Darshan-Kranti: ಕ್ರಾಂತಿ ಸಿನಿಮಾದ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ, ಕಳೆದ ವರ್ಷದಿಂದ ಕ್ರಾಂತಿ ಸಿನಿಮಾವನ್ನ ನೋಡುವುದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೇನು ಆ ದಿನ ಕೂಡ ಬಂದೇಬಿಡ್ತು. ಸಾಕಷ್ಟು ಕನ್ನಡಿಗರು ಡಿ ಬಾಸ್ ಅವರ ಫಸ್ಟ್ ಡೇ ಫಸ್ಟ್ ಶೋ ಸಿನಿಮ ನೋಡೋದಕ್ಕಾಗಿ ಕಾಯುತ್ತಿದ್ದಾರೆ. ಪ್ರೀ ಬುಕ್ಕಿಂಗ್ ಕೂಡ ಆರಂಭವಾಗಿದ್ದು, ಅದೂ ಕೂಡ ಬೇಗ ಫಿಲ್ ಆಗ್ತಾ ಇರೋದು ನಿಜಕ್ಕೂ ವಿಶೇಷ.
ಕ್ರಾಂತಿ ಸಿನಿಮಾದ ಬಳಗ;
ಕ್ರಾಂತಿ ಸಿನಿಮಾದಲ್ಲಿ ದೊಡ್ಡ ತಾರಾ ಗಣವೇ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ಬುಲ್ ಬುಲ್ ಸಿನಿಮಾದ ನಂತರ ಮತ್ತೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ರವಿಶಂಕರ್, ಸಂಯುಕ್ತ ಹೊರನಾಡು ಮೊದಲಾದವರು ಈ ಚಿತ್ರದ ಮೆರುಗನ ಹೆಚ್ಚಿಸಲಿದ್ದಾರೆ. ಇನ್ನುವೆ ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿ ಚಿತ್ರದ ನಿರ್ದೇಶನ ಕೂಡ ಮಾಡಿದ್ದಾರೆ. ಕಂಪ್ಲೀಟ್ ಆಕ್ಷನ್ ಎಂಟರ್ಟೈನರ್ ಆಗಿರುವ ಈ ಚಿತ್ರವನ್ನು ಶೈಲಜಾ ಹಾಗೂ ಬಿ ಸುರೇಶ್ ದಂಪತಿ ನಿರ್ಮಾಣ ಮಾಡಿದ್ದಾರೆ. 50 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ ಅಂತ ಹೇಳಲಾಗುತ್ತದೆ.
ಯಾವಾಗ ಗೊತ್ತಾ ‘ಕ್ರಾಂತಿ’ಯ ‘ದರ್ಶನ ‘?
ಇದೇ ಬರುವ ಜನವರಿ 26ರಂದು ಅಂದರೆ ಗಣರಾಜ್ಯೋತ್ಸವದ ಸುದಿನದ ದಿನದಂದು ಕ್ರಾಂತಿ ಸಿನಿಮಾ ಬಿಡುಗಡೆ ಆಗಲಿದೆ. ಕಳೆದ ಒಂದು ವರ್ಷದಿಂದ ದರ್ಶನ್ ಅವರನ್ನು ತೆರೆಯ ಮೇಲೆ ಅಕ್ಷರ ಕ್ರಾಂತಿ ಮಾಡೋದನ್ನ ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾದ ಪ್ರಮೋಷನ್ ಕಾರ್ಯ ಕೂಡ ಇದೀಗ ಜೋರಾಗಿ ನಡೆಯುತ್ತಿದೆ. ಇದನ್ನೂ ಓದಿ: Nikhil Kumaraswamy: ರಾಜಕೀಯ ಬಿಟ್ರೆ, ಕನ್ನಡದ ಭರವಸೆಯ ನಟ ನಿಖಿಲ್ ಹಾಗೂ ಪತ್ನಿ ರೇವತಿ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??
ಪ್ರಿ ಟಿಕೆಟ್ ಬುಕಿಂಗ್ ಇಂದೇ ಮಾಡಿಕೊಳ್ಳಿ!
