Darshan Case:ರೇಣುಕಾಸ್ವಾಮಿ ರೀತಿಯ ಗಂಡ ಯಾಕೆ ಬೇಕೇ? ಒಮ್ಮೆಲೇ ದರ್ಶನ್ ಪರ ನಿಂತ ತನಿಷಾ; ಹೇಳಿದ್ದೇನು ಗೊತ್ತೇ??

Darshan Case:ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಕಡೆಗಳಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವಂತಹ ಸುದ್ದಿ ಅಂತ ಅಂದ್ರೆ ಅದು ರೇಣುಕಾ ಸ್ವಾಮಿ ಅವರ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನ್ಯಾಯಾಂಗ ಬಂಧನದ ಸುದ್ದಿ. ಇನ್ನು ಇವರ ಬಗ್ಗೆ ಈಗ ಸಾಕಷ್ಟು ಮಂದಿ ಸ್ಯಾಂಡಲ್ವುಡ್ ನಲ್ಲಿ ಪರ ಹಾಗೂ ವಿರೋಧ ಮಾತುಗಳನ್ನು ಆಡಿದ್ದಾರೆ ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ಮಾತನಾಡಿರುವಂತಹ ಬಿಗ್ ಬಾಸ್ ಖ್ಯಾತಿಯ ತನಿಶಾ ಕುಪ್ಪಂಡ ಅವರ ಬಗ್ಗೆ‌.

ದರ್ಶನ್ ರವರ ಪರವಾಗಿ ಬ್ಯಾಟಿಂಗ್ ಮಾಡಿ ತನಿಷ ಕುಪ್ಪಂಡ ಹೇಳಿದ್ದೇನು?

ದರ್ಶನ್ ರವರ ಪರವಾಗಿ ಮಾತನಾಡುತ್ತಾ ತನಿಷ ಈ ಸಂದರ್ಭದಲ್ಲಿ ಈ ರೀತಿ ತನ್ನ ಪ್ರೈವೇಟ್ ಭಾಗವನ್ನು ಬೇರೆ ಮನೆಯ ಹೆಣ್ಣು ಮಕ್ಕಳಿಗೆ ತೋರಿಸುವಂತಹ ಗಂಡ ಯಾಕೆ ಬೇಕು ಅಂತ ಹೇಳಿದ್ದಾರೆ. ಮುಂದೊಂದು ದಿನ ಆ ಮಗು ಹೊರಗೆ ಬಂದ ನಂತರ ಪ್ರಪಂಚದಲ್ಲಿ ತನ್ನ ತಂದೆಯನ್ನು ನೋಡೋದಕ್ಕೆ ಸಾಧ್ಯವಿಲ್ಲ ಎನ್ನುವಂತಹ ಮಾಧ್ಯಮಗಳ ಪ್ರಶ್ನೆಗೆ ಈ ರೀತಿಯ ತಂದೆಯನ್ನು ನೋಡದೆ ಇರೋದೆ ಒಳ್ಳೆಯದು ಎಂದು ತನಿಶಾ ರೇಣುಕಾ ಸ್ವಾಮಿ ಅವರ ವಿರುದ್ಧ ಪರೋಕ್ಷವಾಗಿಯೇ ಕಿಡಿ ಕಾರಿದ್ದಾರೆ ಎಂದು ಹೇಳಬಹುದಾಗಿದೆ.

ಕೇವಲ ರೇಣುಕಾ ಸ್ವಾಮಿ ಅಂತ ಅಲ್ಲ ಇದೇ ರೀತಿಯ ಸಾಕಷ್ಟು ಪುರುಷರು ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಕೆಲಸಗಳನ್ನು ಮಾಡ್ತಾ ಇರ್ತಾರೆ. ಇಂಥವರನ್ನ ಜನ್ಮ ಜಾಲಾಡಿ ಅವರ ಮಾಹಿತಿಗಳನ್ನು ಹಂಚಿಕೊಂಡರು ಕೂಡ ಬೇಕಾಗಿರುವಂತಹ ಸ್ಪಷ್ಟೀಕರಣ ಸಿಗುವುದಿಲ್ಲ ಅನ್ನುವುದಾಗಿ ತನಿಷಾ ಹೇಳಿಕೊಂಡಿದ್ದಾರೆ. ಈ ರೀತಿ ಹೆಣ್ಣು ಮಕ್ಕಳ ಬಟ್ಟೆ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಬ್ಯಾಡ್ ಕಮೆಂಟ್ ಮಾಡುವವರಿಂದಲೇ ನಮಗೆ ಕೆಲಸವನ್ನು ನಿಯತ್ತಾಗಿ ಮಾಡೋಕೆ ಆಗ್ತಾ ಇಲ್ಲ ಗುರು ಅನ್ನುವುದಾಗಿ ಕೂಡ ಈ ಸಂದರ್ಭದಲ್ಲಿ ತನಿಷ ಹೇಳಿಕೊಂಡಿದ್ದಾರೆ.

ಇನ್ನು ದರ್ಶನ್ ರವರ ತಪ್ಪು ಒಪ್ಪುಗಳ ಬಗ್ಗೆ ಮಾತನಾಡಿರುವಂತಹ ತನಿಷ ಅದೇನೇ ಎದುರು ಕಾನೂನು ನೋಡಿಕೊಳ್ಳಲಿದೆ ಹಾಗೂ ಕಾನೂನು ಪ್ರಕಾರವೇ ತೀರ್ಪು ಹೊರಗೆ ಬಂದರೆ ಸರಿ. ರೇಣುಕಾ ಸ್ವಾಮಿಯ ನಂತು ಇನ್ ಮುಂದೆ ಪ್ರಶ್ನೆ ಮಾಡೋಕೆ ಆಗೋದಿಲ್ಲ ಯಾಕೆಂದರೆ ಆ ವ್ಯಕ್ತಿಯೇ ಈ ಪ್ರಪಂಚದಲ್ಲಿ ಇಲ್ಲ. ಇಂತಹ ವಿಚಾರಗಳಿಗೆ ಕಠಿಣ ಶಿಕ್ಷೆಯನ್ನು ನೀಡುವಂತಹ ಕೆಲಸ ಮಾಡಿದರೆ ರೇಣುಕಾ ಸ್ವಾಮಿ ಅಂಥವರು ಈ ರೀತಿಯ ಕೆಲಸ ಮಾಡುವುದಕ್ಕೆ ಸಾಧ್ಯವಾಗ್ತಿರ್ಲಿಲ್ಲ ಅನ್ನೋದಾಗಿ ಕೂಡ ತನಗೆ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನ ಜುಲೈ 18ರವರೆಗೆ ಮುಂದುವರಿಕೆ ಆಗಿದೆ ಎಂಬುದಾಗಿ ತಿಳಿದು ಬಂದಿದೆ.

Darshan Case