Hardik Pandya: ಸದ್ಯದ ಮಟ್ಟಿಗೆ ಇಡೀ ಭಾರತ ದೇಶದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವಂತಹ ಸುದ್ದಿ ಅಂದ್ರೆ ಅದು ಭಾರತ ಕ್ರಿಕೆಟ್ ತಂಡದ ಉಪನಾಯಕ ಆಗಿರುವಂತಹ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿ ಆಗಿರುವಂತಹ ನತಾಶ ಅವರಿಗೆ ವಿವಾಹವಿಚ್ಛೇದನವನ್ನು ನೀಡಿರುವುದು. ಇವ್ರಿಬ್ರು ಮದುವೆಯಾಗಿದ್ದು ಕೂಡ ಸಾಕಷ್ಟು ವಿವಾದವನ್ನು ಹುಟ್ಟು ಹಾಕಿತ್ತು ಎಂದು ಹೇಳಬಹುದಾಗಿದ್ದು ಮದುವೆ ಆಗೋದಕ್ಕಿಂತ ಮುಂಚೆನೇ ಇವರು ಮಗು ಮಾಡಿಕೊಂಡಿದ್ದರು. ಅದಾದ ನಂತರ ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಮೂಲಕ ಕೂಡ ಸುದ್ದಿಯಾಗಿದ್ದರು.
ಆದರೆ ಈಗ ಅದಕ್ಕಿಂತಲೂ ಆಶ್ಚರ್ಯ ಎನ್ನುವ ರೀತಿಯಲ್ಲಿ ಇಬ್ಬರೂ ಕೂಡ ವಿವಾಹ ವಿಚಾರವನ್ನು ಪಡೆದುಕೊಂಡಿದ್ದಾರೆ ಎನ್ನುವಂತಹ ಕನ್ಫರ್ಮ್ ನ್ಯೂಸ್ಗಳು ಕೇಳಿ ಬರುತ್ತಿವೆ. ಇದೇ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯ ಎಪ್ಪತ್ತು ಪ್ರತಿಶತ ಭಾಗವನ್ನ ತಮ್ಮ ಪತ್ನಿ ಅಥವಾ ಮಾಜಿ ಪತ್ನಿ ಆಗಿರುವಂತಹ ನತಾಶಾ ಅವರಿಗೆ ನೀಡಬೇಕಾಗಿರುತ್ತದೆ ಅನ್ನೋದಾಗಿ ಕೂಡ ಸುದ್ದಿ ಕೇಳಿ ಬರ್ತಾ ಇದೆ. ಈ ವಿಚಾರವನ್ನು ದಂಪತಿಗಳಿಬ್ಬರೂ ಕೂಡ ಇದುವರೆಗೂ ಯಾವುದೇ ರೀತಿಯಲ್ಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ ಅನ್ನೋದು ಕೂಡ ನಾವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುವಂತಹ ವಿಚಾರವಾಗಿದೆ.
ಡಿವೋರ್ಸ್ ಸುದ್ದಿ ಹೊರ ಬರುತ್ತಿದ್ದಂತೆ ನತಾಶ ಪೋಸ್ಟ್ ಮಾಡಿರುವುದೇನು ಗೊತ್ತಾ?
ಹೌದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿಯಲ್ಲಿ ನತಾಶ ರವರು ಡ್ರೈವಿಂಗ್ ಸ್ಕೂಲಿನ ಸನ್ನೆಗಳನ್ನು ತಿಳಿಸುವಂತಹ ಫೋಟೋವನ್ನು ಅಪ್ಲೋಡ್ ಮಾಡಿ ಇವತ್ತು ಯಾರೋ ಒಬ್ರು ಬೀದಿಗೆ ಇಳಿಯುತ್ತಿದ್ದಾರೆ ಎನ್ನುವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನ ಅವರು ಯಾವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿಲ್ಲ ಆದರೆ ನೆಟ್ಟಿಗರು ಮಾತ್ರ ಹಾರ್ದಿಕ್ ಪಾಂಡ್ಯ ಬೀದಿಗೆ ಇಳಿಯುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡಿದ್ದಾರೆ. ನಿಜವಾಗಿಯೂ ಇದು ಏನು ಅನ್ನೋದನ್ನ ನಾವು ಹೇಳಲು ಸಾಧ್ಯವಿಲ್ಲ ಆದರೆ ಪರಿಸ್ಥಿತಿಗೆ ತಕ್ಕಂತೆ ಅರ್ಥ ಮಾಡಿಕೊಳ್ಳುವುದಾದರೆ ಇದು ಹಾರ್ಧಿಕ್ ಪಾಂಡ್ಯ ಅವರಿಗೆ ಹೇಳಿರುವ ರೀತಿಯಲ್ಲಿ ಇದೆ.
2023ರಲ್ಲಿ ಹಿಂದು ಹಾಗೂ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದ ಇವರಿಬ್ರು ದೀರ್ಘಕಾಲಿಕವಾಗಿ ಜೋಡಿ ಗಳಾಗಿ ಕಾಣಿಸಿಕೊಳ್ಳುತ್ತಾರೆ ಅನ್ನೋದಾಗಿ ಭಾವಿಸಲಾಗಿತ್ತು. ನತಾಶಾ ಅವರ ವಿಚಾರದ ಬಗ್ಗೆ ಮಾತನಾಡುವುದಾದರೆ ಮದುವೆ ಆಗುವುದಕ್ಕಿಂತ ಮುಂಚೆ ಕೂಡ ಅವರು ಇದ್ದಿದ್ದು ಹಾಗೂ ಬ್ರೇಕ್ ಅಪ್ ಮಾಡಿಕೊಂಡಿರುವ ವಿಚಾರದ ಬಗ್ಗೆ ಕೂಡ ಟೆಲಿವಿಷನ್ ಕಾರ್ಯಕ್ರಮದಲ್ಲಿ ಕಂಡುಬಂದಿತ್ತು ಅನ್ನೋದನ್ನ ನಾವು ಇಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ.
ಈ ಬಾರಿ ಮುಂಬೈನ ನಾಯಕನಾಗಿ ಕೂಡ ಅತ್ಯಂತ ಕಳಪೆ ಪ್ರದರ್ಶನವನ್ನು ತೋರ್ಪಡಿಸಿದ್ದ ಅವರು ಟಿ20 ವಿಶ್ವಕಪ್ ಗೆ ಉಪನಾಯಕನಾಗಿ ಆಯ್ಕೆಯಾಗಿದ್ದು ಈ ಘಟನೆಯಿಂದಾಗಿ ಅದು ಅವರ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.