Kannada Serials: ಪ್ರತಿದಿನ ಮನೆಯಲ್ಲಿರುವ ವೀಕ್ಷಕರಿಗೆ ಟಿವಿ ನೋಡುವವರಿಗೆ ಮನರಂಜನೆ ಕೊಡುವುದು ಧಾರವಾಹಿಗಳು. ಕನ್ನಡದಲ್ಲಿ ಈಗಾಗಲೇ ಎಲ್ಲಾ ವಾಹಿನಿಗಳಲ್ಲಿ ಸಾಕಷ್ಟು ಸೀರಿಯಲ್ ಗಳು ಮೂಡಿಬರುತ್ತಿದ್ದು, ವೀಕ್ಷಕರು ಎಲ್ಲವನ್ನು ಎಂಜಾಯ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಮನರಂಜನೆ ಕೊಡುವಲ್ಲಿ ಟಾಪ್ ಸ್ಥಾನದಲ್ಲಿ ಇರುವುದು ಜೀಕನ್ನಡ ವಾಹಿನಿ ಮತ್ತು ಕಲರ್ಸ್ ಕನ್ನಡ ವಾಹಿನಿ. ಇದೀಗ ಕಲರ್ಸ್ ಕನ್ನಡ ಚಾನೆಲ್ ಕಿರುತೆರೆ ವೀಕ್ಷಕರಿಗೆ ಒಂದು ಹೊಸ ಸಿಹಿ ಸುದ್ದಿ ಕೊಟ್ಟಿದೆ..
ಅದೇನು ಎಂದರೆ.. ಇನ್ನುಮುಂದೆ ಕಲರ್ಸ್ ಕನ್ನಡ ವಾಹಿನಿಯ ಮೂರು ಧಾರವಾಹಿಗಳು ಶನಿವಾರ ಕೂಡ ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡದಲ್ಲಿ ಒಲವಿನ ನಿಲ್ದಾಣ ಧಾರವಾಹಿ ಶನಿವಾರ ಕೂಡ ಪ್ರಸಾರವಾಗುತ್ತಿದೆ. ಇನ್ನು ಮೂರು ಧಾರವಾಹಿಗಳು ಕೂಡ ಈ ಲಿಸ್ಟ್ ಗೆ ಸೇರಿಕೊಳ್ಳಲಿದ್ದು, ಕೆಂಡಸಂಪಿಗೆ, ಭಾಗ್ಯಲಕ್ಷ್ಮಿ ಮತ್ತು ಲಕ್ಷ್ಮಿ ಬಾರಮ್ಮ ಧಾರವಾಹಿಗಳು ಇನ್ನುಮುಂದೆ ಶನಿವಾರ ಕೂಡ ಪ್ರಸಾರವಾಗುತ್ತದೆ. ಈ ಮೂರು ಧಾರವಾಹಿಗು ಒಳ್ಳೆಯ ಫ್ಯಾನ್ ಬೇಸ್ ಇದೆ, ಭಾಗ್ಯಲಕ್ಷ್ಮಿ ಧಾರವಾಹಿ ಕಲರ್ಸ್ ಕನ್ನಡದ ನಂಬರ್1 ಧಾರವಾಹಿ ಆಗಿದೆ. ಹಾಗಾಗಿ ಮೂರು ಧಾರವಾಹಿಗಳು ಶನಿವಾರವು ಪ್ರಸಾರವಾಗಲಿದೆ.
ಕೆಂಡಸಂಪಿಗೆ ಧಾರವಾಹಿಯಲ್ಲಿ ಈಗ ತೀರ್ಥ ಎಲೆಕ್ಷನ್ ಗೆಲ್ಲುವ ಜವಾಬ್ದಾರಿ ಸುಮನಾ ಮೇಲಿದೆ, ತೀರ್ಥ ಅಪಘಾತದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ, ಅವನನ್ನು ಎಲೆಕ್ಷನ್ ನಲ್ಲಿ ಗೆಲ್ಲಿಸಿದರೆ, ನೀನು ಈ ಮನೆಯ ಸೊಸೆ ಎಂದು ಒಪ್ಪಿಕೊಳ್ಳುವುದಾಗಿ ಸುಮನಾಗೆ ಸವಾಲು ಹಾಕಲಾಗಿದೆ. ಇನ್ನು ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯ ತನ್ನ ತಂಗಿಗೆ ತನ್ನ ಹಾಗೂ ತನ್ನ ತಂಗಿ ಆಸೆಯ ಹಾಗೆ, ಶ್ರೀರಾಮನಂತಹ ಹುಡುಗನನ್ನು ಹುಡುಕಿದ್ದು, ವೈಷ್ಣವ್ ಜೊತೆಗೆ ಲಕ್ಷ್ಮಿ ಮದುವೆ ನಡೆಯುತ್ತಿದೆ, ಭಾಗ್ಯಾಲಕ್ಷ್ಮೀ ಧಾರವಾಹಿಯಲ್ಲಿ ಇನ್ನುಮುಂದೆ ಅಕ್ಕ ಭಾಗ್ಯನ ಕಥೆ, ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ತಂಗಿ ಲಕ್ಷ್ಮಿಯ ಕಥೆ ನಡೆಯುತ್ತಿದೆ. ಇದು ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯತ್ನ ಆಗಿದೆ.