Kannada Bigg Boss Season 9:  ವಾರಾಂತ್ಯದ ಬಿಗ್ ಎಲಿಮಿನೇಷನ್ಸ್; ಅಮೂಲ್ಯ ಜೊತೆಗೆ ಅರುಣ್ ಸಾಗರ್ ಕೂಡ ಮನೆಗೆ; ಅರುಣ್ ಔಟ್ ಆಗೋದಕ್ಕೆ ಅಸಲಿ ಕಾರಣ ವೋಟಿಂಗ್ ಅಲ್ವಂತೆ ನೋಡಿ!?

Kannada Bigg Boss Season 9:  ಬಿಗ್ ಬಾಸ್ ಸೀಸನ್ 9 ಫೈನಲ್ (Final) ಹಂತ ತಲುಪಿದೆ. ಇನ್ನೇನು ಗ್ರಾಂಡ್ ಫಿನಾಲೆ ನಡೆದು ಟ್ರೋಫಿ ಯಾರ ಕೈಯಲ್ಲಿ ಇರುತ್ತೆ ಅಂತ ನೋಡುವುದಕ್ಕೆ ಜನ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಕಿಚ್ಚ ಸುದೀಪ್ (Kichha Sudeep) ಅವರ ಈ ಸೀಸನ್ ನ ಕೊನೆಯ ಪಂಚಾಯಿತಿ ನಡೆದಿದ್ದು, ರೂಪೇಶ್ ಶೆಟ್ಟಿ (Roopesh Shetty) ಹಾಗೂ ರಾಕೇಶ್ ಅಡಿಗ (Rakrsh Adiga) ಫಿನಾಲೆ ವೀಕ್ ಪ್ರವೇಶಿಸಿದ ಮೊದಲ ಇಬ್ಬರು ಸ್ಪರ್ಧಿಗಳು. ಇನ್ನು ಶನಿವಾರ ಅಮೂಲ್ಯ ಗೌಡ (Amulya Gowda) ಮನೆಯಿಂದ ಹೊರ ನಡೆದಿದ್ದಾರೆ.

ಸಾಮಾನ್ಯವಾಗಿ ಶನಿವಾರ (Saturday)  ವಾರ(Week) ದಲ್ಲಿ ಯಾರು ಸೇವ್ ಆಗುತ್ತಾರೋ ಅವರ ಹೆಸರನ್ನು ಮಾತ್ರ ಕಿಚ್ಚ ಸುದೀಪ್ ಅನೌನ್ಸ್ ಮಾಡುತ್ತಾರೆ ಆದರೆ ಈ ಬಾರಿ ಶನಿವಾರವೇ ಎಲಿಮಿನೇಷನ್ (Elimination)ನಡೆದಿದ್ದು ಮನೆಯವರಿಗೆ ದೊಡ್ಡ ಶಾಕ್ ಆಗಿದೆ. ಅದರಲ್ಲೂ ಅಮೂಲ್ಯ ಅವರ ಎಲಿಮಿನೇಷನ್ ಅನ್ನು ಯಾರು ಊಹಿಸಿರಲಿಲ್ಲ. ಅಮೂಲ್ಯ ಗೌಡ ಮನೆಯಲ್ಲಿ ಆಕ್ಟಿವ್ ಆಗಿ ಇದ್ದ ಸ್ಪರ್ದಿ ಅದರಲ್ಲೂ ಕಳೆದ ವಾರ ಎಲ್ಲರನ್ನು ರಂಜಿಸುತ್ತಾ ಟಾಸ್ಕ್ (Task) ನಲ್ಲಿಯು ಸೂಪರ್ ಆಗಿ ಪರ್ಫಾರ್ಮ್ ಮಾಡಿದ್ದರು. ಇದನ್ನೂ ಓದಿ:Kannada Film: ಶುರುವಾಯಿತು ಯಶ್ ರವರಿಗೆ ಬಾಲಿವುಡ್ ಮೇಲೆ ಅತಿಯಾದ ಪ್ರೀತಿ: ಬಾಲಿವುಡ್ ಬಗ್ಗೆ ಹೇಳಿದ್ದೇನು ಗೊತ್ತೇ?

ಮೂಗಿನ ತುದಿಯಲ್ಲಿ ಕೋಪ ಇರುವ ಅಮೂಲ್ಯ ಗೌಡ ಸ್ವಲ್ಪ ಆಟಿಟ್ಯೂಡ್ ಇರುವ ಸ್ಪರ್ಧಿ. ಆದರೆ ಟಾಸ್ಕ್ ವಿಚಾರಕ್ಕೆ ಬಂದ್ರೆ ಪುರುಷ ಸ್ಪರ್ಧಿಯಂತೆ ಸ್ಥಿರವಾಗಿ ನಿಂತು ಆಟ ಆಡುತ್ತಿದ್ದ ಅಮೂಲ್ಯ ಇದೀಗ ಮನೆಯಿಂದ ಔಟ್ ಆಗಿದ್ದಾರೆ. ಬರೋಬರಿ 92 ದಿನ (92 Days) ಮನೆಯಲ್ಲಿ ಇದ್ದು ಫಿನಾಲೆ ವೀಕ್ ಗೆ ಕಾಲಿಡಬೇಕು ಎನ್ನುವಷ್ಟರಲ್ಲಿ  ಅಮೂಲ್ಯ ಗೌಡ ಎಲಿಮಿನೇಟ್ ಆಗಿರುವುದು ಬೇಸರ ಆಗಿದೆ ಎಂದು ಕಿಚ್ಚ ಸುದೀಪ್ ಬಳಿ ಅಮೂಲ್ಯಾ ಹೇಳಿದ್ದರು.

