Kannada TV Show: ಕನ್ನಡದ ಕಿರುತೆರೆಯ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಲಿಸೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ವಿನಯ್ ಗೌಡ ಈಗ ತಮ್ಮ ಪತ್ನಿಯ ಜೊತೆಗೆ ಮತ್ತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಈಗ ಅವರು ಕಾಣಿಸಿಕೊಳ್ಳುತ್ತಿರುವುದು ರಾಜ ರಾಣಿ ರೀಲೋಡೆಡ್ ಕಾರ್ಯಕ್ರಮಕ್ಕೆ. ಈ ಸಂದರ್ಭದಲ್ಲಿ ವೇದಿಕೆ ಮೇಲೆ ವಿನಯ್ ಗೌಡ ಹಾಗೂ ಅಕ್ಷತಾ ದಂಪತಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅಕ್ಷತಾ ಅವೃತಮ ಗಂಡ ವಿನಯ್ ಗೌಡ ಅವರ ಬಗ್ಗೆ ಕೆಲವೊಂದು ಮಾತುಗಳನ್ನು ಆಡಿರೋದು ಕೂಡ ಎಲ್ಲರ ಗಮನವನ್ನು ಸೆಳೆದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ವಿನಯ್ ಗೌಡ ಅವರ ಬಗ್ಗೆ ಅಕ್ಷತ ಹೇಳಿದ್ದೇನು?
ನಿರೂಪಕಿ ಅನುಪಮಾ ಅವರು ವಿನಯ್ ಗೌಡ ಅವರ ಬಗ್ಗೆ ಅಕ್ಷತಾ ಅವರ ಬಳಿ ಪ್ರಶ್ನೆ ಕೇಳುತ್ತ ಬಿಗ್ ಬಾಸ್ ಮನೆಯಲ್ಲಿ ಆನೆಯಾಗಿ ಇದ್ರಲ್ಲ ಮನೆಯಲ್ಲೂ ಕೂಡ ಆನೆನ ಎಂಬುದಾಗಿ ಕೇಳಿದಾಗ ಮನೆಯಲ್ಲಿ ಆನೆ ಗೀನೆ ಏನೂ ಇಲ್ಲ ಎಂಬುದಾಗಿ ವಿನಯ್ ಗೌಡ ಹೇಳಿದ್ದಾರೆ. ಇದಕ್ಕೆ ಅಕ್ಷತಾ ಅವರು ಅವರನ್ನು ಬೆಂಡೆತ್ತೋಕ್ಕೆ ನಾನು ಬೇಕೇ ಬೇಕು ಎಂಬುದಾಗಿ ಹೇಳಿದ್ದಾರೆ.
ಇನ್ನು ವಿನಯ್ ಗೌಡ ಅವರ ಬಗ್ಗೆ ಅಕ್ಷತಾ ಅವರು ಬಳಿ ಮನೆ ಕೆಲಸ ಮಾಡೋದಕ್ಕೆ ಹೇಗೆ ಎಂಬುದಾಗಿ ಕೇಳಿದಾಗ ಮನೆಯಲ್ಲಿ ಏನು ಕೆಲಸ ಮಾಡುವುದಿಲ್ಲ ಜೀರೋ ಎಂಬುದಾಗಿ ಅಕ್ಷತಾ ಹೇಳಿದ್ದಾರೆ. ಇದೇ ರೀತಿ ಒಂದಾದ ಮೇಲೆ ಒಂದರಂತೆ ತಮ್ಮ ಗಂಡನ ಬಗ್ಗೆ ರಹಸ್ಯಗಳನ್ನು ಹೇಳುತ್ತಾ ಹೋಗ್ತಾ ಇದ್ದಾರೆ. ಕಾರ್ಯಕ್ರಮದ ಪ್ರೊಮೋ ಸಖತ್ ಆಗಿ ಮೂಡಿ ಬಂದಿದೆ ಎಂಬುದಾಗಿ ಪ್ರೇಕ್ಷಕರು ಹೇಳ್ತಾ ಇದ್ದಾರೆ. ಕಾರ್ಯಕ್ರಮ ಇದೆ ಜೂನ್ 8ರಂದು ರಾತ್ರಿ 7:30ಕ್ಕೆ ಪ್ರಾರಂಭವಾಗಲಿದೆ.
ರಾಜ ರಾಣಿ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಕೂಡ ನಿರೂಪಕಿಯಾಗಿ ಅನುಪಮ ಹಾಗೂ ತೀರ್ಪುಗಾರರಾಗಿ ಸೃಜನ್ ಲೋಕೇಶ್ ಮತ್ತು ತಾರಾ ಅವರು ಕಾಣಿಸಿಕೊಳ್ಳುತ್ತಿದ್ದರು. ಈಗ ಕೂಡ ಅವರೇ ಇರ್ತಾರೆ ಆದರೆ ಅವರ ಜೊತೆಗೆ ಮತ್ತೊಬ್ಬ ಕನ್ನಡದ ನಟಿಯಾಗಿರುವಂತಹ ಅದಿತಿ ಪ್ರಭುದೇವ ಅವರು ಕೂಡ ಮೊತ್ತ ಮೊದಲ ಬಾರಿಗೆ ಈ ಕಾರ್ಯಕ್ರಮದ ಮೂಲಕ ಕಿರುತೆರೆಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್ ಗಳಂತೆ ಈ ಬಾರಿ ಕೂಡ ರಾಜ ರಾಣಿ ಕಾರ್ಯಕ್ರಮ ಒಳ್ಳೆಯ ಯಶಸ್ಸನ್ನು ಪಡೆದುಕೊಳ್ಳಬಹುದು ಎಂಬುದನ್ನು ಅಂದಾಜಿಸಲಾಗಿದೆ.
ಬಿಗ್ ಬಾಸ್ ನಲ್ಲಿ ಪಕ್ಕ ಮಾಸ್ ಆಗಿ ಕಾಣಿಸಿಕೊಂಡಿದ್ದ ವಿನಯ್ ಗೌಡ ಈ ಕಾರ್ಯಕ್ರಮದಲ್ಲಿ ಹೆಂಡತಿಯ ಜೊತೆಗೆ ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದನ್ನ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಾ ಇದ್ದಾರೆ.