Relationship; ಈಗಿನ ಕಾಲದಲ್ಲಿ ಮನುಷತ್ವ ಪ್ರೀತಿ ಇದಕ್ಕೆಲ್ಲ ಬೆಲೆ ಇಲ್ಲ, ಎಲ್ಲರಿಗೂ ಈಗ ತಮ್ಮ ಸ್ವಾರ್ಥ, ಹಣ, ಐಶ್ವರ್ಯ ಇವುಗಳೇ ಮುಖ್ಯವಾಗಿ ಹೋಗಿದೆ. ಇದಕ್ಕಾಗಿ ಕುಟುಂಬವನ್ನು ಬಿಡದೆ, ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಹಣದ ಆಸೆಗೆ, ಮತ್ತೊಬ್ಬ ವ್ಯಕ್ತಿಯ ಜೊತೆಗಿನ ಸಂಬಂಧದ ಮೋಹಕ್ಕೆ ಸಿಲುಕಿ, ತನ್ನವರನ್ನೇ ಮುಗಿಸುವಂಥ ನೀಚ ಬುದ್ಧಿಗೆ ಇಳಿಯುತ್ತಿದ್ದಾರೆ ಜನರು.
ಇಂತಹ ಹಲವು ಘಟನೆಗಳನ್ನು ನಾವು ಪ್ರತಿದಿನ ನೋಡುತ್ತಲೇ ಇರುತ್ತೇವೆ, ಇವುಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಇದೇ ರೀತಿ ಮಹಿಳೆ ಒಬ್ಬಳು ಸ್ವತ್ತಿನ ಆಸೆಗಾಗಿ, ಗಂಡ ಮತ್ತು ಅತ್ತೆಯನ್ನು ಏನು ಮಾಡಿದ್ದಾಳೆ ಗೊತ್ತಾ?
ಇಂಥಹ ಘಟನೆ ನಡೆದಿರುವುದು ಮುಂಬೈ ಮಹಾನಗರದಲ್ಲಿ. ಇಲ್ಲಿ ಕಮಲ್ಕಾಂತ್ ಶಾ, ಕಾಜಲ್ ಶಾ ಹೆಸರಿನ ದಂಪತಿ ನೆಲೆಸಿದ್ದರು, ಇವರದ್ದು ಚಿಕ್ಕದಾದ ಚೊಕ್ಕದಾದ ಕುಟುಂಬ. ಇವರಿಗೆ ತಮ್ಮದೇ ಆದ ಗಾರ್ಮೆಂಟ್ ಫ್ಯಾಕ್ಟರಿ ಇತ್ತು, ಅದನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದರು.
ಕಾಜಲ್ ಗೆ ಮನೆಯಲ್ಲಿ ಎಲ್ಲವೂ ಚೆನ್ನಾಗಿದ್ದರೂ ಸಹ, ಹಿತೇಶ್ ಜೈನ್ ಎನ್ನುವ ಹುಡುಗನ ಪರಿಚಯವಾಗಿ ಅವನ ಜೊತೆಗೆ ಸಂಬಂಧ ಹೊಂದಿದ್ದಳು. ಅದರ ಜೊತೆಗೆ, ಸ್ವತ್ತು ಅಂದರೆ ಗಾರ್ಮೆಂಟ್ ಫ್ಯಾಕ್ಟರಿ ಕೂಡ ತನಗೆ ದಕ್ಕಬೇಕು ಎಂದು ಅವಳಿಗೆ ದುರಾಸೆ ಶುರುವಾಯಿತು.
ಆದರೆ ಗಂಡ ಮತ್ತು ಅತ್ತೆ ಬಡುಕಿರುವವರೆಗು ಇದು ಸಾಧ್ಯವಿಲ್ಲ ಎಂದು ಅವಳಿಗೆ ಗೊತ್ತಿತ್ತು, ಹಾಗಾಗಿ ಲವ್ವರ್ ಹಿತೇಶ್ ಜೊತೆ ಸೇರಿ ಒಂದು ಪ್ಲಾನ್ ಮಾಡಿದಳು,. ಬೇರೆ ಊರಿನಿಂದ ಸ್ಲೋ ಪಾಯ್ಸನ್ ತಂದು ಅದನ್ನು ಗಂಡ ಮತ್ತು ಅತ್ತೆ ಮಾಡುವ ಊಟಕ್ಕೆ ಪ್ರತಿದಿಮ ಬೆರೆಸಿ ಕೊಡುತ್ತಿದ್ದಳು.
ಅದರ ಎಫೆಕ್ಟ್ ಇಂದ ಅವರಿಬ್ಬರು ವಿಧಿವಶರಾದರು, ಆರೋಗ್ಯವಾಗಿದ್ದ ಅಮ್ಮ ಮಗನಿಗೆ ಹೀಗಾದಾಗ, ಪೊಲೀಸರಿಗೂ ಬೇರೇನೂ ನಡೆದಿದೆ ಎಂದು ಅನುಮಾನ ಶುರುವಾಗಿ, ಕಾಜಲ್ ಳನ್ನು ಬಂಧಿಸಿ, ಪೊಲೀಸರ ಶೈಲಿಯಲ್ಲಿ ಕೇಳಿದಾಗ, ತಾನೇ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪೊಲೀಸರು ಈಗ ಆಕೆಯನ್ನು ಬಂಧಿಸಿದ್ದಾರೆ.