ಇನ್ನು ಈ ವಾರ ಎರಡು ಎಲಿಮಿನೇಷನ್ ನಡೆಯುತ್ತೆ ಅಂತ ಯಾರು ಊಹಿಸಿರಲಿಲ್ಲ. ಎರಡನೆಯದಾಗಿ ಅರುಣ್ ಸಾಗರ್ ಮನೆಯಿಂದ ಔಟ್ ಆಗಿ ಹೊರ ನಡೆದಿದ್ದಾರೆ. ಗ್ರಾಂಡ್ ಫಿನಾಲೆಗೆ ಅರುಣ ಸಾಗರ್ ಕೂಡ ಇರ್ತಾರೆ ಎಂದು ಭಾವಿಸಿದವರಿಗೆ ಇದು ಶಾಕಿಂಗ್ ನ್ಯೂಸ್ ಆಗಿದೆ. ಇದನ್ನೂ ಓದಿ:Kannada Astrology: ಗುರು ಶನಿ ರಾಹು ಕೇತು ಗ್ರಹಗಳಿಂದ 2023 ಆರಂಭದಲ್ಲಿ ಈ ರಾಶಿಗಳ ಜೀವನದಲ್ಲಿ ಆಗಲಿದೆ ದೊಡ್ಡ ಬದಲಾವಣೆ, ಎಣಿಸಲಿದ್ದೀರಿ ಕಾಂಚಾಣ! ಯಾವುವು ಗೊತ್ತೇ?

ಅರುಣ್ ಸಾಗರ್ ಪ್ರವೀಣರ ಸಾಲಿನಲ್ಲಿ ಮನೆಯನ್ನು ಸೇರಿದವರು. ಈ ಮೊದಲು ಬಿಗ್ ಬಾಸ್ ಸ್ಪರ್ದಿಯಾಗಿ ಫಿನಾಲೆ ವೇದಿಕೆ ಹತ್ತಿದ್ದ ಅರುಣ್ ಈ ಬಾರಿಯೂ ಫಿನಾಲೆ ವೀಕ್ ವರೆಗೂ ತಲುಪಿದ್ದರು. ಇದೀಗ ತಮ್ಮ ಸುಧೀರ್ಘ 92 ದಿನದ ಜರ್ನಿಯನ್ನು ಅಂತ್ಯಗೊಳಿಸಿದ್ದಾರೆ.

ಇತ್ತೀಚಿಗೆ ಅರುಣ್ ಸಾಗರ್ ಕೈಗೆ ಏಟು ಮಾಡಿಕೊಂಡು ಟಾಸ್ಕ್ ವಿಚಾರದಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದರು. ಆದರೆ ಮನೋರಂಜನೆ ವಿಚಾರಕ್ಕೆ ಬಂದ್ರೆ ಇತರ ಎಲ್ಲಾ ಸ್ಪರ್ಧಿಗಳಿಗಿಂತ ಹೆಚ್ಚು ಶ್ರಮಿಸಿದ್ದು ಅರುಣ್ ಸಾಗರ್ ಎನ್ನಬಹುದು. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅರುಣ್ ಸಾಗರ್ ಅತ್ಯುತ್ತಮ ಹಾಸ್ಯ ಕಲಾವಿದ, ನಿರ್ದೇಶಕ, ನಿರೂಪಕ ಎನ್ನುವುದರಲ್ಲಿ ನೋ ಡೌಟ್. ಮಗಳನ್ನ ಆಸ್ಪತ್ರೆಗೆ ಸೇರಿಸಲಾಗಿದ್ದು ಅರುಣ್ ಸಾಗರ್ ಆಸ್ಪತ್ರೆಗೆ ಹೋಗಿ ಮಗಳನ್ನು ನೋಡಿಕೊಂಡು ಬರಲು ಬಿಗ್ ಬಾಸ್ ಅನುವು ಮಾಡಿಕೊಟ್ಟಿದ್ದರು.

ಇನ್ನು ಅಮೂಲ್ಯ ಹಾಗೂ ಅರುಣ್ ಸಾಗರ್ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಜನರಿಗೆ ಮನೋರಂಜನೆ ನೀಡಿದ್ದಾರೆ ಆದರೂ ಇವರಿಬ್ಬರ ಎಲಿಮಿನೇಷನ್ ಸಾಕಷ್ಟು ಜನರಿಗೆ ಶಾಕ್ ನೀಡಿದೆ ಒಟ್ಟಿನಲ್ಲಿ ಫಿನಾಲೆಯಲ್ಲಿ ಅರುಣ್ ಸಾಗರ್ ಇರುತ್ತಾರೆ ಎಂದು ಭಾವಿಸಿದವರಿಗೆ ಇದು ನಿಜಕ್ಕೂ ಆಶ್ಚರ್ಯ ತಂದಿರುವ ಎಲಿಮಿನೇಷನ್. ಅರುಣ್ ಅವರು ಕೈಗೆ ಏಟು ಮಾಡಿಕೊಂಡು ಟಾಸ್ಕ್ ನಲ್ಲಿ ಹಿಂದೆ ಉಳಿದಿದ್ದೇ ಅವರು ಔಟ್ ಆಗಲು ಕಾರಣ ಇರಬಹುದು. ಇನ್ನು ಡಿಸೆಂಬರ್ 31 ಹಾಗೂ ಜನವರಿ ಒಂದನೇ ತಾರೀಖಿನಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವೀಕ್ ಪ್ರವೇಶ ಪಡೆದು, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರುಜಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.

Amulya GowdaArun Sagarbigg boss kannada season 9Eliminationಕನ್ನಡ ಬಿಗ್ ಬಾಸ್ ಸೀಸನ್ 9