Kannada Story: ಈ ಆಧುನಿಕ ಯುಗದಲ್ಲಿ ಕೂಡ ಹೆಣ್ಣುಮಕ್ಕಳ ಮೇಲೆ ನಡೆಯುವ ಶೋಷಣೆಗಳು ಕಡಿಮೆ ಆಗುತ್ತಿಲ್ಲ, ವರದಕ್ಷಿಣೆ ವಿಚಾರಕ್ಕೆ ಈಗಲೂ ಅದೆಷ್ಟೋ ಹೆಣ್ಣುಮಕ್ಕಳು ಕಷ್ಟ ನೋವು ಅನುಭವಿಸುತ್ತಿದ್ದಾರೆ. ಗಂಡ ಹಾಗೂ ಗಂಡನ ಮನೆಯವರು ಕೊಡುವ ತೊಂದರೆ ಸಹಿಸಲಾಗದೆ ಅದೆಷ್ಟೋ ಹೆಣ್ಣುಮಕ್ಕಳು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇಂಥದ್ದೊಂದು ಘಟನೆ ತಿರುಪತಿ ಜಿಲ್ಲೆಯಲ್ಲಿ ನಡೆದಿದ್ದು, ಗಂಡ ಕೊಡುತ್ತಿರುವ ತೊಂದರೆ ಸಹಿಸಲಾರದೆ ಈ ಹೆಣ್ಣು ಎಂಥ ನಿರ್ಧಾರ ತೆಗೆದುಕೊಂಡಿದ್ದಾಳೆ ಗೊತ್ತಾ?
ಈ ಘಟನೆಯು ತಿರುಪತಿ (Tirupati) ಜಿಲ್ಲೆ ತೊಟ್ಟಂಬೆಡು ಮಂಡಲದ ಚೆಮುರು ಗ್ರಾಮದಲ್ಲಿ ನಡೆದಿದೆ. ಇಲ್ಲಿ 25 ವರ್ಷದ ಸುಮಲತಾ ಎನ್ನುವ ಹುಡುಗಿ ವಾಸ ಮಾಡುತ್ತಿದ್ದಳು, ಈಕೆಯ ತಾಯಿ ಹೆಸರು ವೆಂಕಟಮ್ಮ. 2016ರಲ್ಲಿ ಚೇಮೂರಿಗೆ ಸೇರಿದ ವಿಜಯಶೇಖರ್ ಎನ್ನುವ ವ್ಯಕ್ತಿಯ ಜೊತೆಗೆ ಮಗಳ ಮದುವೆ ಮಾಡಿದರು ವೆಂಕಟಮ್ಮ. ಮದುವೆ ಸಮಯದಲ್ಲಿ ಈತನಿಗೆ 50 ಸಾವಿರ ರೂಪಾಯಿ ಹಾಗೂ 2 ಸವರನ್ ಚಿನ್ನದ ಆಭರಣವನ್ನು ವರದಕ್ಷಿಣೆಯಾಗಿ ಕೊಡಲಾಗಿತ್ತು. ಇದನ್ನು ಓದಿ..Bangalore: ರೈತರು ನೆಮ್ಮದಿಯಿಂದ ನಿದ್ದೆ ಮಾಡಿದರೆ, ಬೆಂಗಳೂರಿನಲ್ಲಿ ಇರುವಾರು ರಾತ್ರಿ ಮಲಗುವ ಮುನ್ನ ಏನು ನೋಡುತ್ತಾರಂತೆ ಗೊತ್ತೆ?
ಮದುವೆಯಾದ ಹೊಸದರಲ್ಲಿ ಹೆಂಡತಿಯನ್ನು ತುಂಬಾ ಚೆನ್ನಾಗಿ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ, ಇವರಿಗೆ ಒಂದು ಹೆಣ್ಣುಮಗು ಕೂಡ ಜನಿಸಿದ್ದು, ಮಗುವಿಗೆ ಈಗ 4 ವರ್ಷ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತಾದರು ನಂತರ, ಸುಮಲತಾಳಿಗೆ ವರದಕ್ಷಿಣೆ ಹಣ ತರಬೇಕು ಎಂದು ಹಿಂಸೆ ಕೊಡುವುದಕ್ಕೆ ಶುರು ಮಾಡಿದ. ಆಕೆ ಕೂಡ ತಾಯಿ ಮನೆಯಲ್ಲಿ ವಿಷಯ ತಿಳಿಸಿ, ಸುಮಲತಾ ತಾಯಿ ಒಂದಷ್ಟು ಹಣವನ್ನು ಅಳಿಯನಿಗೆ ಕೊಟ್ಟರು. ಅದರಿಂದ ವಿಜಯಶೇಖರ್ ಇನ್ನಷ್ಟು ದಿನ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಂಡ.. ಆದರೆ ಮತ್ತದೇ ವರಸೆ ಶುರು ಆಯಿತು.
ಮತ್ತೆ ತವರುಮನೆಯಿಂದ ಹಣ ತರಬೇಕು ಎಂದು ಒತ್ತಾಯ ಮಾಡಿ, ತೊಂದರೆ ಕೊಡುವುದಕ್ಕೆ ಶುರು ಮಾಡಿದ. ಇದರಿಂದ ಮನನೊಂದ ಸುಮಲತಾ ಭಾನುವಾರದ ದಿನ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಉಸಿರು ನಿಲ್ಲಿಸಿದ್ದಾಳೆ. ಪೊಲೀಸರಿಗೆ ಈ ವಿಷಯ ತಲುಪಿ, ಅವರು ಸುಮಲತಾ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳಿಸಿಕೊಟ್ಟಿದ್ದು, ಅಳಿಯನ ವಿರುದ್ಧ ಸುಮಲತಾ ತಾಯಿ ವೆಂಕಟಮ್ಮ ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ..Business Idea: ನೀವು ಕೂಡ ಅಮುಲ್ ಅಂಗಡಿ ತೆರೆದು, 5 ಲಕ್ಷ ಲಾಭ ಮಾಡಿಕೊಳ್ಳಬೇಕು ಎಂದು ಕೊಂಡರೆ, ಹೇಗೆ ಆರಂಭಿಸುವುದು ಗೊತ್ತೇ? ಕಡಿಮೆ ಬಂಡವಾಳ