Film News:ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನ್ಯಾಯಾಂಗ ಬಂಧನದ ವಿಚಾರದ ಬಗ್ಗೆ ಇವತ್ತು ನಿಜವಾದ ಫಲಿತಾಂಶ ಹೊರಬರಲಿದೆ. ಇನ್ನು ದರ್ಶನ್ ರವರು ಜೈಲಿನಲ್ಲಿಯೇ ಇದ್ದರೂ ಕೂಡ ಅವರ ಸಿನಿಮಾಗಳು ಮರು ಬಿಡುಗಡೆ ಆಗ್ತಿರೋದು ಕೂಡ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ ಎಂಬುದಾಗಿ ಭಾವಿಸುತ್ತೇವೆ. ಹೌದು ನಿಮಗೆಲ್ಲರಿಗೂ ತಿಳಿದಿರಬಹುದು ಇತ್ತೀಚಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಆಲ್ ಟೈಮ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವಂತಹ ಶಾಸ್ತ್ರಿ ಸಿನಿಮಾ ಅವರು ಬಿಡುಗಡೆಯಾಗಿತ್ತು. ಹೊಸ ಸಿನಿಮಾಗಳು ಕೂಡ ಹೌಸ್ ಫುಲ್ ಆಗುವುದಕ್ಕೆ ಪರದಾಡುತ್ತಿರುವಂತಹ ಈ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಶಾಸ್ತ್ರಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ನಿಜಕ್ಕೂ ಕೂಡ ಆಶ್ಚರ್ಯಕರ ಎಂದು ಹೇಳಬಹುದಾಗಿದೆ.
ಈ ವಿಚಾರದ ಬಗ್ಗೆ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ಹಾಗೂ ನಿರ್ದೇಶಕ ಆಗಿರುವಂತಹ ರಾಜ್ ಬಿ ಶೆಟ್ಟಿ ಕೂಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. 2005ರಲ್ಲಿ ಬಿಡುಗಡೆಯಾಗಿದ್ದ ಶಾಸ್ತ್ರಿ ಸಿನಿಮಾ ಈಗ 19 ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಜೈಲಿಗೆ ಹೋದ ನಂತರ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿದೆ. ಇದನ್ನ ರಿಲೀಸ್ ಮಾಡಿರುವಂತಹ ಸಿನಿಮಾ ಥಿಯೇಟರ್ ಮಾಲೀಕರಿಗೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ ಎಂಬುದಾಗಿ ಕೂಡ ತಿಳಿದುಬಂದಿದೆ. ಇನ್ನು ಇದೇ ಸಂದರ್ಭದಲ್ಲಿ ಸಿನಿಮಾ ಒಂದರ ಬಗ್ಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ರಾಜ್ ಬಿ ಶೆಟ್ಟಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಯಾವ ರೀತಿಯಲ್ಲಿ ಕೆಜಿಎಫ್ ಗೆದ್ದಾಗ ಸಂಬಂಧಿಕರಂತೆ ನಾವು ಆ ಸಂತೋಷದಲ್ಲಿ ಹೇಗೆ ಭಾಗಿಯಾಗಿದ್ದೆವೋ, ಅದೇ ರೀತಿಯಲ್ಲಿ ಸಂಬಂಧಿಕರಾಗಿ ಈ ವಿಚಾರದ ಆರೋಪ ಕೂಡ ನಮ್ಮೆಲ್ಲರ ಮೇಲೆ ಕಂಡುಬರುತ್ತದೆ ಎಂಬುದಾಗಿ ಹೇಳಿದ್ದಾರೆ. ಖಂಡಿತವಾಗಿ ಒಂದು ಚಿತ್ರರಂಗವಾಗಿ ನಾವು ಈ ರೀತಿಯ ಆರೋಪಗಳು ನಮ್ಮ ಮೇಲೆ ಕೆಟ್ಟ ಅಭಿಪ್ರಾಯಗಳು ಮೂಡುವಂತೆ ಮಾಡುತ್ತವೆ ಎಂಬುದಾಗಿ ಈ ಸಂದರ್ಭದಲ್ಲಿ ಶೆಟ್ರು ಹೇಳಿದ್ದಾರೆ. ಇಲ್ಲಿ ದರ್ಶನ್ ರವರ ತಪ್ಪು ಮಾಡಿದ್ರೆ ನ್ಯಾಯ ಎಲ್ಲರಿಗೂ ಒಂದೇ ಹಾಗೂ ಶಿಕ್ಷೆ ಆಗಲೇಬೇಕು ಇಲ್ಲವಾದರೆ ಅವರು ರಿಲೀಸ್ ಆಗ್ಬೇಕು ಎಂಬುದಾಗಿ ಈ ಸಂದರ್ಭದಲ್ಲಿ ಶೆಟ್ರು ಹೇಳಿದ್ದಾರೆ.
ಇನ್ನು ದರ್ಶನ್ ರವರ ಬಗ್ಗೆ ಹಾಗೂ ಅವರ ಶಾಸ್ತ್ರ ಸಿನಿಮಾ ಈಗ ಕ್ರಿಯೇಟ್ ಮಾಡಿರುವಂತಹ ಹವಾದ ಬಗ್ಗೆ ಮಾತನಾಡುತ್ತಾ, ನೀವು ಎಷ್ಟೇ ಒಳ್ಳೆಯ ಸಿನಿಮಾಗಳನ್ನು ನೀಡಿ ಎಷ್ಟೇ ಒಳ್ಳೆಯ ಕೆಲಸಗಳನ್ನು ಮಾಡಿ ದರ್ಶನ್ ರವರು ಸಂಪಾದನೆ ಮಾಡಿರುವಂತಹ ಅಭಿಮಾನಿಗಳನ್ನ ಸಂಪಾದನೆ ಮಾಡುವುದಕ್ಕೆ ಸಾಧ್ಯವಿಲ್ಲ. ಯಾಕೆ ಜನರು ಅವರ ಸಿನಿಮಾಗಳನ್ನು ಮಾತ್ರ ನೋಡ್ತಾ ಇದ್ದಾರೆ ಬೇರೆ ಸಿನಿಮಾಗಳನ್ನ ಯಾಕೆ ನೋಡ್ತಾ ಇಲ್ಲ ಅನ್ನುವಂತಹ ಫಾರ್ಮುಲಾ ಕೂಡ ತಿಳಿದಿಲ್ಲ ಎಂಬುದಾಗಿ ಸಂದರ್ಭದಲ್ಲಿ ಹೇಳಿದ್ದಾರೆ. ಇದು ದೇವರು ಅವರಿಗೆ ಕೊಟ್ಟಿರುವಂತಹ ವಾರ ಎಂಬುದಾಗಿ ಕೂಡ ಶೆಟ್ರು ಈ ಸಂದರ್ಭದಲ್ಲಿ ದರ್ಶನ್ ರವರನ್ನ ಮನತುಂಬಿ ಹೊಗಳಿದ್ದಾರೆ.