Kannada Serial: ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಧಾರವಾಹಿ ಅಭಿಮಾನಿಗಳ ಫೇವರೆಟ್ ಧಾರವಾಹಿ ಆಗಿರುವಂತಹ ಅಮೃತಧಾರೆ ಧಾರವಾಹಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಮುಖ ಪಾತ್ರದಲ್ಲಿ ರಾಜೇಶ್ ನಟರಂಗ ಹಾಗೂ ಛಾಯಾಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ದಾರವಾಹಿಯಲ್ಲಿ ಸಿಲಿನಲ್ಲಿ ಖ್ಯಾತಿಯ ಆನಂದ್ ರವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವಂತಹ ಆನಂದ್ ರವರು ಅತ್ಯಂತ ಪ್ರತಿಭಾನ್ವಿತ ಕಲಾವಿದರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಈಗ ಅವರದ್ದೇ ಗುಣ ಅವರ ಮಗನಲ್ಲಿ ಕೂಡ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ.
ಆನಂದ್ ಮಗ ದುಶ್ಯಂತ್ ನದ್ದೆ ಎಲ್ಲಾ ಕಡೆ ಚರ್ಚೆ!
ಕಲರ್ಸ್ ಕನ್ನಡ ವಾಹಿನಿಯ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಮೂರನೇ ಅವತರಣಿಕೆಯಲ್ಲಿ ತಮ್ಮ ಅಮ್ಮ ಆಗಿರುವಂತಹ ಚೈತ್ರ ಅವರ ಜೊತೆಗೆ ದುಷ್ಯಂತ್ ಭಾಗವಹಿಸಿದ್ದಾರೆ. ತಮಗೆ ಚಿಕ್ಕನ್ ಅಂದ್ರೆ ತುಂಬಾ ಇಷ್ಟ ಎಂದು ಹೇಳುವ ಮೂಲಕ ಕಾರ್ಯಕ್ರಮದಲ್ಲಿ ಚಿಕನ್ ಸ್ಟಾಪ್ ಎಂಬುದಾಗಿ ಹೆಸರುವಾಸಿಯಾಗಿದ್ದಾರೆ. ಕೇವಲ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ ದುಷ್ಯಂತ್ ಈ ಹಿಂದೆ ಮದಗಜ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಜೊತೆಗೆ ಹಾಗೂ ರಾಜಕುಮಾರ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆಗೆ ಸಮಯ ಕಳೆದಿರುವಂತಹ ವಿಡಿಯೋ ಕೂಡ ವೈರಲ್ ಆಗಿದೆ.
ದಿವ್ಯ ಉರುಡುಗ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ನಿನಗಾಗಿ ಧಾರವಾಹಿಯಲ್ಲಿ ಕೂಡ ನಟಿಸುವಂತಹ ಅವಕಾಶವನ್ನು ಈಗ ದುಷ್ಯಂತ್ ಪಡೆದುಕೊಂಡಿದ್ದಾನೆ. ಅವನ ಜೊತೆಗೆ ಚಿತ್ರೀಕರಣ ಮಾಡೋದೇ ಮಜಾ ಕೊಡುತ್ತೆ ಅನ್ನೋದಾಗಿ ಧಾರವಾಹಿ ನಿರ್ದೇಶಕ ಆಗಿರುವಂತಹ ಸಂಪೃಥ್ವಿ ಕೂಡ ಹೇಳಿಕೊಂಡಿದ್ದಾರೆ.
ಹೊಸ ಧಾರವಾಹಿ ಕಥೆ?
ಈ ಧಾರವಾಹಿಯಲ್ಲಿ ರಚ್ಚು ಎನ್ನುವಂತಹ ಸೂಪರ್ ಸ್ಟಾರ್ ಇರ್ತಾಳೆ ಹಾಗೂ ಹಣಕ್ಕಾಗಿ ತನ್ನ ತಾಯಿಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾಳೆ ಎನ್ನುವಂತಹ ಚಿತ್ರಣವನ್ನು ಹಾಗೂ ಫುಡ್ ಟ್ರಕ್ ನಡೆಸುವಂತಹ ಜೀವನನ ಯಾವ ರೀತಿಯಲ್ಲಿ ಭೇಟಿಯಾಗ್ತಾಳೆ ಅನ್ನುವಂತಹ ಕಥೆಯನ್ನು ತೋರಿಸಲಾಗುತ್ತಿದೆ. ಸೋಮವಾರದಿಂದ ಶುಕ್ರವಾರ ರಾತ್ರಿ 8:00 ಗಂಟೆಗೆ ಇದು ನಿಮ್ಮ ಟಿವಿಯಲ್ಲಿ ಪ್ರಸಾರವಾಗಲಿದೆ.
ಅಪ್ಪ ಅಮೃತಧಾರೆ ಧಾರವಾಹಿಯಲ್ಲಿ ಎಲ್ಲರ ಮನಸ್ಸಿನ ಗೆಲ್ತಾ ಇದ್ರೆ, ಮಗ ನಿನಗಾಗಿ ಧಾರವಾಹಿಯಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವುದಕ್ಕೆ ಪ್ರಾರಂಭ ಮಾಡಿದ್ದಾನೆ ಎಂದು ಹೇಳಬಹುದಾಗಿದೆ. ಅಪ್ಪನಂತೆ ಮಗ ಕೂಡ ಕಿರುತೆರೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿರುವಂತಹ ಪ್ರತಿಭಾನ್ವಿತ ಕಲಾವಿದರ ಸಾಲಿನಲ್ಲಿ ಕಾಣುವಂತಾಗಲಿ ಎನ್ನುವುದಾಗಿ ಹಾರೈಸೋಣ.