Film News: ಕನ್ನಡ ಚಿತ್ರರಂಗದ ಎರಡು ಆಧಾರ ಸ್ಥಂಭಗಳು ಎಂದರೆ ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರು. ಇಬ್ಬರು ಒಂದೇ ತೂಕದ ವ್ಯಕ್ತಿಗಳು ಎಂದರೆ ತಪ್ಪಾಗುವುದಿಲ್ಲ. ಇಬ್ಬರು ಕನ್ನಡಕ್ಕಾಗಿ ಅವರದ್ದೇ ಆದ ಛಾಪು ಮೂಡಿಸಿದ್ದರು. ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಕೂಡ ಇತ್ತು. ವಿಷ್ಣುವರ್ಧನ್ ಅವರ ಬಗ್ಗೆ ಹೇಳುವುದಾದರೆ ಅಣ್ಣಾವ್ರು ಹಾಗೂ ಹಲವಾರು ಹೆಸರಾಂತ ನಟರು ಮೆಚ್ಚಿಕೊಂಡ ಹೆಮ್ಮೆಯ ಕಲಾವಿದ ವಿಷ್ಣುವರ್ಧನ್ ಅವರು. ಇಂಥಹ ಶ್ರೇಷ್ಠ ನಟ ಮೆಚ್ಚಿಕೊಂಡ ಕಲಾವಿದ ಯಾರು ಗೊತ್ತಾ? ಇದನ್ನೂ ಓದಿ: Kannada Serial: ಅಕ್ಕ ತಂಗಿಯರ ನಡುವೆ ನಡೆಯುತ್ತಿದೆ ಪೈಪೋಟಿ; ಭಾಗ್ಯಲಕ್ಷ್ಮಿ ಹಾಗೂ ಲಕ್ಷ್ಮಿ ಬಾರಮ್ಮ ಧಾರಾವಾಹಿಯನ್ನು ಜನರು ಜಾಸ್ತಿ ಮೆಚ್ಚಿರುವುದು ಯಾರನ್ನು ಗೊತ್ತೇ? TRP ಹೇಳೋದೇನು?
ವಿಷ್ಣುವರ್ಧನ್ ಅವರು ಪುಟ್ಟಣ್ಣ ಕಣಗಾಲ್ ಅವರ ಗರಡಿಯಿಂದ ಬಂದವರು. ವಿಷ್ಣುವರ್ಧನ್ ಅವರು ಆಂಗ್ರಿ ಯಂಗ್ ಮ್ಯಾನ್ ಆಗಿ, ಹಾಗೆಯೇ ವಿಭಿನ್ನವಾದ ಪಾತ್ರಗಳಲ್ಲಿ ಗುರುತಿಸಿಕೊಂಡ ಕಲಾವಿದ. ವಿಷ್ಣುವರ್ಧನ್ ಅವರ ಪಾತ್ರದ ಪರಕಾಯ ಪ್ರವೇಶ ಹೇಗಿರುತ್ತದೆ ಎಂದು ಅವರ ಪ್ರತಿಯೊಂದು ಸಿನಿಮಾದಲ್ಲಿ ಸಹ ನಾವು ನೋಡಿದ್ದೇವೆ. ಕನ್ನಡದ ಮೇರು ನಟ ಆಗುರುವ ವಿಷ್ಣುವರ್ಧನ್ ಅವರಿಗೆ ಕನ್ನಡದ ಆ ಒಬ್ಬ ನಟನ ಮೇಲೆ ಬಹಳ ಪ್ರೀತಿ ಮತ್ತು ಗೌರವ ಇತ್ತು.
ಆ ನಟ ಮತ್ಯಾರು ಅಲ್ಲ, ರಮೇಶ್ ಅರವಿಂದ್ ಅವರು. ಹೌದು, ವಿಷ್ಣುವರ್ಧನ್ ಅವರಿಗೆ ರಮೇಶ್ ಅರವಿಂದ್ ಅವರನ್ನು ಕಂಡರೆ ತುಂಬಾ ಇಷ್ಟ. ಇವರಿಬ್ಬರು ಜೊತೆಯಾಗಿ, ದೀಪಾವಳಿ, ಆಪ್ತಮಿತ್ರ, ಏಕದಂತ, ವಿಷ್ಣುಸೇನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ಸಾರಿ ವಿಷ್ಣುದಾದ ಅವರು ತಮ್ಮ ಸಿನಿಮಾದಲ್ಲಿ ರಮೇಶ್ ಅವರಿಗೆ ಯಾವುದಾದರೂ ಒಳ್ಳೆಯ ಪಾತ್ರ ಇದೆಯೇ ಎಂದು ಕೇಳಿದ್ದು ಉಂಟು. ರಮೇಶ್ ಅವರಿಗು ಕೂಡ ವಿಷ್ಣುವರ್ಧನ್ ಅವರ ಮೇಲೆ ಬಹಳ ಗೌರವವಿದೆ.
ವಿಷ್ಣುವರ್ಧನ್ ಅವರೊಡನೆ ಒಂದೇ ಒಂದು ಸಿನಿಮಾದಲ್ಲಿ ಆದರೂ ನಟಿಸಬೇಕು ಎಂದು ರಮೇಶ್ ಅವರು ಕೂಡ ಆಸೆಪಟ್ಟಿದ್ದರು. ಆದರೆ ಹಲವು ಸಿನಿಮಾಗಳ ಮೂಲಕ ರಮೇಶ್ ಅವರ ಆಸೆ ನೆರವೇರಿತು. ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಕೂಡ ಇದೆ, ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಈಗಲೂ ವಿಷ್ಣುದಾದ ಅವರ ಮೇಲೆ ಅಷ್ಟೇ ಗೌರವ ಇದೆ. ಇದನ್ನೂ ಓದಿ: Father’s property: ಹೆಣ್ಣು ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದ ಕೋರ್ಟ್; ಯಾವಾಗ ಪಾಲು ಕೇಳಲು ಸಾಧ್ಯವಿಲ್ಲ ಗೊತ್ತೇ? ಯಾವಾಗ ಆಸ್ತಿ ಪಾಲು ಕೊಡಲೇಬೇಕಾಗುತ್ತದೆ ಗೊತ್ತೇ?