Kannada Story: ಈಗಿನ ಕಾಲದಲ್ಲಿ ಎಲ್ಲರೂ ವಿವಾಹೇತರ ಸಂಬಂಧಗಳ ಕೈಗೆ ಸಿಲುಕುತ್ತಿದ್ದಾರೆ. ಅದರಿಂದ ಯಾರಿಗೂ ಒಳ್ಳೆಯದಾಗುತ್ತಿಲ್ಲ, ಕೆಟ್ಟದನ್ನೇ ಅನುಭವಿಸುತ್ತಿದ್ದಾರೆ. ಆದರೆ ಏನೇ ನಡೆದರು, ಆಸೆ, ಸ್ವಾರ್ಥ ಇದಕ್ಕೆ ಸಿಲುಕಿ ತಮ್ಮ ತನವನ್ನು ತಮ್ಮ ಮನೆಯವರನ್ನು ಸಹ ಮರೆತು ತಾವು ಕೂಡ ತೊಂದರೆಗೆ ಒಳಗಾಗಿ, ಅನಾಹುತಗಳೇ ನಡೆದು ಹೋಗುತ್ತಿದೆ. ಇಂಥದ್ದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ.. ಈ ವಿಚಾರ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ..
ಈ ಘಟನೆ ನಡೆದಿರುವುದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವೈಪಂದಲ್ ಎನ್ನುವ ಗ್ರಾಮದಲ್ಲಿ ವಿನೋದ್ ಹಾಗೂ ಮಲರ್ ಎನ್ನುವ ದಂಪತಿ ಜೀವನ ನಡೆಸುತ್ತಿದ್ದರು. ಇವರಿಬ್ಬರ ಮದುವೆಯಾಗಿ ಹಲವು ವರ್ಷಗಳಾಗಿ, ಒಬ್ಬ ಮಗ ಕೂಡ ಇದ್ದಾನೆ. ಇವರ ದಾಂಪತ್ಯ ಜೀವನ ಕೂಡ ಬಹಳ ಚೆನ್ನಾಗಿ ಸಾಗುತ್ತಿತ್ತು, ಆದರೆ ಎಲ್ಲವೂ ಚೆನ್ನಾಗಿ ನಡೆಯುವಾಗ ಇವರ ಸಂಸಾರದ ಮೇಲೆ ಯಾರ ಕಣ್ಣು ಬಿತ್ತೋ, ವಿನೋದ್ ಇದ್ದಕ್ಕಿದ್ದ ಹಾಗೆ ವಿಧಿವಶರಾದರು. ಮಲರ್ ಸ್ಥಿತಿ ಆಕಾಶಗೆ ಕಳಚಿ ಬಿದ್ದ ಹಾಗೆ ಆಗಿತ್ತು..
ಇದನ್ನು ಓದಿ: ನಿಮ್ಮ ಬಳಿ ಹತ್ತು ರೂಪಾಯಿಗಳ ಹಳೆಯ ನೋಟು ಇದ್ಯಾ? ಮನೆಯಲ್ಲಿಯೇ ಕುಳಿತು ಸೇಲ್ ಮಾಡಿ 25,000ರೂ. ಗಳಿಸಬಹುದು ಹೇಗೆ ಗೊತ್ತೇ?
ಗಂಡನನ್ನಿ ಕಳೆದುಕೊಂಡು, ಮಗುವಿನ ಜವಾಬ್ದಾರಿ ಆಕೆಯ ಮೇಲೆಯೇ ಬಿದ್ದಿತ್ತು. ಆ ನೋವಿನಲ್ಲಿ ಮಲರ್ ಇರುವಾಗಲೇ ಆಕೆಗೆ ಷಣ್ಮುಗಮ್ ಎನ್ನುವ 30 ವರ್ಷದ ವ್ಯಕ್ತಿಯ ಪರಿಚಯವಾಯಿತು. ಆತನಿಗೆ ಮಲರ್ ಮೇಲೆ ಪ್ರೀತಿ ಶುರುವಾಗಿ, ಇಬ್ಬರ ಪರಿಚಯ ವಿವಾಹೇತರ ಸಂಬಂಧವಾಗಿ ಬದಲಾಯಿತು. ಇಬ್ಬರು ಕೂಡ ಕೆಲ ವರ್ಷಗಳ ಕಾಲ, ಯಾರಿಗೂ ತಿಳಿಯದ ಹಾಗೆ ರಾತ್ರಿ ಸಮಯದಲ್ಲಿ ಸಂಸಾರ ನಡೆಸುತ್ತಿದ್ದರು. ಆದರೆ ಒಂದು ದಿನ ಇವರಿಬ್ಬರ ವಿಷಯ ಮನೆಯವರಿಗೆ ಗೊತ್ತಾಯಿತು.
ಮನೆಯಲ್ಲಿ ಎಲ್ಲರಿಗೂ ವಿಷಯ ಗೊತ್ತಾಗುತ್ತಿದ್ದ ಹಾಗೆ, ಮಲರ್ ಗೆ ಚೆನ್ನಾಗಿ ಬೈದು, ಆಕೆ ಇನ್ನುಮುಂದೆ ಷಣ್ಮುಗಂ ಜೊತೆಗೆ ಮಾತನಾಡಬಾರದು ಎಂದು ಕಂಡೀಷನ್ ಹಾಕಿದರು. ಮನೆಯವರಿಗೆ ಹೆದರಿದ ಮಲರ್, ಷಣ್ಮುಗಂನನ್ನು ನಿರ್ಲಕ್ಷಿಸಲು ಶುರು ಮಾಡಿದಳು, ಇದನ್ನು ಸಹಿಸಲು ಷಣ್ಮುಗಂ ಗೆ ಆಗಲಿಲ್ಲ. ಮಲರ್ ಮೇಲಿನ ಕೋಪಕ್ಕೆ ಆಕೆಯನ್ನು ಹೇಗಾದರು ಮಾಡಿ ಮುಗಿಸಿಬಿಡಬೇಕು ಎಂದು ಪ್ಲಾನ್ ಮಾಡಿ ಕೊನೆಗೆ ಮುಗಿಸಿಯೇ ಬಿಟ್ಟಿದ್ದಾನೆ. ನಂತರ ಈ ವಿಚಾರ ಪೊಲೀಸರಿಗೆ ತಿಳಿದು, ಈಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.