Kannada Film: ಈ ಖ್ಯಾತ ನಟಿಯ ತಂಗಿ ಕೂಡ ಸಿನಿಮಾ ರಂಗಕ್ಕೆ ಎಂಟ್ರಿ; ಆದರೆ ಮೊದಲ ಬಾರಿಗೆ ಆಕೆ ನಿರ್ಮಾಪಕರ ಕಣ್ಣಿಗೆ ಬಿದ್ದಾಗ ಆಗಿದ್ದೇನು ಗೊತ್ತಾ!?

Kannada Film: ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಕಲಾವಿದರು (Actress) ಹಲವಾರು ವರ್ಷಗಳಿಂದ ಕಲಾ ಸೇವೆ ಮಾಡುತ್ತಿದ್ದಾರೆ. ಅದರಲ್ಲೂ ಕೆಲವು ಕುಟುಂಬದ ಪ್ರತಿಯೊಬ್ಬ ಸದಸ್ಯರು ಕೂಡ ಶನಿವಾರಂಗದಲ್ಲಿ ಆಕ್ಟಿವ್ ಆಗಿದ್ದಾರೆ ಅದಕ್ಕೆ ದೊಡ್ಮನೆ ರಾಜಕುಮಾರ್ (DR. Rajkumar) ಅವರ ಫ್ಯಾಮಿಲಿ ಸಾಕ್ಷಿ. ಇನ್ನು ಖ್ಯಾತ ನಟಿ ಶೃತಿ (Actress Shruti) ಅವರ ಕುಟುಂಬದ ಕೆಲವು ಸದಸ್ಯರು ಸಿನಿಮಾರಂಗದಲ್ಲಿಯೇ ವೃತ್ತಿ ಜೀವನವನ್ನು ಕಂಡುಕೊಂಡಿದ್ದಾರೆ.

ಖ್ಯಾತ ನಟಿ ಶ್ರುತಿ ಕೃಷ್ಣ (Shruti Krishna) ಅವರು ಇವರಿಗೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ನೆಲೆಸಿರುವ ಶ್ರುತಿ ಇದೀಗ ಸಾಕಷ್ಟು ಪೋಷಕ ಪಾತ್ರಗಳ ಮೂಲಕ ಕೂಡ ಸಿನಿಮಾ ರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಅಷ್ಟೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳು ತೀರ್ಪುಗಾರರಾಗಿಯು ಕೂಡ ಶ್ರುತಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅವರ ಸಹೋದರ ಶರಣ್ (Sharan) ಕೂಡ ಒಬ್ಬ ಹಾಸ್ಯ ಕಲಾವಿದ (Comedy actor) ನಾಗಿ ವೃತ್ತಿ ಜೀವನವನ್ನು ಆರಂಭಿಸಿ ಇದೀಗ ನಾಯಕ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚಿಗಷ್ಟೇ ಶರಣ್ ಅಭಿನಯದ ಗುರು ಶಿಷ್ಯರು ಸಿನಿಮಾ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಸ್ಟಾರ್ ನಟರ ಮಕ್ಕಳು (Star Kid) ಕೂಡ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ಶೃತಿ ಹಾಗೂ ಶರಣ್ ಅವರ ತಂದೆ ಕೃಷ್ಣ (Krishna) ಹಾಗೂ ಅವರ ಪತ್ನಿಯರಾದ ರಾಧಾ ರುಕ್ಮಿಣಿ ಕೂಡ ಸಿನಿಮಾರಂಗದಿಂದ ದೂರ ಉಳಿದವರಲ್ಲ ಅವರು ಕೂಡ ರಂಗಮಂದಿರದಲ್ಲಿಯೇ ತಮ್ಮ ವೃತ್ತಿ ಜೀವನವನ್ನು ಕಂಡುಕೊಂಡವರು. ಇದೀಗ ಶೃತಿ ಅವರ ಕುಟುಂಬದಿಂದ ಮತ್ತೊಂದು ಕಲಾವಿದೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: Kannadathi Serial: ಗುಡ್ ನ್ಯೂಸ್ ಹಾಗೂ ಬ್ಯಾಡ್ ನ್ಯೂಸ್ ಎರಡನ್ನು ಒಟ್ಟೊಟ್ಟಿಗೆ ಕೊಡುತ್ತಿರುವ ‘ಕನ್ನಡತಿ’ ಏನು ಗೊತ್ತೇ?

ಹೌದು ಶೃತಿ ಅವರ ಮೂರನೇ ತಲೆಮಾರಿನ ಈ ಕಲಾವಿದೆ ಈಗಾಗಲೇ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಬೇರೆ ಯಾರು ಅಲ್ಲ ಶರಣ ಅವರ ಕಿರಿಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ (Keerti Krishna). ಅಂದರೆ ನಟಿ ಶ್ರುತಿ ಅವರ ತಂಗಿಯ ಮಗಳು.

