂದನ ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಜಾಹ್ನವಿ ಪಾತ್ರದ ಮೂಲಕ ಕರ್ನಾಟಕದ ಮನೆಮನೆಯನ್ನು ಕೂಡ ತಲುಪಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಈ ಪಾತ್ರ ಅವರಿಗೆ ಹಿಂದೆಂದೂ ಕಾಣದಂತಹ ಯಶಸ್ಸನ್ನು ತಂದುಕೊಟ್ಟಿರೋದ್ರಲ್ಲಿ ಎರಡು ಮಾತಿಲ್ಲ ಅನ್ನಬಹುದಾಗಿದೆ. ಜಾಹ್ನವಿ ಪಾತ್ರದಲ್ಲಿ ಚಂದನ ಅವರೇ ಮುಂದುವರೆಯಲಿ ಅನ್ನೋದೇ ಅಭಿಮಾನಿಗಳ ಆಶಯ ಎಂದು ಹೇಳಬಹುದಾಗಿದೆ.