ಹೌದು ನಿಧಾನವಾಗಿ ಕ್ರಾಂತಿ ಸಿನಿಮಾದ ಪ್ರೀ ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿದೆ ಹಾಗಾಗಿ ಈಗಾಗಲೇ ವಿದ್ಯಾಪೀಠ ಸರ್ಕಲ್ ನಲ್ಲಿ ಇರುವ ಚಂದ್ರೋದಯ ಹಾಗೂ ತಿಪಟೂರಿನ ಲಕ್ಷ್ಮಿ ಟಾಕೀಸ್ ನಲ್ಲಿ ಆರಂಭವಾಗಿದೆ ಶನಿವಾರ ಬೆಳಗ್ಗೆಯೇ ಬುಕಿಂಗ್ ಶುರುವಾಗಿದೆ. ಬುಕ್ ಮೈ ಶೋ ದಲ್ಲಿ ಪ್ರಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ಇದನ್ನೂ ಓದಿ:Real Story: ಸೌಂದರ್ಯವೇ ಬಂಡವಾಳ, ಆದರೆ ಹೂಡಿಕೆ ಇಲ್ಲದೆ, ಖರ್ಚು ಇಲ್ಲದೆ ಆಂಟಿ ಹಣಕ್ಕೆ ಏನು ಮಾಡಿದ್ದಾರೆ ಗೊತ್ತೇ?? ಹಿಂಗೂ ಇರ್ತಾರ??
ಫಸ್ಟ್ ಡೇ ಫಸ್ಟ್ ಶೋ;
ಕ್ರಾಂತಿ ಸಿನಿಮಾವನ್ನು ಸೂರ್ಯ ಹುಟ್ಟುವುದಕ್ಕೂ ಮೊದಲೇ ಪ್ರದರ್ಶನ ಮಾಡಲಾಗುವುದು. ಬೆಳಿಗ್ಗೆ 5:00ಯಿಂದಲೇ ಥಿಯೇಟರ್ ಎದುರು ಜನರ ಸಂಭ್ರಮ ಶುರುವಾಗಲಿದೆ. ಚಂದ್ರೋದಯ ಚಿತ್ರಮಂದಿರದಲ್ಲಿ ಬೆಳಿಗ್ಗೆ 6:005 ನಿಮಿಷಕ್ಕೆ ಫಸ್ಟ್ ಶೋ ಪ್ರದರ್ಶನ ಆಗುತ್ತೆ. ಹಾಗಾಗಿ ದರ್ಶನ್ ಅವರ ಅಕ್ಷರ ಕ್ರಾಂತಿ ಮಾಡೋದನ್ನ ಕಣ್ಣು ತುಂಬಿಕೊಳ್ಳಲು ಅವರ ಅಭಿಮಾನಿಗಳು ಮುಂಜಾನೆ ಎದ್ದು ಥಿಯೇಟರ್ ಮುಂದೆ ಸಾಲುಗಟ್ಟಿ ನಿಲ್ಲುವುದಂತು ಸುಳ್ಳಲ್ಲ. ಇದನ್ನೂ ಓದಿ:Cricket News: ಕೊಹ್ಲಿ ಮೂರನೇ ಕ್ರಮಾಂಕದ ಅಧಿಪತ್ಯ ಮುಗಿಯಿತೇ?? ಈತನಿಗಾಗಿ ಸ್ಥಾನ ಬಿಟ್ಟುಕೊಡಿ ಎಂದ ಸಂಜಯ್: ಕೊಹ್ಲಿ ತ್ಯಾಗ ಯಾರಿಗೆ ಮಾಡಬೇಕಂತೆ ಗೊತ್ತೇ?
ಕ್ರಾಂತಿಯನ್ನು ಗೆಲ್ಲಿಸಿ;
ಈ ಒಂದು ಸಿನಿಮಾದ ಸಲುವಾಗಿ ದರ್ಶನ್ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತೆ ಆಗಿತ್ತು. ಹಾಗಾಗಿ ಅದೆಲ್ಲವನ್ನು ಮೀರಿ ಕ್ರಾಂತಿ ಸಿನಿಮಾವನ್ನ ಗೆಲ್ಲಿಸಬೇಕಿದೆ, ಗೆಲ್ಲಬೇಕಿದೆ. ಅದಕ್ಕಾಗಿ ಅಭಿಮಾನಿಗಳು ಕೂಡ ಡಿ ಬಾಸ್ ಬೆಂಬಲಕ್ಕೆ ನಿಂತಿದ್ದಾರೆ. ಕ್ರಾಂತಿ ಸಿನಿಮಾ ನೂರು ಕೋಟಿ ಕ್ಲಬ್ ಹೌಸ್ ಸೇರಬೇಕು ಎನ್ನುವುದು ಪ್ರತಿಯೊಬ್ಬ ದರ್ಶನ್ ಅಭಿಮಾನಿಗಳ ಅಭಿಮತ. ಹಾಗಾಗಿ ಈ ನಿಟ್ಟಿನಲ್ಲಿ ’ಕ್ರಾಂತಿ’ ಆಗತ್ತಾ ಕಾದು ನೋಡಬೇಕು.