ನಟಿ ಶೃತಿ ಹಾಗೂ ರಾಮ್ ಕುಮಾರ್ (Ramkumar) ಅಭಿನಯದ ಶ್ರೀ ನಾಗ ಶಕ್ತಿ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ ಕೀರ್ತಿ ಕೃಷ್ಣ ಇದೀಗ ಸಿನಿಮಾ ಒಂದರ ನಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ. ಕ್ಯೂಟ್ ಆಗಿರುವ ಕೃಷ್ಣ ಅವರನ್ನು ಕನ್ನಡ ಸಿನಿಮಾಕ್ಕೆ ಲಾಂಚ್ ಮಾಡುವುದಕ್ಕೆ ಕೆಲ ನಿರ್ಮಾಪಕರು ಕಾಯ್ತಾ ಇದ್ರು. ಆದರೆ ಆ ಅವಕಾಶ ಸಿಕ್ಕಿದ್ದು ಮಾತ್ರ ಧರಣಿ (Dharani) ಸಿನಿಮಾಕ್ಕೆ. ಕೊನೆಗೂ ಕೀರ್ತಿ ಧರಣಿ ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ. ಈ ಸಿನಿಮಾದಲ್ಲಿ ಮನೋಜ್ ನಾಯಕನಾಗಿ ನಟಿಸುತ್ತಿದ್ದಾರೆ. ಇದನ್ನೂ ಓದಿ: Relationship: ರಜಾ ಇದೆ ಎಂದು ಭಾನುವಾರದಂದು ಪತಿ-ಪತ್ನಿ ಒಂದಾಗಲು ಪ್ರಯತ್ನಿಸಿದರೆ ಆಗುವ ಅಪಾಯ ತಪ್ಪಿಸುವುದಕ್ಕೆ ದೇವರು ಬರಲ್ಲ ಯಾಕೆ ಗೊತ್ತೇ?

ಕೀರ್ತಿ ಅಭಿನಯದ ಧರಣಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ ಹಾಗಾಗಿ ಈ ಸಿನಿಮಾದ ಬಗ್ಗೆ ಕೂಡ ಕ್ಯೂರಿಯಾಸಿಟಿ ಕೂಡ ಜಾಸ್ತಿಯಾಗಿದೆ. ಕೋಳಿ ಪಂದ್ಯದ ಜೊತೆಗೆ ಕಾಡುವ ಕಥೆಗಳನ್ನು ಹೊಂದಿರುವ ಈ ಸಿನಿಮಾ ಕೀರ್ತಿ ಅವರಿಗೆ ದೊಡ್ಡ ಬ್ರೇಕ್ ಕೊಡಲಿದ್ಯಾ, ಕಾದು ನೋಡಬೇಕು. ಇದನ್ನೂ ಓದಿ: Politics: ಕೊನೆಗೂ ದೇಶದ ಈ ಪರಿಸ್ಥಿತಿಗೆ ಅಲ್ಲಾಹ್ ನೇ ಕಾರಣ ಅಂದು ಬಿಟ್ರಲ್ಲ ಸಚಿವರು? ಈಗ ಎಲ್ಲಿದೆ ಮಿತ್ರ ರಾಷ್ಟ್ರಗಳ ಪಡೆ?!

ಕೀರ್ತಿ ಕೃಷ್ಣ, ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಬಿಬಿಎ ಪದವಿ ಮುಗಿಸಿದ್ದಾರೆ. ಇದೀಗ ಉತ್ತಮ ಕಥೆ ಸಿಕ್ರೆ ಸಿನಿಮಾ ರಂಗದಲ್ಲಿ ತಮ್ಮ ವೃತ್ತಿ ಜೀವನ ಮುಂದುವರಿಸುವ ಆಸೆ ಹೊಂದಿದ್ದಾರೆ. ಮೊಟ್ಟ ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸುತ್ತಿರುವ ಕೀರ್ತಿ ಕೃಷ್ಣ ಅವರ ಧರಣಿ ಸಿನಿಮಾದಲ್ಲಿ, ಅರುಣ್ ಸುರೇಶ್ ಅವರ ಛಾಯಾಗ್ರಹಣ, ಅರುಣೋದಯ ಕಥೆ, ಶ್ರೀನಿಧಿ ಡಿ ಎಸ್ ಅವರ ಸಂಭಾಷಣೆ, ಟೈಗರ್ ಶಿವು ಅವರ ಸಾಹಸ ಸಂಯೋಜನೆ, ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಹಾಗೂ ಶಿವಕುಮಾರ್ ಮಾವಲಿ ಅವರ ಸಾಹಿತ್ಯ, ಶಶಾಂಕ್ ಶೇಷಗಿರಿ ಅವರ ಸಂಗೀತ ಇದ್ದು ಸುಧೀರ್ ಶಾನುಭೋಗ್ ಈ ಚಿತ್ರವನ್ನು ನಿರ್ದೇಶಸುತ್ತಿದ್ದಾರೆ. ಇನ್ನು ಈ ಸಿನಿಮಾಕ್ಕೆ ಜಿಕೆ ಉಮೇಶ್ ಕೆ ಗಣೇಶ್ ಐತಾಳ್ ಬಂಡವಾಳ ಹೂಡಿದ್ದು ಟಿಂಕರ್ ಫಿಲಂಸ್ ಲಾಂಛನದಲ್ಲಿ ಸಿನಿಮಾ ಮೂಡಿ ಬರಲಿದೆ.

actressKannada FilmKirti KrishnaSharanShruti Krishnaಕೀರ್ತಿ ಕೃಷ್ಣಶರಣ್ಶೃತಿ