Kannada Astrology: ದಾನ ಮಾಡುವುದು ಅಂದ್ರೆ ಪುಣ್ಯ ಪ್ರಾಪ್ತಿ ಮಾಡಿಕೊಳ್ಳುವುದು ಎಂದು ಅರ್ಥ. ನಾವು ನಮ್ಮ ಕೈಲಾದಷ್ಟು ದಾನವನ್ನು ಮಾಡಬೇಕು ಇದರಿಂದ ನಮಗೆ ಒಳ್ಳೆಯದೇ ಆಗುತ್ತೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ದಾನಗಳ ಬಗ್ಗೆ ಹೇಳಲಾಗಿದೆ. ಪುರಾಣ ಗ್ರಂಥಗಳು ದಾನ ಮಾಡುವುದು ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಕೆಲಸ ಎಂದು ಹೇಳುತ್ತವೆ. ಜೊತೆಗೆ ದಾನ ಮಾಡುವುದರಿಂದ ಮುಕ್ತಿ ಪ್ರಾಪ್ತವಾಗುತ್ತದೆ. ಆದರೆ ದಾನ ಮಾಡುವಾಗ ಜನರು ಈ ಕೆಲವು ತಪ್ಪುಗಳನ್ನು ಮಾಡುತ್ತಾರೆ ಹಾಗೆ ಮಾಡಿದರೆ ದಾರಿದ್ರ್ಯಯ ನಿಮ್ಮನ್ನೇ ಹುಡುಕಿಕೊಂಡು ಬರುತ್ತಿದೆ. ದಾನ ಮಾಡುವಾಗ ಯಾವ ತಪ್ಪನ್ನು ಮಾಡಬಾರದು ಗೊತ್ತೇ?
ಧರ್ಮ ಗ್ರಂಥಗಳ ಪ್ರಕಾರ ಈ ಕೆಲವು ವಸ್ತುಗಳನ್ನು ದಾನ ಮಾಡಬಾರದು ಹಾಗೆ ಮಾಡಿದರೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ದಾನವನ್ನು ಯಾರಿಗೆ ಅಗತ್ಯ ಇರುತ್ತದೆಯೋ ಅವರಿಗೆ ಮಾತ್ರ ಮಾಡಬೇಕು ನಿಜವಾದ ಬಡವರಿಗೆ ಮಾತ್ರ ದಾನ ಮಾಡಿದರೆ ಅದರ ಫಲ ನಿಮಗೆ ಸಿಗುತ್ತದೆ. ನೀವು ಪ್ರಾಮಾಣಿಕವಾಗಿ ಸಂಪಾದನೆ ಮಾಡಿದ ಹಣದ ಹತ್ತನೆಯ ಒಂದು ಭಾಗವನ್ನು ದಾನ ಮಾಡಬೇಕು.
ಇನ್ನು ದಾನ ಮಾಡುವಾಗ ಖುಷಿಯಿಂದ ದಾನ ಮಾಡಬೇಕು ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎನ್ನುವ ಮನಸ್ಥಿತಿಯಿಂದ ದಾನ ಮಾಡಬೇಕು. ಇದರಿಂದ ಮಾತ್ರ ಪುಣ್ಯ ಪ್ರಾಪ್ತಿಯಾಗುತ್ತದೆ. ದುರಾಸೆಯಿಂದ ಇಚ್ಛೆ ಇಲ್ಲದ ದಾನ ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಸಾಕಷ್ಟು ವಿಶ್ವಾಸದಿಂದ ಗೌರವದಿಂದ ದಾನ ಮಾಡಬೇಕು. ಊಟ ಮಾಡುವಾಗ ವಸ್ತುವನ್ನು ಕೈಯಲ್ಲಿಯೆ ಕೊಡಿ ವಸ್ತುವನ್ನು ಎಸೆಯಬೇಡಿ.
ಇನ್ನು ಯಾವುದಾದರೂ ವಸ್ತು ಸಮಾಧಾನ ಮಾಡುವಾಗ ಆಯಾ ಗ್ರಂಥದಲ್ಲಿ ಆಚರಣೆಯಲ್ಲಿ ಹೇಗೆ ಹೇಳಿರುತ್ತೋ ಹಾಗೆ ದಾನ ಮಾಡಬೇಕು. ನಿಯಮ ಪಾಲಿಸದೇ ಇದ್ದರೆ ಯಾವುದೇ ಪ್ರಯೋಜನ ಆಗುವುದಿಲ್ಲ.
ಯಾವ ವಸ್ತು ದಾನ ಮಾಡಬಾರದು?
ಇನ್ನು ಯಾವ ವಸ್ತುಗಳನ್ನ ದಾನ ಮಾಡಬಾರದು ಎಂಬುದನ್ನು ನೋಡುವುದಾದರೆ ಪೊರಕೆ. ಇದನ್ನ ಲಕ್ಷ್ಮಿ ದೇವಿಯ ಸಂಕೇತ ಎಂದು ಗುರುತಿಸಲಾಗುತ್ತದೆ ಹಾಗಾಗಿ ಯಾರಿಗಾದರೂ ಪೂರಕ ದಾನ ಮಾಡಿದರೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಆರಂಭವಾಗಬಹುದು.
ಇನ್ನು ಪ್ಲಾಸ್ಟಿಕ್, ಅಲ್ಯೂಮಿನಿಯಂ, ಸ್ಟೀಲ್ ವಸ್ತುಗಳನ್ನು ಎಂದಿಗೂ ದಾನ ಮಾಡಬಾರದು. ಈ ರೀತಿ ಮಾಡಿದರೆ ಖಂಡಿತವಾಗಿಯೂ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಬೆಳ್ಳಿ, ತಾಮ್ರ, ಹಿತ್ತಾಳೆ ಇಂಥ ವಸ್ತುಗಳನ್ನ ತಾನ ಮಾಡಿದರೆ ಒಳ್ಳೆಯದು.
ಯಾವುದನ್ನು ದಾನ ಮಾಡಬೇಕು?
ಇನ್ನು ದಾನಗಳಲ್ಲಿ ಶ್ರೇಷ್ಠವಾದದ್ದು ಅನ್ನದಾನ ಆದರೆ ಹಾಳಾದ ಅನ್ನವನ್ನು ಯಾರಿಗೂ ದಾನ ಮಾಡಬಾರದು ಹೀಗೆ ಮಾಡಿದರೆ ಮನೆಯಲ್ಲಿ ಅನಾರೋಗ್ಯ ಎಂಬುದು ಶಾಶ್ವತವಾಗಿ ನೆಲೆಸುತ್ತದೆ.
ಇನ್ನು ಸಾಸಿವೆ ಮತ್ತು ಎಳ್ಳೆಣ್ಣೆ ದಾನ ಮಾಡುವುದು ಮಂಗಳಕರ ಎಂದು ಪರಿಗಣಿಸಲಾಗಿದೆ ಇದು ಶನಿಗೆ ಪ್ರಿಯಕರವಾದ ಎಣ್ಣೆಯು ಹೌದು. ಆದರೆ ಬಳಸಿದ ಎಣ್ಣೆಯನ್ನು ಎಂದಿಗೂ ದಾನ ಮಾಡಬಾರದು. ಹೀಗೆ ಮಾಡಿದರೆ ನೀವು ಶನಿಯ ಕೋಪಕ್ಕೆ ತುತ್ತಾಗುತ್ತೀರಿ. ಇನ್ನು ಶನಿಗೆ ಶನಿವಾರದಂತೆ ಎಣ್ಣೆಯನ್ನು ದಾನ ಮಾಡಿದರೆ ಉತ್ತಮ.